ಜಿಲ್ಲಾಧಿಕಾರಿ ತಂಡದಿಂದ ಮತ್ತೆ ಪರಿಶೀಲನೆ
Team Udayavani, Sep 15, 2018, 11:16 AM IST
ವಿಟ್ಲಪಟ್ನೂರು: ಇಲ್ಲಿನ ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ಅಡಿಕೆ ಬೆಳೆಗಾರರು ಕೊಳೆರೋಗದಿಂದ ಕಂಗೆಟ್ಟು ಹೋಗಿರುವ ಬಗ್ಗೆ ಅತೀ ಹೆಚ್ಚು ಲಿಖಿತ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿದ್ದಲ್ಲದೆ, ಕೇಂದ್ರ ನಷ್ಟ ಪರಿಹಾರ ಅಧ್ಯಯನ ತಂಡದ ಜತೆಗೆ ಗುರುವಾರ ಮತ್ತೆ ಮೂರ್ಜೆಬೆಟ್ಟು ಪರಿಸರದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಕೇಂದ್ರದ ಎನ್.ಡಿ.ಆರ್.ಎಫ್. ತಂಡದ ಭರ್ತೇಂದು ಕುಮಾರ್ ಸಿಂಗ್, ಮಾಣಿಕ್ ಚಂದ್ರ ಪಂಡಿತ್, ಸದಾನಂದ ಬಾಬು ಅವರ ತಂಡ ಅಡಿಕೆ, ಕಾಳುಮೆಣಸು ಕೊಳೆರೋಗದಿಂದ ಕಂಗೆಟ್ಟ ರೈತರ ಮನೆಗೆ ಭೇಟಿ ನೀಡಿತು. ಮೂರ್ಜೆಬೆಟ್ಟು ಅಣ್ಣಪ್ಪ ರೈ 3.36 ಎಕ್ರೆ, ರಮಾನಾಥ ಅಡಪ 2.53 ಎಕ್ರೆ, ವಿಶ್ವನಾಥ ಅಡಪ 2.1 ಎಕ್ರೆ, ಶ್ರೀಪ್ರಕಾಶ ಕುಕ್ಕಿಲ 6.1 ಎಕ್ರೆ, ಗೋಪಾಲಕೃಷ್ಣ ಶೆಟ್ಟಿ ಬಿಕನಾಜೆ 1.5 ಎಕ್ರೆ, ಸುಧೇಶ್ ಭಂಡಾರಿ ಎರ್ಮೆನಿಲೆ 2.23 ಎಕ್ರೆ ಸಹಿತ ಹಲವು ಮಂದಿ ರೈತರು ತಮ್ಮ ಶೇ.8 0ರಷ್ಟು ಬೆಳೆ ನಷ್ಟ ಹೊಂದಿದ ಬಗ್ಗೆ ವಿವರಿಸಿದರು.
ತೋಟಗಾರಿಕೆ ಇಲಾಖೆ ಡಿಡಿ ಎಚ್. ಆರ್. ನಾಯಕ್, ಎಡಿಸಿ ಕುಮಾರ್, ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಸಂದೇಶ್ ಶೆಟ್ಟಿ ಬಿಕನಾಜೆ, ಅರವಿಂದ ರೈ ಮೂರ್ಜೆಬೆಟ್ಟು ಮತ್ತಿತರರಿದ್ದರು.
ವರದಿ ಸಿಎಂಗೆ
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಸೆ. 14ಕ್ಕೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯಲಿದ್ದು, ಈ ಸಂದರ್ಭ ಬೇರೆ ಬೇರೆ ಕಡೆ ಭೇಟಿ ನೀಡಿ, ಸಂಗ್ರಹಿಸಿದ ವರದಿಯನ್ನು ಈ ತಂಡ ಸಲ್ಲಿಸಲಿದೆ. ಆ ಸಭೆಯಲ್ಲಿ ಆಗುವ ನಿರ್ಣಯದ ಪ್ರಕಾರ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುತ್ತೇವೆ. ಪರಿಹಾರದ ಕುರಿತ ಅರ್ಜಿಗಳನ್ನು ಸಂಗ್ರಹಿಸುತ್ತಿದ್ದು, ಸೆ. 15ರವರೆಗೆ ಅರ್ಜಿ ನೀಡಲು ಅವಕಾಶವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ