ಮುದ್ದಾಡಿ-ಆರಂಬೋಡಿ ರಸ್ತೆ ನಡೆದಾಡಲೂ ಅಯೋಗ್ಯ


Team Udayavani, Jun 25, 2018, 12:44 PM IST

25-june-7.jpg

ವೇಣೂರು: ಬೆಳ್ತಂಗಡಿ ತಾ|ನ ಮುದ್ದಾಡಿಯಿಂದ ಬಂಟ್ವಾಳ ತಾ|ನ ಸಿದ್ದಕಟ್ಟೆಯನ್ನು ಸಂಪರ್ಕಿಸುವ ರಸ್ತೆಯ ಮುದ್ದಾಡಿಯಿಂದ ಆರಂಬೋಡಿವರೆಗೆ ನಡೆದಾಡಲೂ ಅಯೋಗ್ಯವಾಗಿದೆ. ಕಿತ್ತು ಹೋಗಿರುವ ಡಾಮರು, ಗುಂಡಿಗಳಿಂದ ಕೂಡಿರುವ ರಸ್ತೆಯೀಗ ಕೆಸರುಮಯ ವಾಗಿದ್ದು, ಜನತೆ ಪರದಾಡುವಂತಾಗಿದೆ.

ಬಹುಕಾಲದ ಬೇಡಿಕೆ
ಮುದ್ದಾಡಿ-ಆರಂಬೋಡಿ ರಸ್ತೆ ಅಭಿವೃದ್ಧಿ ಬಹುವರ್ಷಗಳ ಹಿಂದಿನ ಬೇಡಿಕೆ. ಶಾಸಕರಾಗಿದ್ದ ಕೆ. ವಸಂತ ಬಂಗೇರ, ಸಂಸದ ನಳಿನ್‌ಕುಮಾರ್‌ ಕಟೀಲು, ಜಿ.ಪಂ.ಗೆ ಸ್ಥಳೀಯ ಜನಪ್ರತಿನಿಧಿಗಳು, ನಾಗರಿಕರು ಹಲವು ಬೇಡಿಕೆ ಸಲ್ಲಿಸಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಆಗಲೇ ಇಲ್ಲ. ಬಜಿರೆ, ಮಿಯಲಾಜೆ, ಗುಂಡೂರಿ, ಆರಂಬೋಡಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಬಂಟ್ವಾಳ ತಾಲೂಕಿನ, ವೇಣೂರಿನ ಶಾಲಾ ಕಾಲೇಜುಗಳಿಗೆ ತೆರಳಲು ಬಸ್ಸನ್ನು ಆಶ್ರಯಿಸುತ್ತಾರೆ. ಬಸ್‌ ಕೈಕೊಟ್ಟರೆ ಇತರ ವಾಹನ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಿದೆ.

ಡಾಮರು ಕಾಣದೆ ದಶಕ
ಈ ರಸ್ತೆ ಡಾಮರು ಕಾಣದೆ ಸುಮಾರು 18 ವರ್ಷಗಳೇ ಕಳೆದಿದೆ. ಈ ರಸ್ತೆಗೆ ತೇಪೆ ಕಾರ್ಯ ಬಿಟ್ಟರೆ ಪೂರ್ಣ ಡಾಮರು ಹಾಕಿಲ್ಲ. 2012ರ ವೇಣೂರು ಮಹಾ ಮಸ್ತಕಾಭಿಷೇಕದ ಸಂದರ್ಭ 40 ಲಕ್ಷ ರೂ. ಅನುದಾನದಡಿ ಹಾಗೂ 2016ರಲ್ಲಿ ಜಿ.ಪಂ. ಅನುದಾನದಡಿ ಕಾಂಕ್ರೀಟ್‌ ಹಾಗೂ ತೇಪೆ ಕಾರ್ಯ ನಡೆಸಲಾಗಿತ್ತು. ಆದರೆ ಇದೀಗ ಡಾಮರು ಸಂಪೂರ್ಣ ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿವೆ. ರಸ್ತೆಯಲ್ಲೇ ತೋಡು ನಿರ್ಮಾಣ ಆಗಿ ಸಂಚಾರ ದುಸ್ತರವಾಗಿದೆ.

ಚರಂಡಿ ಅವ್ಯವಸ್ಥೆ
ರಸ್ತೆಯ ಇಕ್ಕೆಲಗಳಲ್ಲಿ ಕೆಲವಡೆಗಳಲ್ಲಿ ಚರಂಡಿಯೇ ಇಲ್ಲ. ಕೆಲವೆಡೆ ಇದ್ದರೂ ನಿರ್ವಹಣೆಯಿಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದು ರಸ್ತೆ ಹಾಳಾಗಲು ಪ್ರಮುಖ ಕಾರಣ. ಪ್ರತೀ ಮಳೆಗಾಲದ ಪ್ರಾರಂಭದಲ್ಲಿ ರಸ್ತೆ ಇಕ್ಕೆಲಗಳ ಚರಂಡಿ ದುರಸ್ತಿಯನ್ನು ಆಯಾ ಪಂಚಾಯತ್‌ ಗಳು ನಿರ್ವಹಿಸಬೇಕೆಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

ಮೇಲ್ದರ್ಜೆ ಉಲ್ಲೇಖವಿಲ್ಲ
ಶಾಸಕ ಪೂಂಜ ಅವರಿಗೆ ಆರಂಬೋಡಿಯಲ್ಲಿ ನಡೆದ ಅಭಿನಂದನ ಸಮಾರಂಭದಲ್ಲಿ ‘ಕಳೆದ 10 ವರ್ಷಗಳಿಂದ ಮುದ್ದಾಡಿ-ಆರಂಬೋಡಿ ರಸ್ತೆ ನಿರ್ಲಕ್ಷ್ಯಕ್ಕೊಳಗಾಗಿದೆ. ರಸ್ತೆ ದುರಸ್ತಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಇದೀಗ ಮೇಲ್ದರ್ಜೆಗೇರಿಸಿ ಲೋಕೋ ಪಯೋಗಿ ಸಚಿವ ರೇವಣ್ಣರಿಗೆ ನೀಡಿದ ಮನವಿನಲ್ಲಿ ಮುದ್ದಾಡಿ- ಆರಂಬೋಡಿ ರಸ್ತೆಯ ಉಲ್ಲೇಖವೇ ಇಲ್ಲ.

ಜಿ.ಪಂ. ಅನುದಾನವಿಲ್ಲ
ಮುದ್ದಾಡಿ-ಆರಂಬೋಡಿ ರಸ್ತೆಗೆ ಮರು ಡಾಮರು ಮಾಡುವಷ್ಟು ಅನುದಾನ ಜಿ.ಪಂ.ನಲ್ಲಿ ಲಭಿಸುತ್ತಿಲ್ಲ. ಆದರೆ ಎರಡು ಬಾರಿ ಜಿ.ಪಂ. ಅನುದಾನದಡಿ ದುರಸ್ತಿ ನಡೆಸಲಾಗಿದೆ. ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಹಿಂದಿನ ಶಾಸಕ ಕೆ. ವಸಂತ ಬಂಗೇರರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರು.
– ಪಿ. ಧರಣೇಂದ್ರ ಕುಮಾರ್‌
ಜಿ.ಪಂ. ಸದಸ್ಯ, ನಾರಾವಿ

ಗ್ರಾಪಂ ನಿರ್ಣಯ ಕೈಗೊಳ್ಳಲಿದೆ
ಲೋಕೋಪಯೋಗಿ ಸಚಿವರಿಗೆ ಶಾಸಕರು ನೀಡಿದ ಮನವಿಯಲ್ಲಿ ಮುದ್ದಾಡಿ-ಆರಂಬೋಡಿ ರಸ್ತೆಯ ಉಲ್ಲೇಖ ಇಲ್ಲ ನಿಜ. ಆದರೆ ಯಾವುದಾದರೊಂದು ಅನುದಾನದಿಂದ ದುರಸ್ತಿಗೆ ಒತ್ತಾಯಿಸಲಾಗುವುದು. ಈ ಬಗ್ಗೆ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರಿಗೆ ತಲುಪಿಸಲಾಗುವುದು.
– ಪ್ರಭಾಕರ ಎಚ್‌.
ಅಧ್ಯಕ್ಷರು, ಆರಂಬೋಡಿ ಗ್ರಾ.ಪಂ.

ರಸ್ತೆಯಲ್ಲೇ ಚಿಮ್ಮುತ್ತಿದೆ ಕುಡಿಯುವ ನೀರು!
ಹೊಂಡಬಿದ್ದ ರಸ್ತೆ ರಸ್ತೆಯಲ್ಲಿ ಕಳೆದ ಮೂರು ದಿನಗಳಿಂದ ಮಿಯಲಾಜೆ ಬಳಿ ಕುಡಿಯುವ ನೀರಿನ ಸಂಪರ್ಕದ ಪೈಪ್‌ ಒಡೆದು ನೀರು ಚಿಮ್ಮುತ್ತಿದ್ದರೂ ಸಂಬಂಧಿತ ಗ್ರಾ.ಪಂ. ದುರಸ್ತಿ ಕಾರ್ಯ ನಡೆಸಿಲ್ಲ. ರಸ್ತೆಯ ಮಧ್ಯ ಭಾಗದಲ್ಲಿ ಪೈಪ್‌ ಒಡೆದಿರುವ ಕಾರಣ ರಾತ್ರಿ ವೇಳೆಯಲ್ಲಿ ದುರಸ್ತಿ ಕಾರ್ಯ ನಡೆಸುವುದಾಗಿ ಪಂಚಾಯತ್‌ ತಿಳಿಸಿತ್ತು. ಆದರೆ ಎರಡು ರಾತ್ರಿ ಕಳೆದರೂ ವೇಣೂರು ಪಂಚಾಯತ್‌ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪವಿದೆ.

ಪದ್ಮನಾಭ ವೇಣೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.