ಪುಳಿತ್ತಡಿ ಶಾಲೆಯಲ್ಲಿ ಛಾವಣಿ ಕುಸಿಯುವ ಆತಂಕ
Team Udayavani, Jun 4, 2018, 2:22 PM IST
ಉಪ್ಪಿನಂಗಡಿ : ಅಪಾಯದ ಅಂಚಿನಲ್ಲಿರುವ ಸರಕಾರಿ ಶಾಲೆ. ಮಕ್ಕಳ ಹೆತ್ತವರು ಬದಲಿ ಶಾಲೆಯ ಹುಡುಕಾಟ ನಡೆಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಪುಳಿತ್ತಡಿ ಸರಕಾರಿ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಛಾವಣಿ ಕುಸಿಯುವ ಭೀತಿಯಲ್ಲಿದ್ದರೂ ಶಿಕ್ಷಣ ಇಲಾಖೆಯಿಂದ ಸ್ಪಂದನೆ ದೊರೆತಿಲ್ಲ ಎಂಬುದಾಗಿ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ. ಈ ಶಾಲೆಗೆ 58 ವರ್ಷಗಳಿಗೂ ಮಿಕ್ಕ ಇತಿಹಾಸವಿದ್ದರೂ ಆರಂಭದ ದಿನದಿಂದ ಈ ತನಕ ಸರಕಾರದಿಂದ ನಯಾ ಪೈಸೆ ದುರಸ್ತಿಗೆ ವಿನಿಯೋಗಿಸದಿರುವುದು ವಿಪರ್ಯಾಸವಾಗಿದೆ.
ಗ್ರಾಮಾಂತರ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಒಂದರಿಂದ ಒಳಗೊಂಡು ಛಾವಣಿ ಕುಸಿತ ಕಂಡು ಶಾಲೆಗೆ ಕಳುಹಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇಷ್ಟಾದರೂ ಶಿಕ್ಷಣ ಇಲಾಖೆಯಿಂದ ಶಾಲೆ ಭೇಟಿ ನೀಡಿ ಪರಿಶೀಲನೆ ನಡೆಸುವ ಗೋಜಿಗೂ ಅಧಿಕಾರಿಗಳ ಆಸಕ್ತಿ ವಹಿಸಿಲ್ಲ. ಈ ಶಾಲಾ ದುಃಸ್ಥಿತಿ ಕಟ್ಟಡದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ನ ಗ್ರಾಮ ಸಭೆಯು ಇದೇ ಕೊಠಡಿಯಲ್ಲಿ ನಡೆದು ಗ್ರಾಮಸ್ಥರೇ ಛಾವಣಿಯ ಕುಸಿಯುವ ಭೀತಿಯನ್ನು ತೋರಿಸಿ ತರಾಟೆ ತೆಗೆದುಕೊಂಡ ಪ್ರಸಂಗ ಈ ಹಿಂದೆ ನಡೆದಿತ್ತು.
ಮಕ್ಕಳ ಸಂಖ್ಯೆಯೂ ಇಳಿಮುಖ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ವೆ ಶಾಲಾ ಛಾವಣಿ ಕುಸಿಯುವ ಭೀತಿ ಇದಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಈ ಶಾಲೆಯಲ್ಲಿ ಕಲಿಯುವ ಮಕ್ಕಳ ಸ್ಥಿತಿ ಅತಂತ್ರವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು ಅನುದಾನ ಒದಗಿಸಲು ಮೀನಮೇಷ ಎಣಿಸಿದಲ್ಲಿ ಅಪಾಯಕ್ಕೆ ಹಾದಿಕೊಟ್ಟಂತಾಗುತ್ತದೆ ಎಂದು ಸ್ಥಳೀಯರು ಬಣ್ಣಿಸಿದ್ದಾರೆ.
ಭರವಸೆ ಮಾತ್ರ
ಗ್ರಾಮಸ್ಥರು ಈಗಾಗಲೇ ತಾಲೂಕು ಶಿಕ್ಷಣ ಇಲಾಖೆಗೆ ಜಿ.ಪಂ., ತಾ.ಪಂ. ಸದಸ್ಯರಿಗೂ ಅನುದಾನ ಒದಗಿಸುವಂತೆ ಮನವಿ ಮಾಡಿದರೂ ಶಿಕ್ಷಣ ಇಲಾಖೆ ಈ ಮನವಿಗೆ ತೆಪ್ಪಗಿದ್ದರೆ ಜಿ.ಪಂ. ಸದಸ್ಯರು ರಿಪೇರಿ ತಮ್ಮಲ್ಲಿ ಈ ಬಾರಿ ಅನುದಾನವಿಲ್ಲವೆಂದಿದ್ದು, ತಾ.ಪಂ. ಸದಸ್ಯರು ಅನುದಾನ ಒದಗಿಸುವ ಭರವಸೆಗಷ್ಟೆ ಸೀಮಿತವಾಗಿದೆ .
ಕಾದು ನೋಡುವ ತಂತ್ರ
ಸಣ್ಣಪುಟ್ಟ ಅವ್ಯವಸ್ಥೆಗಳನ್ನು ಸರಿಪಡಿಸಲು ಶಾಲಾಭಿವೃದ್ಧಿ ಸಮಿತಿ ಸದಸ್ಯರು ವಂತಿಗೆ ಸಂಗ್ರಹಿಸಲು ಸಾಧ್ಯ. ಆದರೆ ಛಾವಣಿ ಕುಸಿದು ಅನುದಾನಕ್ಕೆ ಪತ್ರ ಬರೆದು ವರ್ಷ ಕಾದರೂ ಯಾವುದೇ ಮಂಜೂರಾತಿಯ ಭರವಸೆ ಸಿಗದೇ ಕಾದು ನೋಡುವ ತಂತ್ರವಾಗಿದೆ. ಒಂದೊಮ್ಮೆ ಅಪಾಯ ಸಂಭವಿಸಿದರೆ ಅಧಿಕಾರಿಗಳೇ ಹೊಣೆಗಾರರಾಗುವುದರಲ್ಲಿ ಸಂಶಯವಿಲ್ಲ.
– ಲಕ್ಷ್ಮಣ
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ
ಎಂ.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ