ಕೆ.ರಾಮ ಭಟ್‌ ಅವರ ಪತ್ನಿ ಸವಿತಾ ಆರ್‌. ಭಟ್‌ ಸ್ಮರಿಸಿಕೊಳ್ಳುತ್ತಾರೆ


Team Udayavani, Apr 7, 2018, 2:02 PM IST

7-April-13.jpg

ಪುತ್ತೂರು: 1975ರಿಂದ 77ರ ವರೆಗೆ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ ದಿನಗಳು. ಸಂಘಟನೆ ಕೆಲಸದಲ್ಲಿ ನಿರತರಾಗಿದ್ದ ಉರಿಮಜಲು ರಾಮ ಭಟ್‌ ಭೂಗತರಾಗುವ ಅನಿವಾರ್ಯ ಎದುರಾಯಿತು. ಆಗ ಮನೆಗೆ ಬರುತ್ತಿದ್ದ ಪೊಲೀಸರು, ಸಿಐಡಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ರಾಮ ಭಟ್‌ ಅವರ ಪತ್ನಿ ಕೆ. ಸವಿತಾ ಆರ್‌. ಭಟ್‌ ನೆನಪು ಬಿಚ್ಚಿಟ್ಟರು.

ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದ 21 ತಿಂಗಳು ಭಯ ಹುಟ್ಟಿಸುವಂತಿತ್ತು. ಕೂಡು ಕುಟುಂಬದಲ್ಲಿ ಬದುಕುತ್ತಿದ್ದ ನಾವು, ಪುತ್ತೂರು ಪೇಟೆಯ ಕೊಂಬೆಟ್ಟು ಬಳಿ ಮನೆ ಮಾಡಿದ್ದೆವು. ಮನೆಯಲ್ಲಿ ನಾನು, ಮೂವರು ಮಕ್ಕಳು, ಭಾವನ ಇನ್ನಿಬ್ಬರು ಮಕ್ಕಳಷ್ಟೇ ಈ ಸಂದರ್ಭ ಇದ್ದೆವು. ಮನೆಗೆ ನೆಂಟರು, ನೆರೆಹೊರೆಯವರು ಬರುತ್ತಿರಲಿಲ್ಲ. ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಾರೆ ಎಂಬ ಭಯ. ಮನೆ ನಿರ್ವಹಣೆ ಜವಾಬ್ದಾರಿ ರಾಮ ಭಟ್‌ ಅವರ ಅಣ್ಣ ನಾರಾಯಣ ಭಟ್‌ ಅವರ ಹೆಗಲ ಮೇಲಿತ್ತು.

ಪ್ರತಿದಿನ ಮನೆಗೆ ಬರುತ್ತಿದ್ದ ಪೊಲೀಸರು, ಸಿಐಡಿ ತಂಡ ನಮ್ಮನ್ನು ಪರಿಪರಿಯಾಗಿ ವಿಚಾರಣೆ ನಡೆಸುತ್ತಿದ್ದರು. ಇದೇ ದೊಡ್ಡ ಮಾನಸಿಕ ಹಿಂಸೆ. ಮಕ್ಕಳೆಲ್ಲರೂ ಶಾಲೆಗಳಿಗೆ ಹೋಗುವ ಹಗಲಿನ ಸಂದರ್ಭ, ಮನೆಯಲ್ಲಿ ನಾನೊಬ್ಬಳೇ ಇರುತ್ತಿದೆ. ನನ್ನ ಭಯ ಮೇರೆ ಮೀರಿತ್ತು. ಭೂಗತರಾಗಿದ್ದ ರಾಮ ಭಟ್‌ ಅವರ ತಂಡ ಪುತ್ತೂರು ಪೇಟೆಯಲ್ಲಿ ಒಂದು ದಿನ ಮೆರವಣಿಗೆ ಹೊರಟರು. ಮೊದಲೇ ಕಾದು ಕುಳಿತಿದ್ದ ಪೊಲೀಸರು ಅವರನ್ನು ಮೀಸಾದಡಿ ಬಂಧಿಸಿದರು. ಬಳ್ಳಾರಿ ಜೈಲಿಗೆ ತಳ್ಳಲಾಯಿತು. ಸುಮಾರು 1 ವರ್ಷ 3 ತಿಂಗಳು ಜೈಲಿನಲ್ಲಿದ್ದರು.

ಶಾಸಕರಾಗುವ ಮೊದಲು ಹಾಗೂ ಬಳಿಕ ಎಂದೂ ಮನೆಗೆ ಸಮಯ ಕೊಟ್ಟವರಲ್ಲ. ಇಡೀ ದಿನ ಸಾಮಾಜಿಕ ಕಳಕಳಿಯ ಕೆಲಸಗಳಲ್ಲೇ ಭಾಗಿಯಾಗಿದ್ದರು. ವಿವೇಕಾನಂದ ಕಾಲೇಜು ಆರಂಭಕ್ಕೆ ತುಂಬಾ ಓಡಾಟ ನಡೆಸಿದ್ದಾರೆ. ಇವರ ಎಲ್ಲ ಕೆಲಸಕ್ಕೂ ತುಂಬು ಪ್ರೋತ್ಸಾಹ ನೀಡಿದವರು ಅವರ ಅಣ್ಣ ನಾರಾಯಣ ಭಟ್‌. ತಂದೆ ಶಂಕರ ಭಟ್‌ ಕೂಡು ಕುಟುಂಬದ ಯಜಮಾನ. ತಾಯಿ ಗೌರಮ್ಮ ಗೃಹಿಣಿ. ಭಾವ ಧೈರ್ಯ ನೀಡದೆ ಇರುತ್ತಿದ್ದರೆ, ರಾಮ ಭಟ್‌ ಮುಂದೆ ಬರಲು ಸಾಧ್ಯ ಆಗುತ್ತಿರಲಿಲ್ಲವೇನೋ.

ಉರಿಮಜಲಿನಲ್ಲಿ ಕೂಡು ಕುಟುಂಬದಲ್ಲಿ ವಾಸವಾಗಿದ್ದೆವು. ರಾಮ ಭಟ್‌ ಅವರ ದೊಡ್ಡಪ್ಪನ ಮಗ ವೆಂಕಪ್ಪಯ್ಯ ಕಾಂಗ್ರೆಸ್‌ನ ದೊಡ್ಡ ನಾಯಕ. ಆಗ ಜನ ಸಂಘ ಬೆಳೆದಿರಲಿಲ್ಲ. ಗಾಂಧಿ ಕೊಂದ ಪಕ್ಷದವರು ಎಂದೇ ಮೂದಲಿಸುತ್ತಿದ್ದರು. ಸರಿಯಾದ ಪಕ್ಷವೇ ಅಲ್ಲ. ಕೆಲಸಕ್ಕೆ ಬಾರದವರು ಎನ್ನುತ್ತಿದ್ದರು. ಯಾರೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಆದ್ದರಿಂದ ರಾಮ ಭಟ್‌ ಅವರ ಕೆಲಸಕ್ಕೆ ಎಲ್ಲೂ ಅಡ್ಡಿಯಾಗಿಲ್ಲ. ರಾಮ ಭಟ್‌ ಬಳಿಕವೇ ಮನೆಯಲ್ಲಿ ಜನಸಂಘ, ಬಿಜೆಪಿ ಪ್ರವೇಶ ಪಡೆಯಿತು.

ಜನಸಂಘದ ಮುಂಚೂಣಿ ನಾಯಕ ದೀನ ದಯಾಳ್‌ ಉಪಾಧ್ಯಾಯ ಪಕ್ಷದ ಕೆಲಸಕ್ಕೆಂದು ಬಂದವರು ಒಂದೆರಡು ದಿನ ಮನೆಯಲ್ಲಿ ಉಳಿಯುತ್ತಿದ್ದರು. ಆಡ್ವಾಣಿ ಅವರು ಕೂಡ ಮನೆಗೆ ಬಂದಿದ್ದರು.

ಪ್ರಚಾರ ಕಾರ್ಯದಲ್ಲಿ ಭಾಗಿ
ಪತಿಯ ರಾಜಕೀಯ ಜೀವನ ನೋಡಿಯೇ ಸಾಕಾಗಿತ್ತು. ಆದರೂ ಅವರ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದೇನೆ. ಕೆಲವರಿಂದ ಉತ್ತಮ ಪ್ರತಿಕ್ರಿಯೆ, ಸಾಗಹಾಕಿದವರೂ ಇದ್ದಾರೆ. ಇದರ ಪರಿಣಾಮವೋ ಏನೋ, ಪುತ್ತೂರು ಮಹಿಳಾ ಕೋ- ಆಪರೇಟಿವ್‌ ಸೊಸೈಟಿಯ ನಿರ್ದೇಶಕಿಯಾಗಿ, 8 ವರ್ಷ ಅಧ್ಯಕ್ಷೆಯಾಗಿ ದುಡಿಯಲು ಅವಕಾಶ ಸಿಕ್ಕಿತು. ಕಳೆದ ನಾಲ್ಕು ವರ್ಷದಿಂದ ವಿಶ್ರಾಂತಿಯಲ್ಲಿದ್ದೇನೆ.

ರಾಮ ಭಟ್‌ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂಬ ತೃಪ್ತಿ ನನಗೆ ಆಗಲೇ ಇತ್ತು. ಹಲವರಿಗೆ ಸಹಾಯ ನೀಡಿದ್ದಾರೆ. ಸಹಾಯ ಪಡೆದವರು ಈಗಲೂ ಅದನ್ನು ನೆನಪು ಮಾಡಿಕೊಳ್ಳುತ್ತಾರೆ. ಆಗ ಹಳ್ಳಿ ಪ್ರದೇಶ ಹೆಚ್ಚು. ದೂರದೂರಿನಿಂದ ಬಂದವರು 4-5 ದಿನ ಮನೆಯಲ್ಲಿ ನಿಂತು ಹೋದವರಿದ್ದಾರೆ. ಆದರೂ ಆಗಿನ ರಾಜಕೀಯದಲ್ಲಿ ನೀತಿ, ನಿಯಮವಿತ್ತು. ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿದ್ದರು. ಈಗಿನ ರಾಜಕೀಯದಲ್ಲಿ ಇದ್ಯಾವುದೂ ಇಲ್ಲ. ಆದ್ದರಿಂದ ಬೇಸರ ಎನಿಸಿದೆ. ಹಿಡಿದ ಕೆಲಸವನ್ನು ಮಾಡಿ ತೀರಿಯೇ ಬಿಡಬೇಕು ಎಂಬ ಹಠವನ್ನು ಎಷ್ಟೋ ಬಾರಿ ರಾಮ ಭಟ್‌ ಅವರಲ್ಲಿ ಕಂಡಿದ್ದೇನೆ.
-ಕೆ. ಸವಿತಾ ಆರ್‌. ಭಟ್‌

ಗಣೇಶ್‌ ಕಲ್ಲರ್ಪೆ 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.