ಬೇಸಗೆಯಲ್ಲಿ ನೀರಿಗೆ ಬರ; ಮಳೆಗಾಲದಲ್ಲಿ ರಸ್ತೆ ದುಃಸ್ಥಿತಿ


Team Udayavani, Jul 28, 2018, 10:55 AM IST

28-july-4.jpg

ಆಲಂಕಾರು : ಮಳೆಗಾಲ ಮಾತ್ರವಲ್ಲದೆ ಬೇಸಗೆ ಕಾಲದಲ್ಲಿಯೂ ಇಲ್ಲಿನ ಜನರ ಪಾಡು ಕೇಳುವವರಿಲ್ಲ! ಆಲಂಕಾರು ಗ್ರಾಮದ ಬುಡೇರಿಯಾ ಜನತೆ ದುರದೃಷ್ಟ ವಂತರು ಎಂದರೆ ತಪ್ಪಾಗಲಾರದು. ಇಲ್ಲಿನವರು ಬೇಸಗೆಯಲ್ಲಿ ನೀರಿನ ಬರವನ್ನು ಎದುರಿಸಬೇಕು. ಮಳೆಗಾಲದಲ್ಲಿ ರಸ್ತೆ ದುರವಸ್ಥೆಯಿಂದ ಇಲ್ಲಿ ಸಂಚಾರ ಕಷ್ಟಕರ. ರಸ್ತೆಗಳಿಗೆ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ. ಜತೆಗೆ ಬೇಸಗೆಯಲ್ಲಿ ಅಕ್ರಮ ಮರಳುಗಾರಿಕೆಯೇ ರಸ್ತೆಗಳ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ.

ಬುಡೇರಿಯಾ ಸಂಪರ್ಕ ಕಡಿತ
ರಸ್ತೆ ಕೆಸರುಮಯವಾಗಿರುವ ಕಾರಣ ಅತೀ ಹೆಚ್ಚು ದೈವದ ಕ್ಷೇತ್ರವಿರುವ ಬುಡೇರಿಯಾಕ್ಕೆ ವಾಹನ ಸಂಚಾರ ಅತ್ಯಂತ ದುಸ್ತರವಾಗಿದೆ. ಜತೆಗೆ ಚಾಮೆತ್ತಡ್ಕ, ಪೊಸೋನಿಗೆ ಸಂಪರ್ಕಿಸುವ ರಸ್ತೆಗೆ ಚರಂಡಿ ಇಲ್ಲದ ಕಾರಣ ಚಾಮೆತ್ತಡ್ಕದಲ್ಲಿ ಕಚ್ಚಾ ರಸ್ತೆಯು ಸುಮಾರು 100 ಮೀ. ದೂರದ ವರೆಗೆ ಸಂಪೂರ್ಣ ಕೆಸರು ಮಯವಾಗಿದೆ. ಇಲ್ಲಿ ನಡೆದಾಡಲೂ ಅಸಾಧ್ಯ. ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಈ ಭಾಗದ ಜನತೆ ಆಲಂಕಾರಿಗೆ ತೆರ ಳಬೇಕಿದ್ದರೆ ಸುತ್ತು ಬಳಸಿ ಹೋಗ ಬೇಕು. ಇಲ್ಲಿ ರುವ ಎಂಡೋ ಸಂತ್ರಸ್ತರು ಎಂಡೋ ಪಾಲನ ಕೇಂದ್ರಗಳಿಗೆ ತೆರಳಲಾಗದೆ ಸಂಕಷ್ಟದಲ್ಲಿದ್ದಾರೆ. ರಸ್ತೆ ಹದಗೆಟ್ಟಿರುವ ಕಾರಣ ಪೊಯ್ಯಲಡ್ಡ, ಬಡ್ಡಮೆ, ನೀರಕಣಿ ಮೊದಲಾದ ಪ್ರದೇಶಗಳು ವಾಹನ ಸಂಚಾರವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಮರಳು ಸಾಗಾಟ ಕಾರಣ?
ಬೇಸಗೆಯಲ್ಲಿ ಬುಡೇರಿಯಾ ಸಮೀಪದ ಕುಮಾರಧಾರಾ ನದಿಯಿಂದ ಮರಳು ಸಾಗಾಟವಾಗುತ್ತದೆ. ಮರಳು ವಾಹನಗಳ ಹೆಚ್ಚಿನ ಸಂಚಾರದಿಂದಾಗಿ ರಸ್ತೆ ಗುಂಡಿಮಯವಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಇಲ್ಲಿ ಬೇಸಗೆಯಲ್ಲಿ ರಾತ್ರಿ, ಹಗಲು ನಿರಂತರ ಮರಳುಗಾರಿಕೆ ನಡೆಯುತ್ತಿದ್ದರೂ ಸ್ಥಳೀಯಾಡಳಿತ ಮೌನವಾಗಿದೆ. ಅಂಗನವಾಡಿಗೆ ತೆರಳುವ ಪುಟಾಣಿಗಳಿಗೂ ಹೋಗಲು ತೊಂದರೆ ಇದೆ. ಮರಳು ಉದ್ದಿಮೆದಾರರು ರಸ್ತೆಯ ಗುಂಡಿಯನ್ನು ಮುಚ್ಚುವ ಕಾರ್ಯ ಮಾಡುತ್ತಿಲ್ಲ. ಮರಳಿನ ದೊಡ್ಡ ಲಾರಿಗಳ ಸಂಚಾರದಿಂದ ಸೋರ್ವಲ್ತಡಿಯಲ್ಲಿ ರಸ್ತೆ ಮೋರಿಯೊಂದರಲ್ಲಿ ಬಿರುಕು ಕಂಡು ಬಂದಿದೆ. ಮೋರಿಯು ತೋರ್ವಲ್ತಡಿ ಎನ್ನುವಲ್ಲಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.

15 ದಿನ ಮುಳುಗಿದ ಸೇತುವೆ
ಬುಡೇರಿಯಾ – ಪಜ್ಜಡ್ಕ – ಚಾಮೆತ್ತಡ್ಕ ಮಧ್ಯೆ ಹರಿಯುವ ಕಿರು ತೋಡಿಗೆ ಕೆಮ್ಮಟೆಯಲ್ಲಿ ನಿರ್ಮಿಸಿರುವ ಕಿರು ಸೇತುವೆಯು ಕಳೆದ 15 ದಿನಗಳಿಂದ ಮುಳುಗಿದೆ. ಈ ಭಾಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಇಲ್ಲಿನ ಜನರು ಕುಂತೂರನ್ನು ಸಂಪರ್ಕಿಸಲು ಸುಮಾರು 5 ಕಿ.ಮೀ. ಸುತ್ತು ಬಳಸಿ ಹೋಗಬೇಕಾಗಿದೆ.

ಕೆಂಪು ಕಲ್ಲು ಹಾಕುವ ಪ್ರಕ್ರಿಯೆ
ಕೆಟ್ಟು ಹೋಗಿರುವ ರಸ್ತೆಗಳಿಗೆ ಕೆಂಪು ಕಲ್ಲು ಹಾಕಿ ಸರಿಪಡಿಸುವ ಕಾಮಗಾರಿ ನಡೆ ಸಲಾಗುತ್ತಿದೆ. ದುರಸ್ತಿ ಕಾರ್ಯದ ವೆಚ್ಚ ಪಟ್ಟಿ ತಯಾರಿಸಲು ಎಂಜಿನಿಯರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಎಂಜಿನಿಯರ್‌ ಕೂಲಿಯಾಳು, ರಸ್ತೆಗೆ ಹಾಕಲಾದ ಕೆಂಪು ಕಲ್ಲಿನ ವೆಚ್ಚದ ಪಟ್ಟಿ ನೀಡಿದ ತತ್‌ಕ್ಷಣ ಪಂಚಾಯತ್‌ನಿಂದ ಮೊತ್ತವನ್ನು ಪಾವತಿಸಲಾಗುವುದು.
 - ಸುಧಾಕರ ಪೂಜಾರಿ ಕಲ್ಲೇರಿ
     ಗ್ರಾ.ಪಂ. ಉಪಾಧ್ಯಕ್ಷರು

ವಿಶೇಷ ವರದಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.