ಶಿರಾಡಿ ರಸ್ತೆ: ಸ್ಥಳೀಯರಿಂದ ಆಕ್ರೋಶ
Team Udayavani, Jul 12, 2018, 11:04 AM IST
ನೆಲ್ಯಾಡಿ: ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಂಕ್ರೀಟ್ ಕಾಮಗಾರಿಯ ನೆಪದಲ್ಲಿ ವಾಹನ ಸಂಚಾರ ಸಂಪೂರ್ಣ ನಿಷೇಧಿಸಲ್ಪಟ್ಟ ಬಳಿಕವೂ ಸಚಿವರು, ರಾಜಕಾರಣಿಗಳು, ಅಧಿಕಾರಿಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದನ್ನು ಪ್ರತಿಭಟಿಸಿ ಬುಧವಾರ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಿಷೇಧಿತ ರಸ್ತೆಯನ್ನು ಹಾದು ಬಂದ ಅಧಿಕಾರಿಗಳ ವಾಹನವನ್ನು ತಡೆ ಹಿಡಿದ ಘಟನೆ ನಡೆದಿದೆ.
ದ.ಕ ಜಿಲ್ಲಾ ಎಸ್.ಪಿ. ಖಡಕ್ ಸೂಚನೆ ಮೇರೆಗೆ ಕಟ್ಟುನಿಟ್ಟಾಗಿ ವಾಹನ ಸಂಚಾರವನ್ನು ತಡೆ ಹಿಡಿಯಲಾಗಿತ್ತು. ಆದರೆ ಮಂಗಳವಾರ ಬೆಂಗಳೂರಿನಲ್ಲಿ ನಿಧನರಾದ ಮಾಜಿ ಸಚಿವ ಬಿ.ಎ. ಮೊಹಿದೀನ್ ಅವರ ಪಾರ್ಥಿವ ಶರೀರ ಹೊತ್ತ ವಾಹನ ಹಾಗೂ ರಾಜಕಾರಣಿಗಳ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸುಮಾರು 75ಕ್ಕಿಂತಲೂ ಹೆಚ್ಚಿನ ವಾಹನಗಳು ಹಾಗೂ ವೋಲ್ವೋ ಬಸ್ ಕೂಡ ಸಂಚರಿಸಲು ಅವಕಾಶ ನೀಡಿದ ಕುರಿತು ಆಕ್ರೋಶ ವ್ಯಕ್ತವಾಗಿತ್ತು.
ಅವಕಾಶ ಎಲ್ಲರಿಗೂ ನೀಡಿ, ಇಲ್ಲವೇ ಎಲ್ಲರಿಗೂ ನಿಷೇಧಿಸಿ ಎಂಬ ನಿಲುವು ತಾಳಿ ಸ್ಥಳೀಯ ಮಲೆನಾಡು ಜನಹಿತ ಸಂರಕ್ಷಣಾ ವೇದಿಕೆಯ ಕಾರ್ಯಕರ್ತರು ಗುಂಡ್ಯ ಗೇಟು ಬಳಿ ಬುಧವಾರದಂದು ಕಾವಲು ಕಾಯುತ್ತಿದ್ದರು. ಬುಧವಾರ ಸಂಜೆ ಅಧಿಕಾರಿಗಳ ಆರು ವಾಹನಗಳು ಘಾಟಿ ರಸ್ತೆಯ ಮೂಲಕ ಆಗಮಿಸುತ್ತಿರುವುದನ್ನು ಕಂಡು ತಡೆಯೊಡ್ಡಿದರು.
ವಾಹನದಲ್ಲಿದ್ದವರು ನೆಲ್ಯಾಡಿ ಸಮೀಪ ಹೆದ್ದಾರಿ ಕಾಮಗಾರಿ ವೀಕ್ಷಿಸಲು ಬಂದಿರುವುದಾಗಿ ತಿಳಿಸಿದರೂ ಸ್ಥಳೀಯರು ಪಟ್ಟು ಬಿಡಲಿಲ್ಲ. ನಮಗೆ ಕಿಲೊಮೀಟರ್ ದೂರದ ದೇವಸ್ಥಾನಕ್ಕೂ ಹೋಗಲೂ ಅವಕಾಶ ನೀಡುತ್ತಿಲ್ಲ. 30 ಕಿ.ಮೀ. ದೂರದ ನೆಲ್ಯಾಡಿಗೆ ಹೇಗೆ ಹೋಗಲು ಸಾಧ್ಯವೆಂದು ಪ್ರಶ್ನಿಸಿ ಚಾರ್ಮಾಡಿ ಅಥವಾ ಮೈಸೂರು ಮಾರ್ಗವಾಗಿಯೇ ಹೋಗಿ ಎಂದು ತಾಕೀತು ಮಾಡಿ ತಡೆ ಹಿಡಿದಿದ್ದಾರೆ.
ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಸಂಚರಿಸಲು ಅವಕಾಶವಿದೆ ಎಂದಾದರೆ ನಮಗೂ ಅವಕಾಶ ನೀಡಲೇಬೇಕು. ತಾರತಮ್ಯ ಸಹಿಸಲಾರೆವು. ಮುಂದೆ ಅಧಿಕಾರಿಗಳು ಯಾ ರಾಜಕಾರಣಿಗಳ ವಾಹನ
ಈ ರಸ್ತೆಯಲ್ಲಿ ಸಾಗಿದ್ದೇ ಆದರೆ ಪ್ರತಿಭಟಿಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಲೆನಾಡು ಜನ ಹಿತರಕ್ಷಣಾ ಸಮಿತಿಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್