Shibaruru ಶ್ರೀ ಕೊಡಮಣಿತ್ತಾಯ ಕ್ಷೇತ್ರ: ಶ್ರದ್ಧಾ ಭಕ್ತಿಯ ತಿಬರಾಯನಕ್ಕೆ ಭಕ್ತಸಾಗರ
Team Udayavani, Dec 17, 2023, 11:13 PM IST
ಸುರತ್ಕಲ್: ಇತಿಹಾಸ ಪ್ರಸಿದ್ಧ ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯ ವರ್ಷಾವಧಿ ಉತ್ಸವ, ರವಿವಾರ ನಡೆದ ತಿಬರಾಯನಕ್ಕೆ ಭಕ್ತಸಾಗರ ಹರಿದು ಬಂತು.ಮುಂಜಾನೆ ತುಲಾಭಾರ ಸೇವೆ, ಬೆಳಗ್ಗೆ ಶ್ರೀ ಉಳ್ಳಾಯ ದೈವದ ನೇಮ ನೆರವೇರಿತು.
ಈ ಸಂದರ್ಭ ಉರುಳು ಸೇವೆ, ಕಂಚೀಲು ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರಕ್ಕೆ ಸಂಬಂಧಪಟ್ಟ ಗುತ್ತು ಮನೆತನ, ಗುತ್ತಿನಾರ್ ಮನೆತನ, ಮೊಕ್ತೇಸರರು, ಸಹಾಯಕ ಆಯುಕ್ತರ ಉಪಸ್ಥಿತಿಯಲ್ಲಿ ನೇಮದ ಧಾರ್ಮಿಕ ಕಾರ್ಯಕ್ರಮ ನೆರವೇರಿತು. ಡಿ. 18ರಂದು ರಾತ್ರಿ ಶ್ರೀ ಕಾಂತೇರಿ ಧೂಮಾವತಿ ದೈವದ ನೇಮ ನಡೆಯಲಿದೆ.
ಕಾರಣಿಕ ಕ್ಷೇತ್ರ
ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಾಚೀನ ದೈವಸ್ಥಾನಗಳಲ್ಲಿ ಒಂದಾಗಿದ್ದು ಸಾವಿರಾರು ಭಕ್ತರಿಗೆ ಮನಃ ಶಾಂತಿ ನೆಮ್ಮದಿ ನೀಡುವ ಕಾರಣಿಕ ಕ್ಷೇತ್ರವಾಗಿದೆ. ಮಣಿದವರಿಗೆ ಕೊಡುಗೈಯ ಶಿಬರೂರು ಕೊಡಮಣಿತ್ತಾಯ ಎಂಬ ಮಾತು ಪ್ರತೀತಿಯಲ್ಲಿದ್ದು ವಿಷವೈದ್ಯನೆಂಬ ಅಭಿದಾನವನ್ನು ಪಡೆದಿದೆ.
ಮಂಗಳೂರಿನಿಂದ ಸುಮಾರು 25 ಕಿ.ಮೀ ದೂರ, ಕಟೀಲಿನಿಂದ 2 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರಕ್ಕೆ ಉತ್ತಮ ರಸ್ತೆ ಮಾರ್ಗವಿದ್ದು, ಬಸ್ಸಿನ ವ್ಯವಸ್ಥೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼKGF -3ʼ.. ಬಿಗ್ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್
Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್
ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ
Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”
Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ