ಸುರತ್ಕಲ್: ಕಡಲ್ಕೊರೆತಕ್ಕೆ ಕೊಚ್ಚಿಹೋದ ರಸ್ತೆ: ಅಪಾಯದ ಸ್ಥಿತಿಯಲ್ಲಿ ಮನೆಗಳು
Team Udayavani, Jul 12, 2022, 11:27 AM IST
ಸುರತ್ಕಲ್: ಬೈಕಂಪಾಡಿ ಮೀನಕಳಿಯ ಬಳಿ ಕಡಲ್ಕೊರೆತಕ್ಕೆ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಕಡಲ್ಕೊರೆತವನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮವಾಗಿ ಮರಳಿನ ಚೀಲಗಳನ್ನು ತಡೆಗೋಡೆಯಾಗಿ ಹಾಕಲಾಗಿತ್ತು, ಆದರೆ ಭಾರೀ ಗ್ರಾತ್ರದ ಅಲೆಗೆ ರಸ್ತೆ ಕೊಚ್ಚಿಹೋಗಿದ್ದು, ಸ್ಥಳೀಯರು ಸಂಚಾರರಕ್ಕೆ ಪರ್ಯಾಯ ರಸ್ತೆಯನ್ನು ಅವಲಂಭಿಸಿದ್ದಾರೆ.
ಇದನ್ನೂ ಓದಿ: ನೆರೆಹಾನಿ: ಇಡೀ ರಾಜ್ಯ ಸರ್ಕಾರ ರಸ್ತೆಗಿಳಿದು ಕೆಲಸ ಮಾಡುತ್ತಿದೆ ಎಂದ ಸಿಎಂ ಬೊಮ್ಮಾಯಿ
ಸಮುದ್ರ ತೀರದಲ್ಲಿ ಭಾರೀ ಗಾತ್ರದ ಅಲೆಗಳು ಬಂದು ಅಪ್ಪಳಿಸುತ್ತಿರುವುದರಿಂದ ಸಮೀಪದಲ್ಲಿರುವ ಮನೆಗಳಿಗೆ ಹಾನಿಯುಂಟಾಗುವ ಭೀತಿ ಎದುರಾಗಿದೆ.