ಶ್ರಮಕ್ಕೆ ದೇವರು ಕರುಣಿಸಿದ ಫಲ; ಪ್ರಶಸ್ತಿಯ ಖುಷಿಯಲ್ಲಿ ಅಮೈ ಮಹಾಲಿಂಗ ನಾಯ್ಕ
Team Udayavani, Jan 26, 2022, 7:05 AM IST
ವಿಟ್ಲ: ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅಮೈ ಅವರು ನೀರಿಗಾಗಿ ಭಗೀರಥ ಪ್ರಯತ್ನ ಮಾಡಿದವರು. ಕಷ್ಟದ ಜೀವನ, ದುಡಿದೇ ದೇಹದಂಡನೆ ಮಾಡಿದ ಈ ಕೃಷಿಕನ ಸ್ವಾವಲಂಬಿ ಯಶೋಗಾಥೆ ಅತ್ಯದ್ಭುತ. ಪತಿ, ಪತ್ನಿ ಇಬ್ಬರಿಗೂ ವಿದ್ಯಾಭ್ಯಾಸವಿಲ್ಲ. ಆದರೆ ಬಂಗಾರ ವನ್ನೇ ಬೆಳೆದವರು. ಹಲವು ಬೆಳೆ ಗಳೊಂದಿಗೆ ದನ, ಜೇನು ಸಾಕಣೆ ಮಾಡುತ್ತ ಬಂದವರು. ಅವರಿಗೀಗ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿ ದ್ದೀರಿ. ಏನು ಅನಿಸಿತು?
– ತುಂಬಾ ಸಂತೋಷವಾಗಿದೆ. ನನ್ನ ಶ್ರಮಕ್ಕೆ ದೇವರು ಪ್ರಶಸ್ತಿ ಕರುಣಿಸಿದ್ದಾರೆ. ಹಳ್ಳಿಯ ಮೂಲೆ ಯಲ್ಲಿ ಕೃಷಿ ಮಾಡಿ ಬದುಕಿದ ನಾನು ದೇಶದ ಅತ್ಯುನ್ನತ ಪ್ರಶಸ್ತಿ ಸಿಗುತ್ತದೆ ಎಂದು ಊಹಿಸಿರಲೇ ಇಲ್ಲ.
ಪ್ರಶಸ್ತಿಗೆ ಭಾಜನರಾಗಿದ್ದೀರೆಂದು ಯಾವಾಗ ತಿಳಿಯಿತು?
ಮಧ್ಯಾಹ್ನ ನನಗೆ ಫೋನ್ ಬಂತು. ಹಿಂದಿಯಲ್ಲೋ ಇಂಗ್ಲಿಷ್ನಲ್ಲೋ ಮಾತ ನಾಡಿದರು. ನನಗೆ ಅರ್ಥವಾಗಲಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ವಿಟ್ಲದ ಕೃಷಿ ಇಲಾಖೆ ಅಧಿಕಾರಿಗಳು ಪ್ರಶಸ್ತಿಯ ಮಾಹಿತಿ ನೀಡಿದರು.
ಯಾವಾಗ ದಿಲ್ಲಿಗೆ ತೆರಳುತ್ತೀರಿ?
ಯಾವಾಗ ಅಂತ ಗೊತ್ತಿಲ್ಲ. ದಿನ ಮತ್ತು ಸಮಯ ತಿಳಿಸುತ್ತೇವೆ, ದಿಲ್ಲಿಗೆ ಹೋಗಿ ಪ್ರಶಸ್ತಿ ಸ್ವೀಕರಿಸಬೇಕೆಂದು ಹೇಳಿದ್ದಾರೆ. ಏನೂ ತಿಳಿಯದ ನನಗೆ ಅಲ್ಲಿಗೆ ಹೋಗಿ ಪ್ರಶಸ್ತಿ ಪಡೆಯುವಂತಹ ಭಾಗ್ಯ ಸಿಕ್ಕಿದೆ. ದೇವರ ಅನುಗ್ರಹ.
2020ರ ಜನವರಿ 7ಕ್ಕೆ ಉದಯವಾಣಿ ಯಲ್ಲಿ ನಿಮ್ಮ ಬಗ್ಗೆ ಲೇಖನ ಪ್ರಕಟಿಸಿತ್ತು..
ಹೌದು, ನೆನಪಿದೆ. ಕೃಷಿಭೂಮಿಯಲ್ಲಿ ಓಡಾಡಿದ್ದು, ಸುರಂಗವನ್ನು ತೋರಿಸಿದ್ದು ಎಲ್ಲವೂ ನೆನಪಿದೆ. ಕಷ್ಟಪಟ್ಟು ದುಡಿದಿದ್ದೆ. ಮನೆಯವರೂ ಸಹಕರಿಸುತ್ತಿದ್ದರು. ವಿದ್ಯೆಯಿಲ್ಲದೇ ಇದ್ದರೂ ವಿದ್ಯಾವಂತರನ್ನು ಸಂಪರ್ಕಿಸಲು ಇದೆಲ್ಲ ಕಾರಣವಾಗಿದೆ.
ಹಾಗಾದರೆ ಈಗ ನಿಮ್ಮ ಶ್ರಮ ಸಾರ್ಥಕವಾಯಿತು ಅಲ್ಲವೇ?
ನಿಜ. ನನಗೆ ಬೇರೇನೂ ಹೇಳಲು ಬರುವುದಿಲ್ಲ. ಖುಷಿ ಯಂತೂ ಆಗಿದೆ. ಇಲಾಖೆಯವರು ತಿಳಿಸಿದ ಮೇಲೆ ಫೋನ್ ಕರೆಗಳು ನಿರಂತರವಾಗಿ ಬರುತ್ತಿವೆ. ಎಲ್ಲರ ಪ್ರೀತಿಗೆ ಸಂತೋಷವಾಗುತ್ತಿದೆ.
ಮಧ್ಯಾಹ್ನ ತನಕ ಕೂಲಿ ಕೆಲಸ. ಬಳಿಕ ಮನೆಗೆ ಬಂದು ಸುರಂಗ ತೋಡುತ್ತಿದ್ದೆ. ರಾತ್ರಿ 12ರ ವರೆಗೂ ಒಬ್ಬನೇ ದುಡಿಯುತ್ತಿದ್ದೆ. ಜತೆಗೆ ಗುಡ್ಡವನ್ನು ಸಮತಟ್ಟಾಗಿಸಿ, ಸಾಧ್ಯವಾದಷ್ಟು ಅಡಿಕೆ ಸಸಿಯನ್ನು ನೆಡುತ್ತಿದ್ದೆ. ಈ ಅಡಿಕೆ ಸಸಿಗಳು ಕೆಲಸಕ್ಕೆ ಹೋಗುತ್ತಿದ್ದ ಮನೆಯವರ ತೋಟದಲ್ಲಿ ಬಿದ್ದು ಹುಟ್ಟಿದ ಸಸಿಗಳು. ಈ ಜಾಗದ ಅಭಿವೃದ್ಧಿಗೆ ಯಾವುದೇ ಸಾಲ ಮಾಡಲಿಲ್ಲ. ಸರಕಾರದ ಸವಲತ್ತುಗಳನ್ನೂ ಪಡೆಯಲಿಲ್ಲ. ಉಳಿಕೆಯಾಗುವಂತೆ ಯೋಜನೆ ರೂಪಿಸಿ, ಕಾರ್ಯನಿರ್ವಹಿಸುತ್ತಿದ್ದೆ.
-ಮಹಾಲಿಂಗ ನಾಯ್ಕ ಅಮೈ
- ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
MUST WATCH
ಹೊಸ ಸೇರ್ಪಡೆ
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ