ಭಾರೀ ಪ್ರಮಾಣದ ದಂಡ ವಸೂಲಿಗೆ ಸಾರ್ವಜನಿಕರ ಅಸಮಾಧಾನ 


Team Udayavani, Mar 11, 2019, 5:02 AM IST

11-march-2.jpg

ಮಹಾನಗರ: ಬೆಂಗಳೂರಿನಂತೆ ಮಂಗಳೂರಿನಲ್ಲಿಯೂ ನೋ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸುವ ವಾಹನಗಳನ್ನು ಟೋಯಿಂಗ್‌ ಮೂಲಕ ತೆರವುಗೊಳಿಸಿ ವಾಹನ ಮಾಲಕರಿಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಸಾರ್ವಜನಿಕ ವಲಯದಲ್ಲಿ ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ನಗರದಲ್ಲಿ ಪ್ರಸ್ತುತ ವಾಹನ ನಿಲುಗಡೆಗೆ ಪ್ರತ್ಯೇಕ ವಲಯ ಅಥವಾ ಸೂಕ್ತ ಜಾಗವನ್ನು ಪಾಲಿಕೆಯಾಗಲಿ ಅಥವಾ ಸಂಚಾರ ಪೊಲೀಸರು ನಿಗದಿಪಡಿಸಿಲ್ಲ. ಹೀಗಿರುವಾಗ, ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಒದಗಿಸದೆ ಏಕಾಏಕಿ ನೋ ಪಾರ್ಕಿಂಗ್‌ ಹೆಸರಿನಲ್ಲಿ ಸಾವಿರಕ್ಕೂ ಅಧಿಕ ಮೊತ್ತದಲ್ಲಿ ದಂಡ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ ಎನ್ನುವುದು ಕೆಲವರ ವಾದವಾಗಿದೆ.

ದ್ವಿಚಕ್ರ ವಾಹನಗಳಿಗೆ 750 ರೂ. ಹಾಗೂ ಕಾರುಗಳಿಗೆ 1,100 ರೂ. ನಿಗದಿ ಪಡಿಸಿರುವ ದಂಡ ಶುಲ್ಕ ಬಹಳಷ್ಟು ಜಾಸ್ತಿಯಾಯಿತು ಎಂದು ಕೆಲವು ಮಂದಿ ವಾಹನ ಮಾಲಕರು ಹೇಳುತ್ತಿದ್ದು, ಶುಲ್ಕ ಕಡಿಮೆ ಮಾಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ. ಬೆಂಗಳೂರಿನಲ್ಲಿಯೂ ಇದೇ ಪ್ರಮಾಣದ ದಂಡ ಶುಲ್ಕ ಇದೆ. ಇದು ರಾಜ್ಯ ಸರಕಾರ ನಿಗದಿ ಪಡಿಸಿದ ದರ. ನಾವು ಇದನ್ನು ಬದಲಾವಣೆ ಮಾಡಲು ಸಾಧ್ಯವಾಗದು ಎಂಬ ಅಸಹಾಯಕತೆಯನ್ನು ಪೊಲೀಸರು ವ್ಯಕ್ತಪಡಿಸುತ್ತಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಾರ್ಕಿಂಗ್‌ ಸಮಸ್ಯೆ ಕೂಡ ಅಷ್ಟೇ ಇದೆ. ಅಧಿಕೃತ ಪಾರ್ಕಿಂಗ್‌ ತಾಣಗಳು ಕಡಿಮೆ ಇದ್ದು, ಕೆ.ಎಸ್‌. ರಾವ್‌ ರಸ್ತೆಯೊಂದನ್ನು ಬಿಟ್ಟು ಉಳಿದಂತೆ ಬಹುತೇಕ ಕಡೆ ಪ್ರಮುಖ ರಸ್ತೆಗಳ ಬದಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಕಾಂಕ್ರೀಟ್‌ ಕಾಮಗಾರಿಯ ಸಂದರ್ಭದಲ್ಲಿ ವಿಸ್ತರಣೆಗೊಂಡ ರಸ್ತೆಗಳ ಭಾಗಗಳೆಲ್ಲವೂ ವಾಹನ ಪಾರ್ಕಿಂಗ್‌ಗೆ ಒದಗಿಸಲಾಗಿದೆ. ಬಹುತೇಕ ಬಹು ಮಹಡಿ ಕಟ್ಟಡಗಳ ತಳ ಅಂತಸ್ತುಗಳಲ್ಲಿ ವಾಹನ ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಯುತ್ತಿದೆ. ಇದರಿಂದ ರಸ್ತೆ ಬದಿ ವಾಹನ ನಿಲ್ಲಿಸುವುದು ಅನಿವಾರ್ಯ. 

ಇದರ ವಿರುದ್ಧ ಹಲವು ಬಾರಿ ಕಾರ್ಯಾಚರಣೆ ನಡೆದಿದೆ. ಅಲ್ಲದೆ ಈ ರೀತಿ ಪಾರ್ಕಿಂಗ್‌ ಜಾಗವನ್ನು ವ್ಯಾಪಾರಕ್ಕೆ ಒದಗಿಸಿರುವ ಕಟ್ಟಡಗಳನ್ನು ಗುರುತಿಸಿ ಪೊಲೀಸರು ಪಟ್ಟಿ ತಯಾರಿಸಿ ಪಾಲಿಕೆಗೆ ಸಲ್ಲಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಇದುವರೆಗೆ ಪ್ರಯೋಜನ ಆಗಿಲ್ಲ.

ಇಂತಹ ಪರಿಸ್ಥಿತಿ ಇರುವಾಗಲೇ ನಗರದಲ್ಲಿ ಪೊಲೀಸರು ಟೋಯಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಿದ್ದಾರೆ. 

ಸರಕಾರ ನಿಗದಿ ಪಡಿಸಿದ ಶುಲ್ಕ
ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಟೋಯಿಂಗ್‌ ವಾಹನಕ್ಕೆ ನಾಲ್ಕು ಸಿಬಂದಿ ಇದ್ದಾರೆ. ಒಂದು ದ್ವಿಚಕ್ರ ವಾಹನ ಎತ್ತಿದರೆ ವಸೂಲು ಮಾಡುವ 750 ರೂ. ದಂಡ ಶುಲ್ಕದಲ್ಲಿ 325 ರೂ. ಮಾತ್ರ ಗುತ್ತಿಗೆದಾರರಿಗೆ ಲಭಿಸುತ್ತದೆ. ಉಳಿದ 425 ರೂ. ಸರಕಾರಕ್ಕೆ ಹೋಗುತ್ತದೆ. ನಗರದಲ್ಲಿ. ಅಧಿಕೃತ ಪಾರ್ಕಿಂಗ್‌ ಸ್ಥಳಗಳನ್ನು ಬಣ್ಣ ಹಾಕಿ ಗುರುತಿಸಿ ವಾಹನ ಚಾಲಕ/ಮಾಲಕರಿಗೆ ಅನುಕೂಲ ಮಾಡಿಕೊಡ ಲಾಗುವುದು. ಪಾರ್ಕಿಂಗ್‌ಗೆ ಕಾದಿರಿಸಿದ ಜಾಗದಲ್ಲಿ ವ್ಯಾಪಾ ರಕ್ಕೆ ಅವಕಾಶ ಕಲ್ಪಿಸಿರುವ ತಾಣಗಳನ್ನು ಗುರುತಿಸಿ ಅದರ ಪಟ್ಟಿಯನ್ನು ಪಾಲಿಕೆಗೆ ನೀಡಲಾಗಿದೆ.
 - ಮಂಜುನಾಥ ಶೆಟ್ಟಿ,
ಎಸಿಪಿ, ಟ್ರಾಫಿಕ್‌

ಶುಲ್ಕ ಮರು ನಿಗದಿ ಪಡಿಸಿ
ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಇರುವುದು ನಿಜ. ಆದರೆ ಮಂಗಳೂರನ್ನು ಬೆಂಗಳೂರಿಗೆ ಹೋಲಿಸುವುದು ಸರಿಯಲ್ಲ. ನಿಗದಿ ಪಡಿಸಿರುವ ಟೋಯಿಂಗ್‌ ಶುಲ್ಕ ಜಾಸ್ತಿ ಆಯಿತು ಎಂದು ಸಾರ್ವಜನಿಕರು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತತ್‌ಕ್ಷಣ ಜಾರಿಗೊಳಿಸುವುದು ಸರಿಯಲ್ಲ; ಹೊಸ ವ್ಯವಸ್ಥೆ ಜಾರಿಗೊಳಿಸುವಾಗ ಜನರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಅವರಿಗೆ
ಹೊರೆಯಾಗದ ರೀತಿಯಲ್ಲಿ ಶುಲ್ಕವನ್ನು ಮರು ನಿಗದಿ ಪಡಿಸಬೇಕು. ಈ ಬಗ್ಗೆ ಪೊಲೀಸ್‌ ಕಮಿಷನರ್‌, ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು.
 - ವೇದವ್ಯಾಸ ಕಾಮತ್‌, ಶಾಸಕ 

 ಟೋಯಿಂಗ್‌ ಶುಲ್ಕ
ಇದು ಪೊಲೀಸರು ನಿಗದಿ ಪಡಿಸಿದ ಟೋಯಿಂಗ್‌ ಶುಲ್ಕ ಅಲ್ಲ; ಸರಕಾರವೇ ಅಧಿಸೂಚನೆ ಹೊರಡಿಸಿರುವುದು. ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸಾಕಷ್ಟು ಜಾಗ ಇಲ್ಲದಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿ ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುವುದು ಸರಿಯಲ್ಲ. ನಗರದಲ್ಲಿ ನಿಜವಾಗಿಯೂ ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಮಾತ್ರ ಟೋಯಿಂಗ್‌ ಮೂಲಕ ಎತ್ತಂಗಡಿ ಮಾಡಲಾಗುತ್ತಿದೆ.
– ಸಂದೀಪ್‌ ಪಾಟೀಲ್‌,
ಮಂಗಳೂರು ಪೊಲೀಸ್‌ ಕಮಿಷನರ್‌

 ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಿ
ಸಂಚಾರ ನಿಯಮ ಪಾಲಿಸುವುದು ನಮ್ಮ ಕರ್ತವ್ಯ. ಆದರೆ ಟೋಯಿಂಗ್‌ ನಂತಹ ವ್ಯವಸ್ಥೆ ತಂದು ದುಬಾರಿ ಶುಲ್ಕ ವಿಧಿಸಿ ಅದನ್ನು ಜಾರಿಗೊಳಿಸುವ ಮೊದಲು ಸುಸಜ್ಜಿತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಿ. ಪ್ರಮುಖ ಕಾಂಪ್ಲೆಕ್ಸ್‌ಗಳಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಹಾಗಾಗಿ ರಸ್ತೆ ಬದಿ ವಾಹನ ನಿಲ್ಲಿಸುವುದು ಅನಿವಾರ್ಯ.
– ಸುಧೀರ್‌ ಎಲ್‌.
ಕೊಂಚಾಡಿ, (ಚತುಶ್ಚಕ್ರ ವಾಹನ ಮಾಲಕರು)

ಮಧ್ಯಮ ವರ್ಗಕ್ಕೆ  ಹೊರೆ
ಟೋಯಿಂಗ್‌ ಶುಲ್ಕ ದುಬಾರಿಯಾಗಿದ್ದು, ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಅದನ್ನು ಕಡಿಮೆ ಮಾಡಲೇಬೇಕು. ಪಾಲಿಕೆಯು ಪಾರ್ಕಿಂಗ್‌ ವ್ಯವಸ್ಥೆ ಇದೆಯೇ ಇಲ್ಲವೇ ಎನ್ನುವುದನ್ನು ಸರಿಯಾಗಿ ಗಮನಿಸದೆ ಕಟ್ಟಡಗಳಿಗೆ ಲೈಸನ್ಸ್‌ ಕೊಡುತ್ತಿದೆ. ಹಾಗಾಗಿ ಪಾರ್ಕಿಂಗ್‌ ಸಮಸ್ಯೆ ತಲೆ ದೋರಿದೆ. 
 - ಅನುಪ್‌,
ಮೇರಿಹಿಲ್‌ , (ದ್ವಿಚಕ್ರ ವಾಹನ ಮಾಲಕರು)

ಶುಲ್ಕ ಕಡಿಮೆ ಮಾಡಲಿ
ನಗರದಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ. ಹಾಗಿರುವಾಗ ದುಬಾರಿ ಟೋಯಿಂಗ್‌ ಶುಲ್ಕ ವ್ಯವಸ್ಥೆ ಜಾರಿ ಮಾಡುವುದು ಸಮರ್ಪಕ ಎನಿಸುವುದಿಲ್ಲ. ಟೊಯಿಂಗ್‌ ದಂಡ ಶುಲ್ಕವನ್ನು ಕಡಿಮೆ ಮಾಡಲೇಬೇಕು.
– ನಿಶಿತ್‌ ಕುಮಾರ್‌, ಬೋಂದೆಲ್‌
(ದ್ವಿಚಕ್ರ ವಾಹನ ಮಾಲಕರು)

ವಿಶೇಷ ವರದಿ

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.