ಮತವ ಹಾಕು ಮನುಸ ನೀ ಚುನಾವಣೆಯ ದಿವಸ

ಕಸ ಸಂಗ್ರಹ ವಾಹನದಲ್ಲಿ ಮೊಳಗುತ್ತಿದೆ ಜಾಗೃತಿ ಹಾಡು

Team Udayavani, Apr 15, 2019, 6:00 AM IST

1404SLKP1

ಸುಳ್ಯ: ನಗರದ ಮನೆ-ಮನೆ, ಅಂಗಡಿ, ಮಾರುಕಟ್ಟೆಯಿಂದ ದಿನವಿಡಿ ಕಸ ಒಯ್ಯುವ ವಾಹನವೀಗ ಮತದಾನದ ಜಾಗೃತಿ ಸಂದೇಶ ಸಾರುತ್ತಿದೆ. ಮತವ ಹಾಕು ಮನುಸ ಚುನಾವಣೆಯ ದಿವಸ… ಎನ್ನುವ ಹಾಡು ಕೇಳಿಸಿ ಗಮನ ಸೆಳೆಯುತ್ತಿದೆ.

ನಗರದ ವಾರ್ಡ್‌ಗಳಲ್ಲಿ ಸಂಚರಿಸುವ ಕಸ ಸಂಗ್ರಹ ವಾಹನಗಳಲ್ಲಿ ಈ ಹಾಡು ಜನರಿಗೆ ಮತದಾನದ ಮಹತ್ವ ಸಾರುತ್ತಿದೆ. ಸ್ವೀಪ್‌ ಸಮಿತಿ ಜಾಗೃತಿ ಹಾಡನ್ನು ಪ್ರಾಯೋಜಿಸಿದೆ.

ಮತದಾನದ ಮಹತ್ವ
“ಒಳಿತು ಮಾಡು ಮನುಸ ನೀ ಇರೋದೆ ಮೂರು ದಿವಸ’ ಎನ್ನುವ ಕನ್ನಡ ಹಾಡಿನ ಟ್ಯೂನ್‌ಗೆ ಚುನಾವಣೆ ಜಾಗೃತಿ ಗೀತೆ ರೂಪದಲ್ಲಿ ಪದ್ಯ ಬರೆದು ಹಾಡಲಾಗಿದೆ. ಐದು ನಿಮಿಷದ ಈ ಹಾಡಿನಲ್ಲಿ ಮತದಾನದ ಮಹತ್ವ ಸಾರಲಾಗಿದೆ. ಮತದಾನ ಮಾಡಿದ ಮೇಲೆ ನಿಮ್ಮನ್ನ ಜಾಣ ಅನ್ನುತ್ತಾರೆ ಎನ್ನುವ ಸಾಲು ಇದರಲ್ಲಿದೆ. ನೀವು ಒಂದು ಮತ ಹಾಕಬೇಕು, ಮತವೇ ನಿಮ್ಮ ಹಕ್ಕು, ಮತದಾನ ಕಡ್ಡಾಯ ಎನ್ನುತ್ತಲೇ ಮತ ಚಲಾಯಿಸಲು ಮರೆಯಬೇಡಿ ಎಂದು ಹಾಡಿನ ಮೂಲಕ ಎಚ್ಚರಿಸಲಾಗುತ್ತಿದೆ.

ಓಟು ಮಾರಿಕೊಳ್ಳಬೇಡಿ, ನಾಡಿಗಾಗಿ ಜಾಗೃತಿ ಇರಲಿ ಅಣ್ಣಾ ಎಂದು ವಿನಂತಿಸುತ್ತಾ, ನೀನು ಚಲಾಯಿಸುವುದು ಒಂದು ಮತ ಮಾತ್ರ ಎಂದು ತಿಳಿಯಬೇಡಿ. ಅದು ದೇಶಕ್ಕಾಗಿ ಬಹಳ ಮುಖ್ಯ ಎನ್ನುವ ಸಂದೇಶ ಸಾರುತ್ತಾ ಸಾಗುವುದು ವಿಶೇಷ.

ಸೈರನ್‌ ಜಾಗದಲ್ಲಿ ಹಾಡು
ನ.ಪಂ.ನಲ್ಲಿ ಕಸ ಸಂಗ್ರಹಕ್ಕೆ ಮೂರು ವಾಹನಗಳು ಇವೆ. ಇದರಲ್ಲಿ ಎರಡು ವಾಹನ ಮನೆ-ಮನೆ ಸಂಚರಿಸಿದರೆ, ಇನ್ನೊಂದು ವಾಹನ ಮುಖ್ಯ ರಸ್ತೆಯ ಅಂಗಡಿ, ಮಾರುಕಟ್ಟೆಗಳಲ್ಲಿ ಕಸ ಸಂಗ್ರಹಿಸುತ್ತದೆ. ಈ ಮೂರು ವಾಹನಗಳಲ್ಲಿ ಈ ಜಾಗೃತಿ ಹಾಡು ಬಳಸಲಾಗಿದೆ. ನ.ಪಂ. ವತಿಯಿಂದ ಹಾಡು ಡೌನ್‌ಲೋಡ್‌ ಮಾಡಿ, ಪೆನ್‌ಡ್ರೈವ್‌ ಬಳಸಿ ಲಘು ಧ್ವನಿವರ್ಧಕದ ಮೂಲಕ ಬಿತ್ತರಿಸಲಾಗುತ್ತಿದೆೆ. ಕಸ ಲೋಡ್‌, ಅನ್‌ಲೋಡ್‌, ಸಂಚಾರದ ವೇಳೆಯಲ್ಲಿ ಹಾಡು ಮತ್ತೆ -ಮತ್ತೆ ಪುನರಾವರ್ತನೆ ಆಗುತ್ತದೆ. ಹಾಗಾಗಿ ಪೇಟೆಯಲ್ಲಿ “ಮತವ ಹಾಕು ಮನುಷ್ಯ ನೀ ಚುನಾವಣೆ ದಿವಸ…’ ಎನ್ನುವ ಹಾಡು ಕೇಳುತ್ತಲಿದೆ.

ಜಾಗೃತಿ ಹಾಡು
ಕಳೆದ ಶುಕ್ರವಾರದಿಂದ ಈ ಹಾಡನ್ನು ಹಾಕುತ್ತಿದ್ದೇವೆ. ಕಸ ವಾಹನಕ್ಕೆ ತನ್ನಿ ಎನ್ನುವ ಸೈರನ್‌ ಜತೆಗೆ ಮತದಾನ ಜಾಗೃತಿ ಹಾಡಿನ ಮೂಲಕ ಸಂಚಾರ ಆರಂಭಿಸಿದ್ದೇವೆ. ಕಸ ಹಾಕುವ ವೇಳೆ ಈ ಹಾಡು ನಾಗರಿಕರ ಗಮನ ಸೆಳೆಯುತ್ತಿದೆ.
ರಮೇಶ್‌
ವಾಹನ ಚಾಲಕ

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.