ಗೋಳಿತ್ತೂಟ್ಟು: ಲಾರಿ ಚಾಲಕನ ಕಟ್ಟಿ ಹಾಕಿ ದರೋಡೆ
ಕಾರಿನಲ್ಲಿ ಬಂದ ತಂಡದ ಕೃತ್ಯ
Team Udayavani, Mar 26, 2019, 6:30 AM IST
ಉಪ್ಪಿನಂಗಡಿ: ಗೋಳಿತ್ತೂಟ್ಟು ಗ್ರಾಮದ ಶಿರ್ಡಿಗುಡ್ಡೆಯಲ್ಲಿ ರಾ. ಹೆ. 75ರಲ್ಲಿ ರವಿವಾರ ತಡರಾತ್ರಿ 3 ಮಂದಿಯ ತಂಡವೊಂದು ಲಾರಿಯನ್ನು ತಡೆದು ದರೋಡೆ ಮಾಡಿರುವ ಘಟನೆ ಸಂಭವಿಸಿದೆ.
ಚಿಕ್ಕಬಳ್ಳಾಪುರದಿಂದ ಮಂಗಳೂರು ಕಡೆಗೆ ಹಿಂದೂಸ್ಥಾನ್ ಕಂಪೆನಿಗೆ ಸೇರಿದ ಸೋಪು, ಸೋಪಿನ ಹುಡಿ ಮೊದಲಾದವುಗಳನ್ನು ತರುತ್ತಿದ್ದ ಲಾರಿಯನ್ನು ನಸುಕಿನ ಜಾವ 2.30ರ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ ಬಿಳಿ ಇಂಡಿಕಾ ಕಾರಿನಲ್ಲಿ ಬಂದ ತಂಡ ಅಡ್ಡಗಟ್ಟಿತ್ತು. ಬಳಿಕ ಚಾಲಕ ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಅಂಬರೀಷ್ ಬಾಯಿಗೆ ಬಟ್ಟೆ ತುರುಕಿ, ಹಲ್ಲೆ ನಡೆಸಿ, ಕಟ್ಟಿ ಹಾಕಿ ಅವರಲ್ಲಿದ್ದ 5,200 ರೂ. ಮತ್ತು 2 ಸಾ. ರೂ. ಮೌಲ್ಯದ ಮೊಬೈಲ್ಫೋನನ್ನು ದೋಚಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾನೆ 5-30ರ ವೇಳೆಗೆ ಅದೇ ಸಂಸ್ಥೆಯ ಇನ್ನೊಂದು ಲಾರಿ ಬಂದಿದ್ದು, ಆಗ ದರೋಡೆ ಮಾಡಿರುವುದು ಬೆಳಕಿಗೆ ಬಂತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಚಾಲಕ ಅಂಬರೀಷ್ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
5 ವರ್ಷ ಹಿಂದೆಯೂ ನಡೆದಿತ್ತು
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಲಾರಿಯೊಂದರ ಚಾಲಕನನ್ನು ಕಟ್ಟಿ ಹಾಕಿ ಉಪ್ಪಿನಂಗಡಿಯ ಪಂಜಾಲದಲ್ಲಿ ದರೋಡೆ ಮಾಡಲಾಗಿತ್ತು. ಆ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿರಲಿಲ್ಲ.
ತನಿಖೆ ಬಳಿಕ ಸ್ಪಷ್ಟ ಚಿತ್ರಣ
ನಾವು ಲಾರಿಯಲ್ಲಿರುವ ಬಾಕ್ಸ್ಗಳನ್ನು ಖಾಲಿ ಮಾಡುತ್ತಿದ್ದೇವೆ. ಬಾಕ್ಸ್ನೊಳಗೆ ಶಂಕಾಸ್ಪದ ವಸ್ತುಗಳಿರುವ ಬಗ್ಗೆ ಈಗ ಹೇಳಲು ಸಾಧ್ಯವಿಲ್ಲ. ತನಿಖೆ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿಯಿಂದ ಕೆಲವು ಬಾಕ್ಸ್ ಕಳವು
ಲಾರಿಯಲ್ಲಿದ್ದ ಮೂರು ಬಾಕ್ಸ್ಗಳನ್ನು ದರೋಡೆಕೋರರು ಒಡೆದು ನೋಡಿದ್ದಾರೆ. ಅದನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿಯೇ ಬಿಟ್ಟು ಹೋಗಿದ್ದು, ಅದರಲ್ಲಿ ಅವರು ಏನನ್ನು ಹುಡುಕಾಡಿದ್ದಾರೆ ಎಂಬ ಕುತೂಹಲ ಮೂಡಿದೆ. ಕೆಲವು ಬಾಕ್ಸ್ಗಳನ್ನು ಜತೆಯಲ್ಲಿ ಕೊಂಡೊಯ್ದಿದ್ದಾರೆ ಎಂದೂ ತಿಳಿದು ಬಂದಿದೆ. ಘಟನೆ ಸಂಭವಿಸುವ ಹೊತ್ತಿಗೆ ಅನತಿ ದೂರಲ್ಲಿ ಜೀಪೊಂದು ಸಂಚರಿಸುತ್ತಿತ್ತೆಂದು ತಿಳಿಸಲಾಗಿದ್ದು, ಇದು ದರೋಡೆಕೋರರ ಬೆಂಗಾವಲು ಕೆಲಸ ಮಾಡುತ್ತಿರಬೇಕೆಂದು ಊಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್