ಕಾಮಗಾರಿ ಎಡವಟ್ಟು: ಅಪಾರ ಹಾನಿ
Team Udayavani, Jun 23, 2018, 11:47 AM IST
ಪೊಳಲಿ: ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ಕೃಷಿಕ ಅಡ್ದೂರು ಗ್ರಾಮದ ನೂಯಿಯ ಬಾಲಕೃಷ್ಣ ರಾವ್ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ನೂಯಿಯಲ್ಲಿ ಕಾಡನೀರು ಹೋಗಲು ಒಂದೇ ಒಂದು ಫರಂಬೋಕು ತೋಡಿದ್ದು, ಇದಕ್ಕೆ ತೆಂಕುಳಿಪಾಡಿ, ಇಂದಿರಾನಗರ, ಕಾಜಿಲದ ಕಾಡ ನೀರು ಹೋಗಿ ಫಲ್ಗುಣಿ ನದಿಗೆ ಸೇರುತ್ತಿತ್ತು. ಆದರೆ ರಸ್ತೆ ಕಾಮಗಾರಿ ನಡೆಸುವವರ ಎಡವಟ್ಟಿನಿಂದ ತೋಡು ಬಂದಾಗಿ ಕೃಷಿಭೂಮಿಗೆ ನೀರು ನುಗ್ಗುವಂತಾಗಿದೆ.
ಇಲ್ಲಿ 10ರಿಂದ 15 ಮನೆಗಳಿದ್ದು, ಉಳಿದವರೂ ಸಮಸ್ಯೆ ಅನುಭವಿಸಿದ್ದಾರೆ. ಇಲ್ಲಿನ ಫಾರೂಕ್, ಅದ್ಮೋನು, ಷರೀಫ್ ಮುಂತಾದವರ ಕೃಷಿಭೂಮಿಗೂ ಹಾನಿ ಉಂಟಾಗಿದೆ. ತೋಡು ಬಂದ್ ಮಾಡಿದ ಪರಿಣಾಮ ಬಾಲಕೃಷ್ಣ ರಾವ್ ಅವರ ಕೃಷಿ ಭೂಮಿಗೆ ನೀರು ನುಗ್ಗಿರುವುದು.