ದಾವಣಗೆರೆ : 386 ಜನರಿಗೆ ಕೋವಿಡ್ ಪಾಸಿಟಿವ್; ಆರು ಬಲಿ
Team Udayavani, May 1, 2021, 10:00 PM IST
ದಾವಣಗೆರೆ: ಕೋವಿಡ್ ಸೋಂಕಿನಿಂದ ಶನಿವಾರ ಜಿಲ್ಲೆಯಲ್ಲಿ ಆರು ಜನರು ಮೃತಪಟ್ಟಿದ್ದಾರೆ. 386 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 203 ಜನರು ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ:ವಿಜಯಪುರ: ತೋಟದ ಬಾವಿಯಲ್ಲಿ ಅಡಗಿದ್ದ ಬೃಹತ್ ಮೊಸಳೆ ಸೆರೆ
ಹರಿಹರದ 63 ವರ್ಷದ ಪುರುಷ, ಹುಚ್ಚವ್ವನಹಳ್ಳಿಯ 36 ವರ್ಷ ಮಹಿಳೆ, ದಾವಣಗೆರೆ ಎಸ್ಕೆಎಸ್ ಬಡಾವಣೆಯ 50 ವರ್ಷದ ಪುರುಷ, ಕಾಟೇಹಳ್ಳಿ ಲಂಬಾಣಿ ತಾಂಡಾದ 36 ವರ್ಷದ ಪುರುಷ, ಹರಿಹರ ತಾಲೂಕು ಭಾನುವಳ್ಳಿಯ 26 ವರ್ಷದ ಯುವಕ ಹಾಗೂ ದಾವಣಗೆರೆ ಡಿಸಿಎಂ ಕ್ವಾಟ್ರಸ್ನ 73 ವರ್ಷದ ಪುರುಷ ಮೃತಪಟ್ಟಿದ್ದಾರೆ.
ಹೊಸದಾಗಿ ದಾವಣಗೆರೆ ತಾಲೂಕಿನಲ್ಲಿ 243, ಹರಿಹರ ತಾಲೂಕಿನಲ್ಲಿ 53, ಜಗಳೂರು ತಾಲೂಕಿನಲ್ಲಿ 21, ಚನ್ನಗಿರಿ ತಾಲೂಕಿನಲ್ಲಿ 29, ಹೊನ್ನಾಳಿ ತಾಲೂಕಿನಲ್ಲಿ 21, ಹೊರ ಜಿಲ್ಲೆಯ 19 ಸೇರಿ ಒಟ್ಟು 386 ಪ್ರಕರಣಗಳು ವರದಿಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 26476ಪ್ರಕರಣಗಳು ದಾಖಲಾಗಿದ್ದು 24096 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಈವರೆಗೆ 283 ಜನರ ಸಾವು ಸಂಭವಿಸಿದ್ದು ಪ್ರಸ್ತುತ 2097 ಸಕ್ರಿಯ ಪ್ರಕರಣಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ