ಹಂಪಿ ಸ್ಮಾರಕ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ
Team Udayavani, Jun 25, 2021, 10:25 PM IST
ಪಿ.ಸತ್ಯನಾರಾಯಣ
ಹೊಸಪೇಟೆ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರಿಲ್ಲದೇ ಬಣಗುಡುತ್ತಿದ್ದ ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೀಗ ಪ್ರವಾಸಿಗರ ಸದ್ದು ಕೇಳಿ ಬರುತ್ತಿದೆ.
ವಿರುಪಾಕ್ಷೇಶ್ವರ ದೇವಾಲಯ ಪ್ರವೇಶ ಹೊರತುಪಡಿಸಿ, ಉಳಿದೆಲ್ಲ ಸ್ಮಾರಕಗಳ ವೀಕ್ಷಣೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಹಂಪಿ ಕಡೆ ಮುಖ ಮಾಡಿ, ಮೊದಲ ದಿನವೇ ಸ್ಮಾರಕ ವೀಕ್ಷಣೆ ಮಾಡಿದರು. ಕೋವಿಡ್ ಕಡಿಮೆಯಾಗುತ್ತಿದಂತೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಅನ್ಲಾಕ್ಗೆ ಆದೇಶ ನೀಡಿತ್ತಾದರೂ ಹಂಪಿ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಸಿಕ್ಕಿರಲ್ಲಿಲ್ಲ.
ಹಂಪಿಯಲ್ಲಿ ಗೈಡ್ಗಳು, ಆಟೋಚಾಲಕರು ಹಾಗೂ ಹಣ್ಣು-ಕಾಯಿ, ಸಣ್ಣಪುಟ್ಟ ಹೋಟೆಲ್, ಗೂಡಂಗಡಿ ವ್ಯಾಪಾರಿಗಳು ಇತರೆ ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು.
ವಿರೂಪಾಕ್ಷ ದೇವಾಲಯಕ್ಕೆ ಬೀಗ: ಹಂಪಿ ವಿರೂಪಾಕ್ಷೇಶ್ವರ ದೇವಾಲಯ, ಯಂತ್ರೋದ್ಧಾರಕ ಆಂಜನೇಯ, ಕೋದಂಡರಾಮ ಸ್ವಾಮಿ, ಉದ್ದಾನ ವೀರಭದ್ರೇಶ್ವರ ದೇವಾಲಯಗಳ ಪ್ರವೇಶ ನಿರ್ಬಂಧ ಹೇರಿದ್ದರಿಂದ ಆರ್ಚಕರಿಗೂ ಸಂಕಷ್ಟ ಎದುರಾಗಿತ್ತು.
ವಾನರರಿಗೆ ಸಂಕಷ್ಟ: ಪ್ರವಾಸಿಗರಿಂದ ಹಸಿವು ನೀಗಿಸಿಕೊಳ್ಳುತ್ತಿದ್ದ ಕೋತಿಗಳು, ಗೋವು-ಪ್ರಾಣಿ ಪಕ್ಷಿಗಳು ಆಹಾರವಿಲ್ಲದೇ ಮೂಕ ವೇದನೆ ಅನುಭವಿಸುವಂತಾಯಿತು. ಇದನ್ನು ಗಮನಿಸಿದ ವಿವಿಧ ಸಂಘಟನೆ ಪದಾ ಧಿಕಾರಿಗಳು, ಹೋಮ್ ಗಾರ್ಡ್, ಸ್ಥಳೀಯರು ಆಹಾರ-ನೀರು ನೀಡಿ ಮಾನವೀಯತೆ ತೋರಿದರು.
ಆಹಾರ್ ಕಿಟ್: ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಗೈಡ್ಗಳಿಗೆ ಕೆಲ ದಾನಿಗಳು ಆಹಾರ ಕಿಟ್ ನೀಡಿದರೆ ಇನ್ನೂ ಕೆಲವರು, ಆರ್ಥಿಕ ಸಹಾಯ ಮಾಡಿ ಸಹಾಯ ಹಸ್ತ ಚಾಚಿದರು. ಹಂಪಿಗೆ ಪ್ರವಾಸಿಗರ ಆಗಮನ್ ಎದುರು ನೋಡುತ್ತಿದ್ದ ಹೋಟೆಲ್-ಲಾಡ್ಜ್ ಇತರೆ ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದ ಉದ್ಯಮಿಗಳಿಗೆ ತುಸು ನೆಮ್ಮದಿ ಸಿಕ್ಕಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud; ಬಳ್ಳಾರಿ ಮಹಿಳೆಗೆ 17 ಲಕ್ಷ ರೂ.ವಂಚನೆ
Ballari: ತಿಪ್ಪೆಗುಂಡಿಯಲ್ಲಿ ಸಿಕ್ಕಿದ್ದ ಹೆಣ್ಣುಮಗುವನ್ನು ದತ್ತು ಪಡೆದ ವಿದೇಶಿ ದಂಪತಿ
Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ
Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು
MUST WATCH
ಹೊಸ ಸೇರ್ಪಡೆ
Bengaluru: ಬರ್ತ್ ಡೇ ಹೆಸರಲ್ಲಿ ಮಾಡೆಲ್, ಟೆಕ್ಕಿಗಳ ರೇವ್ ಪಾರ್ಟಿ; ಸಿಸಿಬಿ ಪೊಲೀಸರ ದಾಳಿ
IPL ಮುಂದಿನ ವರ್ಷವೂ ಧೋನಿ ಆಡುತ್ತಾರಾ..?; ರಾಯುಡು ಹೇಳಿದ್ದೇನು?
Farrukhabad; ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತದಾನ ಮಾಡಿದ ವ್ಯಕ್ತಿ; ವಿಡಿಯೋ ವೈರಲ್
Ebrahim Raisi; ಹೆಲಿಕಾಪ್ಟರ್ ದುರಂತದಲ್ಲಿ ಕೊನೆಯುಸಿರೆಳೆದ ಇರಾನ್ ಅಧ್ಯಕ್ಷ ರೈಸಿ
Unemployment; ಭಾರತದ ಯುವಕರಿಗೆ ಕೆಲಸ ಸಿಗಬೇಕಾದರೆ ಮೋದಿ ನಿವೃತ್ತಿಯಾಗಬೇಕು: ರಾಹುಲ್ ಗಾಂಧಿ