ಹೊನ್ನಾಳಿಯಲ್ಲಿ ವಾರಾಂತ್ಯ ಕರ್ಫ್ಯೂ ಯಶಸ್ವಿ
Team Udayavani, Jan 9, 2022, 4:42 PM IST
ಹೊನ್ನಾಳಿ: ವಾರಾಂತ್ಯ ಕಪ್ಯೂìನಿಂದಾಗಿ ಪಟ್ಟಣದಲ್ಲಿಶನಿವಾರ ಅಘೋಷಿತ ಬಂದ್ ನಿರ್ಮಾಣವಾಗಿತ್ತು.ಔಷಧ ಅಂಗಡಿಗಳು, ದಿನಸಿ ಅಂಗಡಿಗಳು, ಹಾಲುಸೇರಿದಂತೆ ಕೆಲ ಅಂಗಡಿಗಳು ತೆರೆದಿದ್ದನ್ನು ಬಿಟ್ಟರೆಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ಆಗಿದ್ದವು.ಎರಡನೇ ಶನಿವಾರವಾದ್ದರಿಂದ ಎಲ್ಲಾ ರಾಜ್ಯಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು.
ಕೇಂದ್ರಸರ್ಕಾರದ ಅಂಚೆ ಕಚೇರಿ, ಬಿಎಸ್ಎನ್ಎಲ್ಸೇರಿದಂತೆ ಇತರ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಹಳ್ಳಿಗಳಿಂದ ಜನರು ಪಟ್ಟಣಕ್ಕೆಬಾರದ ಕಾರಣ ಪಟ್ಟಣ ಬಿಕೋ ಎನ್ನುತ್ತಿತ್ತು. ಕೆಎಸ್ಆರ್ಟಿಸಿ ಬಸ್ಗಳು ಎಂದಿನಂತೆ ಸಂಚರಿಸಿದವು.ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ, ನಗರಹಾಗೂ ಪಟ್ಟಣಗಳಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಗಳು ಶನಿವಾರ ರಸ್ತೆಗೆ ಇಳಿಯಲಿಲ್ಲ.
ವಾರಾಂತ್ಯಕರ್ಫ್ಯೂ ಇದ್ದ ಕಾರಣ ಪ್ರಯಾಣಿಕರು ಮನೆಯಿಂದಹೊರಗೆ ಬರುವುದಿಲ್ಲ ಎನ್ನುವುದನ್ನು ಅರಿತ ಖಾಸಗಿಬಸ್ ಮಾಲೀಕರು ಬ ಸ್ಗಳನ್ನು ರಸ್ತೆಗೆ ಇಳಿಸಲಿಲ್ಲ.ಬಸ್ ಸಂಚಾರ ಆರಂಭಿಸಿದರೆ ಡೀಸೆಲ್ ಖರ್ಚುಸಹ ಹುಟ್ಟುವುದಿಲ್ಲ. ಹಾಗಾಗಿ ಬಸ್ ಸಂಚಾರಸ್ಥಗಿತಗೊಳಿಸಲಾಗಿದೆ ಎಂದು ಖಾಸಗಿ ಬಸ್ಮಾಲೀಕರೊಬ್ಬರು ಅಳಲು ತೋಡಿಕೊಂಡರು.
ಇನ್ನು ಕೂಲಿ ಕಾರ್ಮಿಕರು ಕೆಲಸವಿಲ್ಲದೆಪರದಾಡಿದರು. ಶ್ರೀಮಂತರು, ದೊಡ್ಡವ್ಯಾಪಾರಿಗಳು, ಸಂಬಳ ಬರುವವರು, ಸರ್ಕಾರಿನೌಕರರಿಗೆ ನಮ್ಮ ಕಷ್ಟ ಅರ್ಥವಾಗುವುದಿಲ್ಲ.ನಮ್ಮ ಉದರ ತುಂಬಬೇಕಾದರೆ ಕೂಲಿಗೆಹೋಗಲೇಬೇಕು. ಎರಡು ದಿನ ಕೂಲಿ ಇಲ್ಲದಿದ್ದರೆಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿನಿರ್ಮಾಣವಾಗುತ್ತದೆ ಎಂಬುದು ಹೆಸರು ಹೇಳಲುಇಚ್ಛಿಸದ ಕೂಲಿ ಕಾರ್ಮಿಕನೊಬ್ಬನ ನೋವು.ಸೊಪ್ಪು, ಮಾರುವವರು, ರಸ್ತೆ ಬದಿ ವ್ಯಾಪಾರಿಗಳಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಪಕ್ಷ ಗಳ ಗೆಲುವಿನ ಮತ ಲೆಕ್ಕಾಚಾರ ಚುನಾವಣಾ ಫಲಿತಾಂಶದ ಕಾತರ
LS Polls: ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿಗಳಿಂದ ಮತಗಟ್ಟೆಯಲ್ಲಿ ಮೊದಲ ಮತದಾನ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್
CT Ravi ಡಿಕೆಶಿಗೆ ಆಲೂ ಬಿತ್ತಿ ಬಂಗಾರ ಬೆಳೆಯುವ ವಿದ್ಯೆ ಕರಗತ
MUST WATCH
ಹೊಸ ಸೇರ್ಪಡೆ
Rajya Sabha Member,ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ನಿಧನ
ಅಗ್ನಿ ದೇವರು ಎನ್ನುವವರು ಅದರ ಜತೆ ಮಲಗುತ್ತಿರಾ ಎಂದಿದ್ದ ಬಸವಣ್ಣ : ನಿಜಗುಣಾನಂದ ಶ್ರೀ
Mundgod: ಬೈಕ್ ಗಳ ನಡುವೆ ಮುಖಾಮುಖಿ ; ಓರ್ವ ಸಾವು, ಇಬ್ಬರು ಗಂಭೀರ
Rahul Gandhi ಅವರಿಗೆ ಪತ್ರ ಬರೆದು ಬಹಿರಂಗ ಚರ್ಚೆಗೆ ಪ್ರತಿನಿಧಿ ಸಿದ್ದ ಎಂದ ತೇಜಸ್ವಿ ಸೂರ್ಯ
Nomination; ವಾರಾಣಸಿಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ