ಕಿಸಾನ್ ಯೋಜನೆಗೆ 1.22 ಲಕ್ಷ ರೈತರ ನೋಂದಣಿ
Team Udayavani, Jul 9, 2019, 2:42 PM IST
ಧಾರವಾಡ: ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ರೈತರನ್ನು ನೋಂದಾಯಿಸುವಲ್ಲಿ ವಿಶೇಷ ಕಾಳಜಿ ವಹಿಸಿ ರಾಜ್ಯಕ್ಕೆ ಜಿಲ್ಲೆ ಪ್ರಥಮ ಸ್ಥಾನ ಬರುವಂತೆ ಮಾಡಿರುವ ಡಿಸಿ ದೀಪಾ ಚೋಳನ್ ಅವರನ್ನು ವನಹಳ್ಳಿ ಗ್ರಾಮಸ್ಥರು ಸನ್ಮಾನಿಸಿದರು.
ಧಾರವಾಡ: ಜಿಲ್ಲೆಯ 1,66,000 ರೈತರ ಪೈಕಿ ಈಗಾಗಲೇ ಅರ್ಹರಾಗಿರುವ 1,22,000 ರೈತರನ್ನು ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಲಾಗಿದೆ. ಇನ್ನು ಜು. 10ರವರೆಗೆ ದಿನಾಂಕ ವಿಸ್ತರಿಸಿ ಆದೇಶ ನೀಡಿದ್ದು, ಅದರಂತೆ ಉಳಿದ ರೈತರನ್ನು ನೊಂದಾಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಡಿಸಿ ದೀಪಾ ಚೋಳನ್ ಹೇಳಿದರು.
ಡಿಸಿ ಕಚೇರಿಯಲ್ಲಿ ವನಹಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ತಹಶೀಲ್ದಾರ್ಗಳ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿ ರೈತರ ಮನೆ ಮನೆಗೆ ಹೋಗಿ ಅಗತ್ಯ ದಾಖಲಾತಿ ಸಂಗ್ರಹಿಸುತ್ತಿದ್ದಾರೆ. ಒಟ್ಟು ರೈತರಲ್ಲಿ ಪಿಎಂ ಕಿಸಾನ್ ಮಾರ್ಗಸೂಚಿ ಪ್ರಕಾರ ಸರ್ಕಾರಿ ನೌಕರ ಪಿಂಚಣಿ ಪಡೆಯುವ ವಕೀಲ, ವೈದ್ಯ, ಪೌತಿ, ಪರಸ್ಥಳದಲ್ಲಿ ವಾಸಿಸುವವರು ಸೇರಿ ವಿವಿಧ ಕಾರಣಗಳಿಂದ ಹೊರಗುಳಿಯುವ ರೈತರನ್ನು ಹೊರತು ಪಡಿಸಿದರೆ, ಜಿಲ್ಲೆಯ ಅರ್ಹ ರೈತರು ನೂರಕ್ಕೆ ನೂರರಷ್ಟು ಕಿಸಾನ್ ಯೋಜನೆಗೆ ನೋಂದಣಿ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ವನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ಅಶೋಕ ನಾವಳ್ಳಿ ಹಾಗೂ ಏಗಪ್ಪ ಮಟ್ಟಿ ಮಾತನಾಡಿ, ವನಹಳ್ಳಿ ಗ್ರಾಮದ ಒಟ್ಟು 589 ರೈತರ ಪೈಕಿ 440 ಜನ ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿದ್ದೇವೆ. ಉಳಿದಂತೆ ಸರ್ಕಾರಿ ನೌಕರರು ಮತ್ತು 117 ಜನ ಪರಸ್ಥಳದ ರೈತರಿದ್ದಾರೆ. ಇದರಲ್ಲಿ ಬೇರೆ ಕಡೆ ನೋಂದಾಯಿಸದ ಮತ್ತು ಅರ್ಹ ರೈತರನ್ನು ಪಿಎಂ ಕಿಸಾನ್ ಯೋಜನೆಗೆ ಒಳಪಡಿಸಲು ನಾವು ಸಹಕಾರ ನೀಡುತ್ತಿದ್ದೇವೆ. ಸ್ವತಃ ರೈತರನ್ನು ಸಂಪರ್ಕಿಸಿ ಅವರ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ಜು. 10ರೊಳಗೆ ಸಂಪೂರ್ಣ ಗುರಿ ಸಾಧಿಸಿ ನಮ್ಮ ಗ್ರಾಮವನ್ನು ಪಿಎಂ ಕಿಸಾನ್ ಯೋಜನೆಗೆ ಸಂಪೂರ್ಣವಾಗಿ ಒಳಪಟ್ಟ ಗ್ರಾಮವನ್ನಾಗಿ ಜಿಲ್ಲಾಧಿಕಾರಿಗಳಿಂದ ಘೋಷಣೆ ಮಾಡಿಸಿ ನಾಮಫಲಕ ಹಾಕಿಸುತ್ತೇವೆ ಎಂದರು.
ಗ್ರಾಮದ ರೈತರಾದ ಬಸಪ್ಪ ಅಂಗಡಿ, ಬಡೇಸಾಬ ನದಾಫ್, ಮುಕ್ತುಂಸಾಬ ಹಂಚಿನಾಳ, ಮಹಾದೇವಪ್ಪ ನರಗುಂದ, ಶೇಖಯ್ಯ ಸುತಗಟ್ಟಿ. ಚಂದ್ರಶೇಖರಯ್ಯ ಹಿರೇಮಠ, ನೀಲಪ್ಪ ಹೊಳಿಬಸಣ್ಣವರ ಮತ್ತು ಫಕೀರಪ್ಪ ಕುಬಳ್ಳಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್