ಧಾರವಾಡ: ಅನ್ನದ ಬಟ್ಟಲಿಗೆ ನಶೆ ಪೀಡೆಯ ಹುಣ್ಣು| ಗಾಂಜಾ ಬೆಳೆ ಅವ್ಯಾಹತ

ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಂಜಾ ಬೆಳೆ ಅವ್ಯಾಹತ

Team Udayavani, Sep 19, 2021, 1:46 PM IST

fgtyht

ವರದಿ : ಬಸವರಾಜ ಹೊಂಗಲ್‌

ಧಾರವಾಡ: ಹೊಲಗಳಲ್ಲಿ ನಳನಳಿಸುವ ಹತ್ತಿ ಬೆಳೆ, ಮಧ್ಯದಲ್ಲಿ ಕೇವಲ ಎರಡೇ ಸಾಲು ತಪ್ಪಲು (ಗಾಂಜಾ), ಒಳಗಡೆ ಹೋಗಲು ಆಗದಂತೆ ದಟ್ಟವಾಗಿ ಬೆಳೆದ ಕಬ್ಬು, ಬೆಳೆದವರಿಗೆ ಮಾತ್ರ ಸಿಕ್ಕುತ್ತಿದೆ ನಶೆಗಿಡ. ಗುಡ್ಡದ ವಾರಿಯ ಕಡ್ಡದಲ್ಲೂ ಗಡ್ಡಧಾರಿಗಳ ಕೃತ್ಯ. ಉಡತಾ ಪಂಜಾಬ್‌ ಆಗಿತ್ತು. ಈಗ ಉಡತಾ ಗೋವಾ, ಈ ಗೋವಾ ಲಿಂಕ್‌ಗೆ ಧಾರವಾಡ ಜಿಲ್ಲೆಯೇ ಹೆಡ್‌ ಕ್ವಾಟರ್‌!

ಹೌದು, ಉತ್ತಮ ಗುಣಮಟ್ಟದ ಹಾಗೂ ದೇಶ-ವಿದೇಶಗಳಿಗೆ ರಫ್ತಾಗುವಂತಹ ಆಲ್ಫೋನ್ಸೋ ಮಾವಿನ ಹಣ್ಣು ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲು ಹೆಸರುವಾಸಿಯಾದ ಧಾರವಾಡ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ “ಕಳ್ಳ ತಪ್ಪಲು ಕೃಷಿ’ ಸದ್ದು ಗದ್ದಲವಿಲ್ಲದೆ ಸಾಗಿದೆ. ಕಹಿಯಾದರೂ ಧಾರವಾಡಿಗರು ಈ ಸತ್ಯವನ್ನು ಅರಗಿಸಿಕೊಳ್ಳಲೇಬೇಕಾಗಿದ್ದು, ಯಾವ ಭೂಮಿಯಲ್ಲಿ ಹೂವು, ಹಣ್ಣು, ಅನ್ನ, ರೊಟ್ಟಿ ಬೆಳೆಯುತ್ತಿತ್ತೋ ಅದೇ ಮಣ್ಣಿನಲ್ಲಿ ನಕಲಿ ಮಣ್ಣಿನ ಮಕ್ಕಳು ನಶೆ ತಪ್ಪಲು ಬೆಳೆಯುವ ಕೈ ಚಳಕ ಆರಂಭಿಸಿದ್ದಾರೆ.

ಲಾವಣಿ ಹೊಲಗಳಲ್ಲಿ ಲಗಾಮಿಲ್ಲದ ಬೆಳೆ: ಇನ್ನು ಧಾರವಾಡ ಜಿಲ್ಲೆಯಲ್ಲಿ ಈಗಲೂ ಹೊಲಗಳಲ್ಲಿ ಕೃಷಿ ಮಾಡಲಾಗದ ನೌಕರರು, ಕಡು ಬಡವರು ಅನಿವಾರ್ಯವಾಗಿ ತಮ್ಮ ಹೊಲಗಳನ್ನು ಲಾವಣಿ ಅಂದರೆ ಭೂ ಬಾಡಿಗೆಯ ಆಧಾರದ ಮೇಲೆ ಇತರ ರೈತರಿಗೆ ಕೊಡುತ್ತಾರೆ. ಇಂತಹ ಹೊಲಗಳನ್ನು ಕೊಟ್ಟ ಮಾಲೀಕರು ಹೆಚ್ಚಾಗಿ ಅವರ ಹೊಲದಲ್ಲಿ ಏನು ಬೆಳೆಯುತ್ತಾರೆ ಎಂಬುದನ್ನು ಗಮನಿಸುವುದಿಲ್ಲ. ಯುಗಾದಿಯಿಂದ ಯುಗಾದಿವರೆಗಿನ ಈ ಲಾವಣಿ ಪದ್ಧತಿಯೇ ನಶೆ ಬೆಳೆಸುವ ಮಾಫಿಯಾಗೆ ದೊಡ್ಡ ಆಸರೆಯಾಗಿ ನಿಂತಿದೆ.

ಹುಬ್ಬಳ್ಳಿ, ಬೆಳಗಾವಿಯಲ್ಲಿನ ನಶೆ ನಂಟಿರುವ ಪೆಡ್ಲರ್‌ಗಳು ಲಾವಣಿ ರೂಪದಲ್ಲಿ ಪರಿಚಯಸ್ಥ ಕಳ್ಳ ರೈತರನ್ನು ಹಣ ಕೊಟ್ಟು ಬುಟ್ಟಿಗೆ ಹಾಕಿಕೊಂಡು ಅವರಿಂದ ನಶೆಪೀಡೆಯಾದ ಗಾಂಜಾ ಬೆಳೆ ಬೆಳೆಸುತ್ತಿದ್ದಾರೆ. ಸಾಲದ ಸುಳಿಯಲ್ಲಿ ಸಿಕ್ಕ, ಹಣದ ಅಡಚಣೆ ಇರುವ ರೈತರೇ ಇದಕ್ಕೆ ಬಲಿಯಾಗುತ್ತಿದ್ದಾರೆ.

ಗುಡ್ಡದ ಮೇಲೆಕಡ್ಡದ ಮಧ್ಯೆ: ಇನ್ನು ಗಾಂಜಾ ಕೇವಲ ಹೊಲಗಳಲ್ಲಿ ಬೆಳೆಯಲಾಗುತ್ತಿಲ್ಲ. ಬದಲಿಗೆ ಹೊಲಗಳ ಬದುಗಳಿಗೆ ಅಂಟಿಕೊಂಡಿರುವ ಅರಣ್ಯ ಪ್ರದೇಶಗಳಲ್ಲಿ ಕೂಡ ಅಲ್ಲಲ್ಲಿ ಗಾಂಜಾ ಬೆಳೆ ತಲೆ ಎತ್ತುತ್ತಿದೆ . ಕಾರಣ ಅರಣ್ಯದ ಪಕ್ಕದ ಹೊಲಗಳಲ್ಲಿ ಜನರ ಒಡನಾಟವೇ ಇರುವುದಿಲ್ಲ. ತಮ್ಮ ಹೊಲಗಳಲ್ಲಿಯೇ ಕೆಲಸ ಮಾಡುತ್ತಲೇ ಪಕ್ಕದ ಅರಣ್ಯದ ಮಧ್ಯದಲ್ಲಿ ಅಜ್ಞಾತ ಸ್ಥಳಗಳನ್ನು ಗುರುತು ಹಾಕಿ ಅಲ್ಲಲ್ಲಿ ಗಾಂಜಾ ಬೀಜಗಳನ್ನು ಬೀಸಾಡಿ ಬರುವ ಕಳ್ಳರು, ಆಗಾಗ ಅವುಗಳ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಅವು ಬೆಳೆದು ದೊಡ್ಡವಾಗುತ್ತಿದ್ದಂತೆಯೇ ಅವುಗಳನ್ನು ಕಳ್ಳದಾರಿ ಮೂಲಕ ಸಾಗಾಟ ಮಾಡುತ್ತಾರೆ. ಧಾರವಾಡ, ಕಲಘಟಗಿ ಮತ್ತು ಅಳ್ನಾವರ ತಾಲೂಕಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಹೊಲಗಳಲ್ಲಿ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ.

ಗೋವಾದ ನಂಟು: ಗಾಂಜಾಕ್ಕೆ ಅತ್ಯಂತ ದೊಡ್ಡ ಮಾರುಕಟ್ಟೆ ಕರ್ನಾಟಕದ ಪಕ್ಕದ ರಾಜ್ಯ ಗೋವಾ. ಹೀಗಾಗಿಯೇ ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಂಜಾ ನಂಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಇದರಲ್ಲಿ ರೈತರಿಗಿಂತಲೂ ಹೆಚ್ಚಾಗಿ ಇದರ ಸಾಗಾಟ ಮಾಡುವ ರೌಡಿಶೀಟರ್‌ಗಳು, ಡ್ರಗ್ಸ್‌ ಪೆಡ್ಲರ್‌ ಗಳ ಪಾತ್ರ ದೊಡ್ಡದಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಬಿತ್ತನೆಯಾದ ಗಾಂಜಾ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಿಗೆ ತೀವ್ರ ನಶೆ ನೀಡುವ ಟಾಪ್‌-1 ಮಾದಕ ವಸ್ತುವಾಗಿ ಬೆಳೆದು ನಿಲ್ಲುತ್ತದೆ.

ಟಾಪ್ ನ್ಯೂಸ್

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Reservation: ಜನಸಂಖ್ಯೆ ಆಧಾರದಲ್ಲಿ ಮೀಸಲು ನೀಡಲು ಸಿದ್ಧರೇ?

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.