ಡಾ| ಜೋಶಿ ಆಸ್ಪತ್ರೆಯಿಂದ ಫ‌ಸ್ಟ್‌ ಲೈಟ್ ಅಭಿಯಾನ

•ದಿನ ತುಂಬುವ ಮುನ್ನ ಜನಿಸಿದ ಹಲವು ಶಿಶುಗಳ ಅಂಗಾಂಗಗಳ ಪರೀಕ್ಷೆ ಮಾಡಿಸಬೇಕು

Team Udayavani, Jun 29, 2019, 11:47 AM IST

hubali-tdy-8..

ಹುಬ್ಬಳ್ಳಿ: ಅವಧಿಗೆ ಮುನ್ನ ಜನಿಸಿದ ಶಿಶುಗಳ ಕಣ್ಣಿನ ರಕ್ಷಣೆಗಾಗಿ ಮೈಕ್ರೊಫಿನಿಷ್‌ ಸಂಸ್ಥೆ ಸಹಯೋಗದಲ್ಲಿ ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ‘ಫಸ್ಟ್‌ ಲೈಟ್’ ಅಭಿಯಾನ ಹಮ್ಮಿಕೊಂಡಿದೆ ಎಂದು ನೇತ್ರ ತಜ್ಞ ಡಾ| ಎ.ಎಸ್‌. ಗುರುಪ್ರಸಾದ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಧಿಗೆ ಮುನ್ನ ಜನಿಸಿದ ಹಾಗೂ ಕಡಿಮೆ ತೂಕದೊಂದಿಗೆ ಜನಿಸಿದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರಿಂದಾಗಿ ಶಿಶುಗಳು ಜೀನವಪೂರ್ತಿ ಅಂಧತ್ವದಿಂದ ಬಳಲುವ ಸಾಧ್ಯತೆಯಿಂದಾಗಿ ಇದನ್ನು ಗಂಭೀರವಾಗಿ ಪರಿಗಣಿಸುವುದು ಅವಶ್ಯ ಎಂದರು.

ದಿನ ತುಂಬುವ ಮುನ್ನ ಜನಿಸಿದ ಹಲವು ಶಿಶುಗಳಲ್ಲಿ ಎಲ್ಲ ಅಂಗಾಂಗಗಳು ಸಮರ್ಪಕವಾಗಿ ಬೆಳೆದಿರಲ್ಲ. ಎಲ್ಲ ಅಂಗಾಂಗಗಳ ಪರೀಕ್ಷೆ ಮಾಡಿಸಬೇಕು. ಅದೇ ರೀತಿ ಕಣ್ಣಿನ ತಪಾಸಣೆ ಮಾಡಿಸುವುದು ಅವಶ್ಯ. ಕಣ್ಣು ಕೂಡ ಅಕ್ಷಿಪಟಲವು ರಕ್ತನಾಳಗಳಿಲ್ಲದೆ ನಿರ್ಮಾಣಗೊಂಡಿರುತ್ತದೆ. ಅಕ್ಷಿಪಟಲದ ರಕ್ತನಾಳಗಳ ಅಸಹಜ ಬೆಳವಣಿಗೆ ಅಂಧತ್ವಕ್ಕೆ ಕಾರಣವಾಗುತ್ತದೆ. ರಕ್ತ ಸ್ರವಿಕೆ ಹಾಗೂ ಅಕ್ಷಿಪಟಲದಲ್ಲಿ ದುರ್ಮಾಂಸ ಬೆಳೆಯುವುದರಿಂದ ದೃಷ್ಟಿಗೆ ಹಾನಿಯಾಗುತ್ತದೆ ಎಂದು ತಿಳಿಸಿದರು.

ಗರ್ಭವಾಸದ ಅವಧಿ ಹಾಗೂ ಜನಿಸಿದ ವೇಳೆಯಲ್ಲಿ ಶಿಶುವಿನ ತೂಕ ಇವೆರಡು ಅಂಶಗಳು ರೆಟಿನೋಪಥಿ ಆಫ್‌ ಪ್ರಿಮ್ಯಾಚುರಿಟಿಯ ಗಂಭೀರತೆಯನ್ನು ನಿರ್ಧರಿಸುತ್ತದೆ. 34 ವಾರಗಳಿಗೂ ಮುಂಚೆ ಜನಿಸಿದ ಹಾಗು ಜನಿಸಿದಾಗ 1700 ಗ್ರಾಮ್‌ಗಳಿಗಿಂತ ಕಡಿಮೆ ತೂಕ ಹೊಂದಿದ ಮಕ್ಕಳ ಕಣ್ಣುಗಳನ್ನು ನುರಿತ ನೇತ್ರ ತಜ್ಞರಿಂದ ತಪಾಸಣೆ ಮಾಡಿಸುವುದು ಅವಶ್ಯ ಎಂದರು.

ಅಂಕಿ ಅಂಶಗಳ ಪ್ರಕಾರ 2018ರಲ್ಲಿ 47 ದಶಲಕ್ಷ ಮಕ್ಕಳ ಜನನವಾಗಿದೆ. ಅವುಗಳಲ್ಲಿ ಶೇ.13ಮಕ್ಕಳು ದಿನ ತುಂಬುವ ಮೊದಲೇ ಜನಿಸಿವೆ. 16 ದಶಲಕ್ಷ ಶಿಶುಗಳು 2 ಕೆ.ಜಿಗಿಂತ ಕಡಿಮೆ ತೂಕ ಹೊಂದಿದ್ದವು. ದೇಶದಲ್ಲಿ ಕೇವಲ 24,000 ನೇತ್ರ ತಜ್ಞರಿದ್ದು, ಅವರಲ್ಲಿ ಅಕ್ಷಿಪಟಲ ತಜ್ಞರ ಸಂಖ್ಯೆ ಕೇವಲ 1200. ಅವರಲ್ಲಿ ಪರಿಣಿತರು ಕೇವಲ 150ರಷ್ಟಿದ್ದಾರೆ. ತಜ್ಞ ವೈದ್ಯರ ಕೊರತೆ ಹಾಗೂ ಅರಿವಿನ ಕೊರತೆಯಿಂದ ಶಿಶುಗಳಿಗೆ ಸಮರ್ಪಕವಾಗಿ ಕಣ್ಣಿನ ತಪಾಸಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.

ಡಾ| ಶ್ರೀನಿವಾಸ ಜೋಶಿ ಮಾತನಾಡಿ, ರೆಟಿನೋಪಥಿ ಆಫ್‌ ಪ್ರಿಮ್ಯಾಚುರಿಟಿ ಸಮಸ್ಯೆ ಪತ್ತೆ ಮಾಡಲು ನೂತನ ತಂತ್ರಜ್ಞಾನದ ರೆಟ್ಕ್ಯಾಮ್‌ ಶಟಲ್ ಯಂತ್ರ ಬಳಸಲಾಗುತ್ತದೆ. ಅಮೆರಿಕದಿಂದ ಯಂತ್ರವನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದನ್ನು ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ ಜಿಲ್ಲೆಗಳಲ್ಲಿ ಶಿಶುಗಳ ಕಣ್ಣುಗಳನ್ನು ತಪಾಸಣೆ ಮಾಡಲಾಗುವುದು. ಅಲ್ಲಿಂದ ಟೆಕ್ನಿಶಿಯನ್‌ ಯಂತ್ರದ ನೆರವಿನಿಂದ ಶಿಶುವಿನ ಕಣ್ಣುಗಳ ಇಮೇಜ್‌ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ಕಳಿಸುತ್ತಾರೆ. ಇಲ್ಲಿ ಇಮೇಜ್‌ ಪರೀಕ್ಷಿಸಿ ಚಿಕಿತ್ಸೆ ಕುರಿತು ಶಿಶುವಿನ ಪಾಲಕರಿಗೆ ತಿಳಿಸಲಾಗುತ್ತದೆ. ಯಂತ್ರವನ್ನು ಜೋಡಿಸಲ್ಪಟ್ಟ ವಾಹನ ವಿವಿಧ ಜಿಲ್ಲೆಗಳಲ್ಲಿ ಪ್ರಯಾಣ ಮಾಡುವುದು ಎಂದರು.

ಉಚಿತವಾಗಿ ತಪಾಸಣೆ ಮಾಡಲಾಗುತ್ತಿದ್ದು, ಬಡಜನರಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಗುವುದು. ಉದ್ಯಮಿಗಳ ಪ್ರೋತ್ಸಾಹ ದೊರೆತರೆ ಹೆಚ್ಚಿನ ಜನರಿಗೆ ಉಚಿತವಾಗಿ ಚಿಕಿತ್ಸೆ ಕಲ್ಪಿಸಲು ಸಾಧ್ಯವಾಗುತ್ತದೆ. ಶಿಶುಗಳ ನೇತ್ರ ರಕ್ಷಣೆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಎಂದು ಅಭಿಪ್ರಾಯಪಟ್ಟರು.

ಮೈಕ್ರೊಫಿನಿಶ್‌ ಸಂಸ್ಥೆಯ ಮಹೇಂದ್ರ ವಿಕಂಶಿ ಮಾತನಾಡಿ, ನಮ್ಮ ಸಂಸ್ಥೆ ಸಿಎಸ್‌ಆರ್‌ ಅನುದಾನ 90 ಲಕ್ಷ ರೂ.ವೆಚ್ಚದಲ್ಲಿ ಡಾ| ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ರೆಟ್ಕ್ಯಾಮ್‌ ಶಟಲ್ ಹಾಗೂ ಅದರ ಸೇವೆಗೆ ವಾಹನವನ್ನು ಉಚಿತವಾಗಿ ನೀಡಿದೆ. ದಿನ ತುಂಬುವ ಮುನ್ನವೇ ಜನಿಸುವ ಮಕ್ಕಳ ಕಣ್ಣಿನ ತಪಾಸಣೆಯ ಅಭಿಯಾನಕ್ಕೆ ಕೈಜೋಡಿಸುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಡಾ|ಎಂ.ಎಂ.ಜೋಶಿ, ಅನುಪಮಾ ವಿಕಂಶಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಶಿಶುಗಳ ಕಣ್ಣಿನ ಸಮಸ್ಯೆಯನ್ನು ಪತ್ತೆ ಮಾಡುವ ನವೀನ ತಂತ್ರಜ್ಞಾನದ ರೆಟ್ಕಮ್‌ ಶಟಲ್ ಯಂತ್ರವನ್ನು ಸೇವೆಗೆ ಮುಕ್ತಗೊಳಿಸಲಾಯಿತು. ಡಾ| ಎಂ.ಎಂ.ಜೋಶಿ, ಡಾ| ಎ.ಎಸ್‌.ಗುರುಪ್ರಸಾದ, ಡಾ|ಶ್ರೀನಿವಾಸ ಜೋಶಿ, ಮಹೇಂದ್ರ ವಿಕಂಶಿ, ಅನುಪಮಾ ವಿಕಂಶಿ ಇದ್ದರು.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.