ಶಾಲೆ ಮಕ್ಕಳ ಕಲಿಕೆಗೆ ನಟ ಸುದೀಪ ನೆರವು
Team Udayavani, Mar 18, 2021, 11:09 AM IST
ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆ ರಾಮನಗರದ ಹರಿಜನ ಹೆಣ್ಣು ಮಕ್ಕಳ ಪ್ರಾಥಮಿಕ ಅನುದಾನಿತಶಾಲೆಯ ಮಕ್ಕಳ ಕಲಿಕೆಗೆ ಯಾವುದೇ ರೀತಿ ಅಡಚಣೆಯಾಗದಂತೆ ಎಲ್ಲ ರೀತಿಯ ನೆರವು, ಬೆಂಬಲ ನೀಡಲಾಗುವುದು ಎಂದು ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ರಮೇಶ ಕಿಟ್ಟಿಹೇಳಿದರು.
ಬುಧವಾರ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಈ ಶಾಲೆ ತೆರವುಗೊಳಿಸಿದ ಬಗ್ಗೆ ಹಾಗೂ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಡುತ್ತಿರುವುದನ್ನು ನಟ ಸುದೀಪ ಮಾಧ್ಯಮಗಳಲ್ಲಿ ನೋಡಿ, ಪ್ರತಿಯೊಬ್ಬರಿಗೂ ಕಲಿಯುವ ಹಕ್ಕಿದೆ. ಈ ಶಾಲೆಯ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗಬಾರದೆಂದು ಇಲ್ಲಿಗೆಕಳುಹಿಸಿದ್ದಾರೆ. ಶಾಲೆಯ ಜಾಗ ವಿಷಯವಾಗಿ ಕಾನೂನಾತ್ಮಕ ಹೋರಾಟ ನಡೆದಿದೆ. ಶಾಲೆಯ ಆಡಳಿತ ಮಂಡಳಿಯವರ ಕಾನೂನು ಹೋರಾಟಕ್ಕೆ ಬೆಂಬಲವಾಗಿರುತ್ತೇವೆ. ಒಂದು ವೇಳೆ ಅವರು ಮುಂದಿನ ಎರಡು ತಿಂಗಳ ಅವಧಿಗಾಗಿ ಬೇರೆ ಕಟ್ಟಡದಲ್ಲಿ ಶಾಲೆ ನಡೆಸಲು ಮುಂದಾದರೆ ಅದಕ್ಕೆಬಾಡಿಗೆ ನೀಡಲಾಗುವುದು. ಶಾಲೆಯ ಶಾಶ್ವತಪರಿಹಾರಕ್ಕಾಗಿ ಪರ್ಯಾಯ ವ್ಯವಸ್ಥೆ ಸೇರಿಎಲ್ಲ ರೀತಿಯ ಸಹಾಯ-ಸಹಕಾರ ಹಾಗೂ ಬೆಂಬಲವಾಗಿರುತ್ತೇವೆ ಎಂದರು.
ಶಾಲೆಯ ಆಡಳಿತ ಮಂಡಳಿ ಸಂಸ್ಥಾಪಕಆನಂದ ಪಿಳ್ಳೆ, ಉಪಾಧ್ಯಕ್ಷೆ ರೈಚಿಲ್ ಪ್ರಕಾಶ,ಸದಸ್ಯ ಚಂದ್ರಕಾಂತ ಯಾದವ, ಸುನಿಲ ಸಾಂಡ್ರಾ ಮಾತನಾಡಿದರು.ಸೊಸೈಟಿಯ ನಿರ್ದೇಶಕರಾದ ನಾಗೇಂದ್ರ,ಪುಟ್ಟರಾಜ, ಬಿಇಒ ಶ್ರೀಶೈಲ ಕರೀಕಟ್ಟಿ, ಬಿಆರ್ಸಿ ಸಂಯೋಜಕ ಎಂ.ಎಸ್. ಶಿವಳ್ಳಿಮಠ, ಎಇಸಿಒ ಡಿ. ಲೋಕೇಶ, ಶಾಲೆಯ ಆಡಳಿತಮಂಡಳಿ ಅಧ್ಯಕ್ಷ ಅಂಥೋನಿ ಪ್ರಾನ್ಸಿಸ್, ಹಳೇವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು, ಶಾಲೆಯಮುಖ್ಯೋಪಾಧ್ಯಾಯ ವೀರಪ್ಪ ಹಂಚಿನಮನಿ, ಶಿಕ್ಷಕರು, ವಿದ್ಯಾರ್ಥಿಗಳು, ಅವರ ಪಾಲಕರು,ನಿವಾಸಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ