ಉದ್ಯಾನವನದತ್ತ ಆಳುವವರಿಗಿಲ್ಲ ಧ್ಯಾನ!
•ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ•ನವಲಗುಂದದಲ್ಲಿಲ್ಲ ಒಂದೇ ಒಂದು ಗಾರ್ಡನ್
Team Udayavani, Jun 14, 2019, 2:02 PM IST
ನವಲಗುಂದ: ಪಟ್ಟಣದ ನೀಲಮ್ಮನ ಕೆರೆಯ ತಡೆಗೋಡೆ ಒಡೆದಿರುವುದು.
ನವಲಗುಂದ: ಹೋರಾಟಗಳ ಮೂಲಕವೇ ರಾಜ್ಯದಲ್ಲಿ ಚಿರಪರಿಚಿತವಾದ ನವಲಗುಂದ ಪಟ್ಟಣದಲ್ಲಿ ಹೆಸರಿಗೂ ಒಂದು ಉದ್ಯಾನವನವಿಲ್ಲ. ಸಾರ್ವಜನಿಕರ ವಾಯುವಿಹಾರಕ್ಕೆ ಅನುಕೂಲ ಮಾಡಬೇಕೆಂಬ ಚಿಂತನೆ ಯಾವ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲಿ ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ.
ಇಂದು ವಾತಾವರಣ ಕಲುಷಿತಗೊಳ್ಳುತ್ತಿರುವುದರಿಂದ ಹಲವಾರು ರೋಗಗಳು ಮನುಷ್ಯನಿಗೆ ಅಂಟಿಕೊಳ್ಳುತ್ತಿವೆ. ಇದರಿಂದ ಹೊರಬರಲು, ಚಟುವಟಿಕೆಯಿಂದ ಇರಲು ಮಹಿಳೆಯರು, ವೃದ್ಧರು, ಮಕ್ಕಳು, ಸಾರ್ವಜನಿಕರಿಗೆ ವ್ಯಾಯಾಮ, ಯೋಗ, ವಾಯುವಿಹಾರದಂತಹ ದಿನನಿತ್ಯದ ಕಾಯಕ ಅವಶ್ಯ. ಆದರೆ ಪಟ್ಟಣದಲ್ಲಿ ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಒಂದು ಸುಸಜ್ಜಿತ ಉದ್ಯಾನವನ ಇಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆಳುವವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪಟ್ಟಣದಲ್ಲಿ ಸುಮಾರು 30 ಸಾವಿರ ಜನಸಂಖ್ಯೆಯಿದೆ. ಇಷ್ಟಿದ್ದರೂ ಒಂದು ಉದ್ಯಾನವಿಲ್ಲ. ಹೀಗಾಗಿ ವಾಯುವಿಹಾರಕ್ಕಾಗಿ ಗ್ರಾಮೀಣ ಭಾಗದ ರಸ್ತೆಗಳನ್ನು ಹಿಡಿದು ಹೋಗುವ ಪರಿಸ್ಥಿತಿಯಿದೆ. ಅಲ್ಲಿ ಮುಂಜಾನೆ ಮತ್ತು ಸಂಜೆ ವ್ಯಾಯಾಮ ಮಾಡುತ್ತಿರುವ ದೃಶ್ಯ ಸರ್ವೇಸಾಮಾನ್ಯವಾಗಿದೆ.
ಇನ್ನು ಮಕ್ಕಳು ಮನೋರಂಜನೆ ಹಾಗೂ ಆಟೋಟದಿಂದ ವಂಚಿತರಾಗಿ ಮನೆ ಹಾಗೂ ಶಾಲೆ ಪ್ರಾಂಗಣದಲ್ಲಿಯೇ ತಮ್ಮ ಸಮಯ ಕಳೆಯುವಂತಾಗಿದೆ. ಉದ್ಯಾನ ಮಾಡಿ, ಮಕ್ಕಳ ಆಟೋಟ ಸಲಕರಣೆಗಳನ್ನು ಅಳವಡಿಸಿದ್ದರೆ ಬಿಡುವಿನ ಸಮಯದಲ್ಲಿ ಮಕ್ಕಳಿಗೆ ಅನುಕೂಲವಾಗುತ್ತಿತ್ತು.
ಇಚ್ಛಾಶಕ್ತಿ ಕೊರತೆಗೆ ಸಾಕ್ಷಿ: ನೀಲಮ್ಮನ ಕೆರೆ ದಂಡೆ ಗಾರ್ಡನ್ ಮಾಡಲು ಯೋಗ್ಯ ಸ್ಥಳವಾಗಿದೆ. ಆದರೆ ಪ್ರಸ್ತುತ ಕುಡುಕರ ಹಾವಳಿ ಎಲ್ಲೆ ಮೀರಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಬಿದ್ದಿವೆ. ಸಿಗರೇಟ್, ಗಾಂಜಾ ಸೇದುವವರ ಸಂಖ್ಯೆಯೂ ಇಲ್ಲಿ ಹೆಚ್ಚಾಗುತ್ತೇವೆ. ತಿಂದು ಬಿಸಾಕಿದ ಮೂಳೆಗಳು ಅಲ್ಲಲ್ಲಿ ಬಿದ್ದು ದುರ್ವಾಸನೆ ಬರುತ್ತಿರುವುದರಿಂದ ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಈ ಹಿಂದೆ ಡಿಸಿ ಆಗಿದ್ದ ದರ್ಪಣ ಜೈನ ಅವರು ನೀಲಮ್ಮನ ಕೆರೆ ಅಭಿವೃದ್ಧಿಪಡಿಸಿ ಪಕ್ಕದ ಖುಲ್ಲಾ ಜಾಗೆಯನ್ನು ಉದ್ಯಾನವನ ಮಾಡಬೇಕೆಂಬ ಯೋಜನೆ ರೂಪಿಸಿದ್ದರು. ಆದರೆ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಪಟ್ಟಣವು ಉದ್ಯಾನವನದಿಂದ ವಂಚಿತವಾಗಿದೆ. ಈಗ ಪುರಸಭೆಯ ಹೊಸ ಆಡಳಿತ ಬರುತ್ತಿರುವುದರಿಂದ ಅವರ ಮುಂದೆ ಪಟ್ಟಣದ ಉದ್ಯಾನವನ, ಒಳಚರಂಡಿ ಯೋಜನೆ, ಕ್ರೀಡಾಂಗಣದಂತಹ ಅನೇಕ ಅಭಿವೃದ್ಧಿ ಕೆಲಸಗಳು ಇವೆ. ಅವುಗಳಿಗೆ ಹೆಚ್ಚಿನ ಒತ್ತು ನೀಡಿ ಕಾರ್ಯನಿರ್ವಹಿಸಬೇಕಾಗಿದೆ.
•ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ