ಹಾಜರಾಗಿದ್ದು ಏಳೇ ಅಧಿಕಾರಿಗಳು
•ಸತತ 2ನೇ ಬಾರಿಯೂ ಬಹುಮಂದಿ ಗೈರು•ಜನರ ಅಹವಾಲು ಕೇಳುವವರೇ ಇಲ್ಲ
Team Udayavani, Jul 27, 2019, 8:16 AM IST
ಉಪ್ಪಿನಬೆಟಗೇರಿ: ಪಾರ್ಶ್ವನಾಥ ಜೈನ ಬಸದಿಯ ಸಭಾಭವನದಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿಗಳನ್ನು ಸುರೇಶಬಾಬು ತಳವಾರ ತರಾಟೆಗೆ ತೆಗೆದುಕೊಂಡರು.
ಉಪ್ಪಿನಬೆಟಗೇರಿ: ಗ್ರಾಮದ ಪಾರ್ಶ್ವನಾಥ ಜೈನ ಬಸದಿಯ ಸಭಾಭವನದಲ್ಲಿ ಜರುಗಿದ ಗ್ರಾಮಸಭೆಗೆ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿದ್ದರೂ ಹಾಜರಿದ್ದ ಅಧಿಕಾರಿಗಳು ಮಾತ್ರ 7 ಮಂದಿ!
ಈ ಹಿಂದೆ ಆಯೋಜಿಸಿದ್ದ ಸಭೆಯನ್ನು ಅಧಿಕಾರಿಗಳ ಗೈರಿನ ಹಿನ್ನೆಲೆಯಲ್ಲೇ ಮುಂದೂಡಲಾಗಿತ್ತು. ಇದೀಗ ಮುಂದುವರಿದ ಸಭೆಗೂ ಮತ್ತೆ ಅಧಿಕಾರಿಗಳು ಗೈರಾಗಿದ್ದರಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜನತೆಯ ಸಮಸ್ಯೆ ಆಲಿಸಬೇಕಾದ ಅಧಿಕಾರಿಗಳ ಗೈರಿನಲ್ಲಿ ಸಭೆಯನ್ನೇಕೆ ಮಾಡುತ್ತೀರಿ ಎಂದು ಪಿಡಿಒ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಸುರೇಶಬಾಬು ತಳವಾರ ಮಾತನಾಡಿ, ಗ್ರಾಮಕ್ಕೆ ಮಲಪ್ರಭಾ ನದಿ ನೀರಿಗಾಗಿ ವಂತಿಗೆ ಸಂಗ್ರಹಿಸಿ ನೀಡಿದ್ದರೂ 15 ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದಾರೆ. ಬೇರೆ ಹಳ್ಳಿಗಳಿಗೆ ಪ್ರತಿದಿನ ನೀರು ಪೂರೈಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಗ್ರಾಮದ ಹೊಸ ಬಸ್ನಿಲ್ದಾಣವು ಸಂತೆ ಮಾರುಕಟ್ಟೆ ಹಾಗೂ ಖಾಸಗಿ ವಾಹನಗಳ ನಿಲ್ದಾಣವಾಗಿದೆ. ಗ್ರಾಪಂದವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಗುತ್ತಿಗೆದಾರನಿಗೆ ತಿಳಿಸುವುದಲ್ಲದೆ ಪ್ರತಿ ಶನಿವಾರ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಆಗುವ ತೊಂದರೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದಾಗ ಗರಗ ಠಾಣೆಯ ಅಧಿಕಾರಿ ಎಚ್.ಎಂ. ನರಗುಂದ ಪ್ರತಿಕ್ರಿಯಿಸಿ, ಅಂತಹವರ ಮೇಲೆ ನಾವು ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ನೋಡಲ್ ಅಧಿಕಾರಿ ಬಿ.ಎಲ್. ಓಲೇಕಾರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ರತ್ನವ್ವ ವಿಜಾಪುರ, ತಾಪಂ ಸದಸ್ಯೆ ಶಾಂತವ್ವ ಸಂಕಣ್ಣವರ, ಪಿಡಿಒ ಪುಷ್ಪಾವತಿ ಮೇದಾರ, ಸದಸ್ಯರಾದ ಶಿವಾನಂದ ಲಗಮಣ್ಣವರ, ಜ್ಯೋತೆಪ್ಪ ಜಾಧವ, ಖಲೀಲಅಹ್ಮದ ಜಾಲೇಗಾರ, ರೇವಣಶಿದ್ದಪ್ಪ ನವಲಗುಂದ, ಮಂಜುನಾಥ ವಿಜಾಪುರ, ಶಾಂತವ್ವ ದೊಡವಾಡ, ವಿದ್ಯಾ ಯಮೋಜಿ, ಆರೋಗ್ಯ ಇಲಾಖೆಯ ಸಿದ್ದು ಕುರಹಟ್ಟಿ, ಕೃಷಿ ಇಲಾಖೆಯ ಎಂ.ಕೆ. ಕಳ್ಳಿಮನಿ, ಅಂಗನವಾಡಿ ಮೇಲ್ವಿಚಾರಕಿ ಸುಜಾತಾ ಮೊದಲಾದವರಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ