ಬೀದಿಗೆ ಬಂತು ಕ್ಷೌರಿಕರ ಬದುಕು
Team Udayavani, Jul 15, 2019, 10:17 AM IST
ಗದಗ: ವಕಾರ ಸಾಲು ತೆರವು ಕಾರ್ಯಾಚರಣೆಯಿಂದ ಅಂಗಡಿ ಕಳೆದುಕೊಂಡಿರುವ ಕ್ಷೌರಿಕರು ರಸ್ತೆ ಬದಿಯಲ್ಲೇ ತಮ್ಮ ಕಾಯಕ ಮುಂದುವರಿಸಿದರು.
ಗದಗ: ಇಲ್ಲಿನ ನಗರಸಭೆ ವಕಾರ ಸಾಲು ತೆರವು ಕಾರ್ಯಾಚರಣೆ ಬಳಿಕ ಈ ಭಾಗದ ಅನೇಕ ಉದ್ಯಮಿಗಳು ವಿವಿಧ ಭಾಗಗಳಿಗೆ ಸ್ಥಳಾಂತಗೊಂಡಿದ್ದಾರೆ. ಆದರೆ, ಯಾವುದೇ ಆಸರೆ ಇಲ್ಲದ ಕೆಲ ಸಾಂಪ್ರದಾಯಿಕ ಕುಲಕಸುಬುದಾರರ ಬದುಕು ಬೀದಿಗೆ ಬಂದಿದೆ.
ಹಳೇ ಬಸ್ ನಿಲ್ದಾಣ ಸಮೀಪದ ವಕಾರಸಾಲಿನಲ್ಲಿ ಕ್ಷೌರಿಕ ಅಂಗಡಿ ಇಟ್ಟುಕೊಂಡು ಬದುಕಿನ ಬಂಡಿ ಎಳೆಯುತ್ತಿದ್ದ ಸವಿತಾ ಸಮಾಜದ ಐದಾರು ಅಂಗಡಿಗಳು ತೆರವುಗೊಂಡಿವೆ. ನೆಲೆ ಕಳೆದುಕೊಂಡಿರುವ ಕ್ಷೌರಿಕ ಅಂಗಡಿಕಾರರು, ರವಿವಾರ ಒಂದೆಡೆ ತೆರವು ಕಾರ್ಯ ನಡೆಯುತ್ತಿದ್ದರೆ, ಮತ್ತೂಂದೆಡೆ ತಮ್ಮ ವೃತ್ತಿ ಮುಂದುವರಿಸುವ ಮೂಲಕ ಸಾತ್ವಿಕ ಆಕ್ರೋಶ ಹಾಗೂ ಅಸಹಾಯಕತೆಯನ್ನೂ ಪ್ರದರ್ಶಿಸಿದರು.
ನಗರದ ಆಂಜನೇಯ ಸಿದ್ಧಪ್ಪ ಆದೋನಿ, ಗಿರಿರಾಜ ನಾರಾಯಣಪ್ಪ ಕೋಟೆಕಲ್, ಕೃಷ್ಣ ಬಾಯಲಗುಡ್ಡ, ಶ್ರೀನಿವಾಸ ಕೊಟೇಕಲ್ ಹಾಗೂ ಶ್ರೀನಿವಾಸ ರಾಂಪುರ ಎಂಬುವವರು ಅಂಗಡಿ ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಲೀಜ್ದಾರರಿಂದ ಬಾಡಿಗೆ ಮಳಿಗೆ ಪಡೆದು ಜೀವನ ಸಾಗಿಸುತ್ತಿದ್ದರು. ಆದರೆ, ಲೀಜ್ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಡೆಸಿದ ತೆರವು ಕಾರ್ಯಾಚರಣೆಯಲ್ಲಿ ಅನೇಕರು ತಮ್ಮ ಅಂಗಡಿ, ಮುಂಗಟ್ಟು ಕಳೆದುಕೊಂಡಿದ್ದಾರೆ. ತಮ್ಮ ಶಕ್ತಾನುಸಾರ ವಿವಿಧ ಕಡೆ ಸ್ಥಳಾಂತರಗೊಂಡಿದ್ದಾರೆ. ಆದರೆ, ಕೈಯಲ್ಲಿ ಕಾಸಿಲ್ಲ. ಕಸುಬಿಗೆ ನೆಲೆ ಇಲ್ಲದಂತಾಗಿದೆ. ಈ ಹಿಂದೆ ತಮ್ಮ ಅಂಗಡಿಗಳು ಇದ್ದ ಸ್ಥಳದಲ್ಲೇ ಬಯಲಿಗೆ ಒಂದು ಕುರ್ಚಿ ಹಾಕಿಕೊಂಡು ವೃತ್ತಿ ಮುಂದುವರಿಸಿರುವುದು ಅವರ ಅನಿರ್ವಾಯತೆ ಎತ್ತಿತೋರಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಂಗಡಿಕಾರರು, ಲಕ್ಷಾಂತರ ರೂ. ಹಾಕಿ ತಮ್ಮ ಅಂಗಡಿಗಳನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾಗಿತ್ತು. ಇವತ್ತಲ್ಲ ನಾಳೆ ಮಳಿಗೆಗಳನ್ನು ಬಿಡಿಸುತ್ತಾರೆ ಎಂಬುದು ಗೊತ್ತಿತ್ತು. ಆಗ ಟೆಂಡರ್ ಪಡೆದರಾಯ್ತು ಎಂದು ಭಾವಿಸಿದ್ದೆವು. ಆದರೆ, ಸಂಪೂರ್ಣವಾಗಿ ಕಟ್ಟಡಗಳ್ನನೇ ತೆರವುಗೊಳಿಸಲಾಗುತ್ತದೆ ಎಂಬುದನ್ನು ಕನಸು- ಮನಸಿನಲ್ಲೂ ಎಣಿಸಿರಿಲಿಲ್ಲ. ಹಾಕಿದ ದುಡ್ಡೂ ಹೋಯ್ತು, ಜಾಗನೂ ಹೋಯ್ತು ಎಂಬ ಪರಿಸ್ಥಿತಿ ಎದುರಾಗಿದೆ ಎಂದು ಅವರ ಅಳಲು.
ಇನ್ನು ಭವಿಷ್ಯದಲ್ಲಿ ನಿರ್ಮಿಸುವ ಅಥವಾ ಸರಕಾರದ ಕಾಂಪ್ಲೆಕ್ಸ್ಗಳಲ್ಲಿ ನಮ್ಮಂಥ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಜಿಲ್ಲಾಡಳಿತ ಮೊದಲ ಆದ್ಯತೆ ನೀಡಬೇಕು ಎಂಬುದು ಆಂಜನೇಯ ಅವರ ಬೇಡಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ