ಜನರ ಉದ್ಧರಿಸುವ ಧರ್ಮ ಒಡೆಯುವುದು ಸಲ್ಲ
ಮಾನವನ-ಮಾನವೀಯತೆಯ ಉಳಿವಿಗೆ ಎಲ್ಲ ಧರ್ಮಗಳು ಅತ್ಯುನ್ನತ ಸಂದೇಶ ನೀಡಿವೆ: ಸಂಯುಕ್ತಾ ಬಂಡಿ
Team Udayavani, Jul 14, 2019, 4:02 PM IST
ಗದಗ: ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಗುರು ರಕ್ಷೆ ಸ್ವೀಕರಿಸಿ ಸಂಯುಕ್ತಾ ಕಳಕಪ್ಪ ಬಂಡಿ ಮಾತನಾಡಿದರು.
ಗದಗ: ಎಲ್ಲ ಧರ್ಮಗಳು ಮಾನವನ ಉದ್ದಾರ, ಮಾನವೀಯತೆಯ ಉಳಿವಿಗೆ ಅತ್ಯುನ್ನತ ಸಂದೇಶ ನೀಡಿವೆ. ಇಂತಹ ಧರ್ಮವನ್ನು ಒಡೆಯುವ ಪ್ರಯತ್ನಗಳು ಸಲ್ಲದು ಎಂದು ಗಜೇಂದ್ರಗಡದ ಅಕ್ಕನ ಬಳಗದ ಅಧ್ಯಕ್ಷೆ ಸಂಯುಕ್ತಾ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.
ಆಷಾಢ ಮಾಸದ ನಿಮಿತ್ತ ಜ| ಪಂಚಾಚಾರ್ಯ ಸೇವಾ ಸಂಘದಿಂದ ಗದುಗಿನ ಕೆ.ಎಚ್.ಪಾಟೀಲ ಸಭಾಂಗಣದಲ್ಲಿ ಆಯೋಜಿಸಿರುವ ಕಾಶೀ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಹಾಸ್ವಾಮಿಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮ ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಕಾಶೀ ಶ್ರೀಗಳಿಂದ ಗುರುರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಬಹು ದೊಡ್ಡ ಸಂದೇಶ ನಮ್ಮ ಮುಂದಿದೆ. ಧರ್ಮವನ್ನು ಗೌರವಿಸುವ, ಧರ್ಮದ ಹಾದಿಯಲ್ಲಿ ಮುನ್ನಡೆಯುವ ಕೆಲಸ ಆಗಬೇಕು. ಆದರೆ, ಧರ್ಮವನ್ನು ಒಡೆಯುವ ಪ್ರಯತ್ನಗಳಿಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ಧರ್ಮವನ್ನು ಒಡೆದು ಇನ್ನೊಂದು ಧರ್ಮವನ್ನು ಸೃಷ್ಟಿಸಲಾಗದು. ಸೂರ್ಯ ಮತ್ತು ಚಂದ್ರನನ್ನು ಪ್ರತ್ಯೇಕಿಸಿ ಇನ್ನೊಂದು ಸೂರ್ಯ ಚಂದ್ರನನ್ನು ಹುಟ್ಟಿಸಲಾದೀತೆ ಹಾಗೆಯೇ ಧರ್ಮವೂ ಕೂಡ ಒಂದೇ ಆಗಿದೆ ಎಂದು ವಿಶ್ಲೇಷಿಸಿದರು.
ನಿಮ್ಮ ಆಚಾರ ವಿಚಾರಗಳು ವಿಭಿನ್ನವಾಗಿದ್ದರೂ, ಮಾನವರೆಲ್ಲರೂ ಒಂದೇ ಧರ್ಮದ ಹಾದಿಯಲ್ಲಿ ಗುರುವಿನ ಸನ್ಮಾರ್ಗದಲ್ಲಿ ಮುನ್ನಡೆದರೆ ಎಲ್ಲರಿಗೂ ಒಳಿತಾಗುವುದು. ಕಾಶೀ ಶ್ರೀಗಳಿಂದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಅಧ್ಯಾತ್ಮ ಪ್ರವಚನವು ಜನತೆಯಲ್ಲಿ ಭಕ್ತಿಯನ್ನು ಧರ್ಮ ಜಾಗೃತಿಯನ್ನುಂಟು ಮಾಡುತ್ತಿದೆ. ಇಂತಹ ಕಾರ್ಯಕ್ರಮಗಳು ಆಗಾಗ ನಡೆಯಲಿ. ಮಹಿಳೆಯರಿಗೆ ಉಡಿ ತುಂಬು ಕಾರ್ಯ ಕೈಗೊಳ್ಳುವ ಮೂಲಕ ಮಹಿಳೆಯರನ್ನು ಗೌರವಿಸುವ ಕಾರ್ಯ ನಡೆದಿದೆ. ಧರ್ಮ ಮಹಿಳೆಯರಿಂದ ಉಳಿದು ಬೆಳೆದು ಬಂದಿದೆ. ತಾಯಿಯ ಮೂಲಕ ಮಕ್ಕಳಿಗೆ ಧರ್ಮಸಂಸ್ಕಾರ ತನ್ಮೂಲಕ ಸಮಾಜದಲ್ಲಿ ಸಂಸ್ಕೃತಿ ಬೆಳೆಯುವಂತಾಗಲಿ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ