ಹೊರ ರೋಗಿಗಳೊಂದಿಗೆ ಸೇರಿ ವೈದ್ಯೆ ಪ್ರತಿಭಟನೆ!
ವೈದ್ಯರ ಅನುಪಸ್ಥಿತಿಗೆ ರೋಗಿಗಳು ಹೈರಾಣು ಆಸ್ಪತ್ರೆ ಅವ್ಯವಸ್ಥೆಗೆ ರೋಸಿ ಹೋದ ವೈದ್ಯೆ
Team Udayavani, May 26, 2019, 11:30 AM IST
ರೋಣ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳೊಂದಿಗೆ ವೈದ್ಯೆ ಎನ್.ಎನ್. ನಾಶಿಪುಡಿ ಪ್ರತಿಭಟನೆ ನಡೆಸಿದರು.
ರೋಣ: ಸೂಕ್ತ ಸಮಯದಲ್ಲಿ ವ್ಯವಸ್ಥಿತ ಚಿಕಿತ್ಸೆ ದೊರೆಯದ ಸಂದರ್ಭದಲ್ಲಿ ವೈದ್ಯರ ವಿರುದ್ಧ ರೋಗಿಗಳು ಪ್ರತಿಭಟನೆ ಮಾಡಿದ್ದನ್ನು ನೋಡಿದ್ದೇವೆ. ಆದರೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸಿದ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೋಗಿಗಳೊಂದಿಗೆ ವೈದ್ಯೆ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರೋಣ ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ವಿವಿಧ ಗ್ರಾಮಗಳಿಂದ ಆಗಮಿಸುತ್ತಾರೆ. ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ಪ್ರತಿನಿತ್ಯ ನಾಲ್ಕು ವೈದ್ಯರು ಬೇಕಾಗುತ್ತದೆ. ಆದರೆ ಶನಿವಾರ ಎನ್.ಎನ್. ನಾಶಿಪುಡಿಯವರನ್ನು ಹೊರತುಪಡಿಸಿ ಬೇರೆ ಯಾವುದೇ ವೈದ್ಯರಿರಲಿಲ್ಲ. ಇದರಿಂದ ಆಸ್ಪತ್ರೆ ಆಡಳಿತಾಧಿಕಾರಿ ವಿರುದ್ಧ ಆಕ್ರೋಶಗೊಂಡ ಹೊರ ರೋಗಿಗಳು ಹಾಗೂ ವೈದ್ಯೆ ಎನ್.ಎನ್.ನಾಶಿಪುಡಿ ಪ್ರತಿಭಟನೆ ನಡೆಸಿದರು.
ಡಾ| ಎನ್.ಎನ್. ನಾಶಿಪುಡಿ ಅಸಹಾಯಕತೆ ತೋರ್ಪಡಿಸಿ, ಶನಿವಾರ ನಾನು ಆಸ್ಪತ್ರೆಗೆ ಆಗಮಿಸಿದಾಗ ನೂರಾರು ರೋಗಿಗಳು ಸರದಿಯಲ್ಲಿ ಕಾಯುತ್ತಿದ್ದರು. ನನ್ನ ಪ್ರಯತ್ನ ಮೀರಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ರೋಗಿಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಒಬ್ಬಳಿಗೆ ನಿರ್ವಹಣೆ ಮಾಡಲು ಅಸಾಧ್ಯವಾದಾಗ ಗೈರಾಗಿದ್ದ ವೈದ್ಯರಿಗೆ ದೂರವಾಣಿ ಕರೆ ಮಾಡಿ ಆಗಮಿಸುವಂತೆ ಕೇಳಿಕೊಂಡರೂ ಸ್ಪಂದಿಸದಿರುವುದರಿಂದ ರೋಗಿ ಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಬೇಕಾಯಿತು ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆ ಹೊರ ರೋಗಿಗಳಾದ ಶೈನಾಜಬೀ ಮಾಟಲದಿನ್ನಿ, ಗೀರಿಜವ್ವ ನವಲಗುಂದ, ಗೌರಮ್ಮಾ ತಳ್ಳಿಕೇರಿ, ಸುಕನ್ಯಾ ಕೊಡಿಕೊಪ್ಪ, ಶೋಭಾ ಗಡ್ಡಿ, ನೂರಜಾನ್ ಬಳ್ಳಾರಿ, ಸುನಂದಾ ನಿಲಗುಂದ, ಸವಿತಾ ಹೂಗಾರ, ಸುವರ್ಣಾ ಇಟಗಿ, ಸುಧಾ ಕಮ್ಮಾರ, ಲಲಿತಾ ಹೊಸಮನಿ ಸೇರಿದಂತೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ