ವರ್ಷವಾದರೂ ದುರಸ್ತಿಯಾಗದ ನೀರಿನ ಘಟಕ
Team Udayavani, May 4, 2019, 2:17 PM IST
ರೋಣ: ಪಟ್ಟಣದ ಹೃದಯ ಭಾಗವೆಂದು ಕರೆಯಿಸಿಕೊಳ್ಳುವ ಪೋತರಾಜನಕಟ್ಟೆಯ ಪಕ್ಕದಲ್ಲಿರುವ ಶುದ್ಧ ನೀರಿನ ಘಟಕ ಬಂದಾಗಿ ವರ್ಷ ಕಳೆದರೂ ಇಲ್ಲಿನ ಪುರಸಭೆ ಅದರ ರಿಪೇರಿಗೆ ಮುಂದಾಗಿಲ್ಲ. ಇದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಪಟ್ಟಣಕ್ಕೆ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ನೀರಿಗಾಗಿ ಪಟ್ಟಣದ ಜನತೆ ಬೀದಿಗಿಳಿದು ಪ್ರತಿಭಟಿಸುವ ಸ್ಥಿತಿ ಬಂದೊದಗಿದೆ.
ಸದ್ಯ ಪಟ್ಟಣಕ್ಕೆ ಮಲಪ್ರಭಾ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಹತ್ತಿರವಿರುವ ಜಾಕ್ವೆಲ್ ಮೂಲಕ ಪಟ್ಟಣಕ್ಕೆ ನೀರನ್ನು ತಂದು ಇಲ್ಲಿ ಶುದ್ಧಿಕರಿಸಿ ನಂತರ ವಾರ್ಡ್ಗಳಿಗೆ ಪೂರೈಕೆ ಮಾಡಲಾಗುತ್ತದೆ. ಅಲ್ಲದೆ ಪಟ್ಟಣದಲ್ಲಿ ಒಟ್ಟು 42 ಬೋರ್ವೆಲ್ಗಳಿದ್ದು, ಅವುಗಳಲ್ಲಿ 31 ಚಾಲ್ತಿಯಲ್ಲಿವೆ.
ಕುಡಿಯುವ ನೀರಿನ ಇಲಾಖೆಯ ತಜ್ಞರು ಹೇಳುವಂತೆ ಒಂದು ಬೋರ್ವೆಲ್ನಿಂದ ಒಂದು ತಾಸಿಗೆ 4 ಸಾವಿರ ಲೀಟರ್ ನೀರು ಹೊರ ಬರುತ್ತದೆ. ಒಂದು ಬೋರ್ವೆಲ್ ದಿನಕ್ಕೆ 8 ಗಂಟೆ ಕೆಲಸ ಮಾಡುವ ಸಾಮರ್ಥ್ಯ ಹೊಂದಿದ್ದು, ಒಂದು ಬೋರ್ವೆಲ್ ದಿನಕ್ಕೆ 32 ಸಾವಿರ ಲೀಟರ್ ನೀರನ್ನು ಒದಗಿಸುತ್ತವೆ. ಒಟ್ಟು 31 ಬೋರ್ವೆಲ್ ಸೇರಿದರೆ ದಿನವೊಂದಕ್ಕೆ 10,24,000 ಲೀಟರ್ ನೀರು ಪೂರೈಕೆ ಮಾಡುವ ಸಾಮರ್ಥ್ಯ ಹೊಂದಿವೆ. ಇದು ಪಟ್ಟಣದ ಬೋರ್ವೆಲ್ಗಳಿಂದ ಸಿಗುವ ನೀರಿನ ಅಂಕಿ ಅಂಶವಾದರೆ, ಇನ್ನು ಚೊಳಚಗುಡ್ಡ ಜಾಕ್ವೆಲ್ನಲ್ಲಿ 50 ಎಚ್ಪಿ ಯಂತ್ರದ ಮೂಲಕ ನದಿಯಲ್ಲಿ ನೀರಿನ ಸಂಪನ್ಮೂಲ ಸರಿಯಾಗಿ ಇದ್ದರೆ ದಿನಕ್ಕೆ 10 ಲಕ್ಷ ಲೀಟರ್ ನೀರು ಪೂರೈಕೆ ಮಾಡ ಬಹುದಾಗಿದೆ.
ಪುರಸಭೆ ಮೇಲೆ ಸಂಶಯ: ಪಟ್ಟಣದ 23 ವಾರ್ಡ್ಗಳು ಸೇರಿ 25,500 ಜನಸಂಖ್ಯೆ ಹೊಂದಿದೆ. ನಗರ ಪ್ರದೇಶದಲ್ಲಿ ಒಬ್ಬ ಮನುಷ್ಯನಿಗೆ ದಿನ ಬಳಕೆಗೆ 100 ಲೀಟರ್ ಅಂದರೆ, ಒಟ್ಟು ಜನಸಂಖ್ಯೆಗೆ ಅನುಗುಣವಾಗಿ 26 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು, ಸದ್ಯ 20 ಲಕ್ಷ ಲೀಟರ್ಗೂ ಹೆಚ್ಚು ನೀರು ದೊರೆಯುತ್ತದೆ. ಇದರಿಂದ ಕನಿಷ್ಠ 2-3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬಹುದಾಗಿದೆ. ಆದರೆ ಈಗ ಪಟ್ಟಣಕ್ಕೆ 8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಪಟ್ಟಣದ ಜನತೆಗೆ ಪೂರೈಸಬೇಕಾದ ನೀರನ್ನು ಪುರಸಭೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಎಲ್ಲಿ ಹರಿಸುತ್ತಿದ್ದಾರೆ ಎಂಬ ಸಂಶಯ ಜನರಿಗೆ ಕಾಡುತ್ತಿದೆ.
ರೋಣ: ಪಟ್ಟಣದ ಪೋತರಾಜನಕಟ್ಟೆಯ ಬಳಿ ಸ್ಥಗಿತಗೊಂಡಿರುವ ಶುದ್ಧನೀರಿನ ಘಟಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಗದಗ: ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
MUST WATCH
ಹೊಸ ಸೇರ್ಪಡೆ
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ