ವರುಣನ ಮುನಿಸು; ಬತ್ತಿದ ತುಂಗಭದ್ರೆ

ತುಂಗಭದ್ರೆ ನೀರು ಖಾಲಿ ಖಾಲಿ, ಜಾಕ್‌ವೆಲ್ಗೆ ನೀರಿಲ್ಲ•ಅವಳಿ ನಗರಗಳಿಗೆ ನದಿ ನೀರು ಪೂರೈಕೆ ಸ್ಥಗಿತ

Team Udayavani, Jun 12, 2019, 10:01 AM IST

3

ಹರಿಹರ: ತಾಲೂಕಿನ ರಾಜನಹಳ್ಳಿ ಗ್ರಾಮ ಸಮೀಪದ ತುಂಗಭದ್ರ ನದಿ ದಡದಲ್ಲಿರುವ ದಾವಣಗೆರೆ ಪಂಪ್‌ಹೌಸ್‌ ಭಾಗದಲ್ಲಿ ನೀರಿನ ಹರಿವು ಕ್ಷೀಣಿಸಿರುವುದು.

ಹರಿಹರ: ಮಳೆ ಕೊರತೆಯಿಂದಾಗಿ ಜಿಲ್ಲೆಯ ಜನರ ಜೀವನದಿ ತುಂಗಭದ್ರೆ ಒಡಲು ಖಾಲಿಯಾಗುತ್ತಿದ್ದು, ಈ ಸಲ ಜೂನ್‌ ತಿಂಗಳಲ್ಲೂ ಹರಿಹರ, ದಾವಣಗೆರೆ ಸೇರಿದಂತೆ ನಡು ಕರ್ನಾಟಕದ ಜನರು ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ.

ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ-ದಿನಕ್ಕೆ ಇಳಿಮುಖವಾಗುತ್ತಿದ್ದು, ನಗರಕ್ಕೆ ನೀರು ಸರಬರಾಜು ಮಾಡುವ ಕವಲೆತ್ತು ಗ್ರಾಮದ ಜಾಕ್‌ವೆಲ್ ಹಾಗೂ ದಾವಣಗೆರೆ ನಗರಕ್ಕೆ ನೀರು ಪೂರೈಸುವ ರಾಜನಹಳ್ಳಿ ಜಾಕ್‌ವೆಲ್ಗೆ ನೀರು ಸಿಗದಂತಾಗಿದೆ.

ಹೊಲ-ಗದ್ದೆಗಳ ಬಸಿ ನೀರು ಹಳ್ಳ, ಕೊಳ್ಳಗಳ ಮೂಲಕ ಹರಿದು ನೀರಿನ ತೆಳುವಾದ ಹರಿವು ಇದ್ದಿದ್ದರಿಂದ ಕಳೆದ ಒಂದು ತಿಂಗಳಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಮಂಗಳವಾರ ಬೆಳಿಗ್ಗೆ 10ರಿಂದ ಕವಲೆತ್ತು ಜಾಕ್‌ವೆಲ್ಗೆ, ಸಂಜೆ 4ರಿಂದ ರಾಜನಹಳ್ಳಿ ಜಾಕ್‌ವೆಲ್ಗೆ ನೀರು ಹರಿಯುವುದು ಸಂಪೂರ್ಣ ಬಂದ್‌ ಆಗಿದ್ದರಿಂದ ನೀರನ್ನು ಪಂಪ್‌ ಮಾಡುವ ಮೋಟಾರುಗಳನ್ನು ಸ್ಥಗಿತಗೊಳಿಸಲಾಗಿದೆ.

ದಾವಣಗೆರೆಗೆ ಕುಂದುವಾಡ, ಟಿವಿ ಸ್ಟೇಷನ್‌ ಕೆರೆಗಳಿಂದ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಹರಿಹರಕ್ಕೆ ನದಿ ಮೂಲ ಮಾತ್ರ ಇರುವುದರಿಂದ ಇಡಿ ನಗರದ ಜನತೆ ಈಗ ಕೊಳವೆಬಾವಿ ಸಪ್ಪೆ ನೀರಿನ್ನೆ ಆಶ್ರಯಿಸಬೇಕಿದೆ. ಮಂಗಳವಾರ ಓವರ್‌ಹೆಡ್‌ ಟ್ಯಾಂಕ್‌ಗಳಲ್ಲಿದ್ದ ನೀರನ್ನು ನಗರದ ಕೆಲ ಬಡಾವಣೆಗಳಿಗೆ ಸರಬರಾಜು ಮಾಡಲಾಗಿದ್ದು, ಬುಧವಾರದಿಂದ ನೀರಿನ ಬವಣೆ ತೀವ್ರಗೊಳ್ಳಲಿದೆ.

ಟ್ಯಾಂಕರ್‌ ಸೇವೆ: ಸದ್ಯಕ್ಕೆ ನಗರದಲ್ಲಿ ಹ್ಯಾಂಡ್‌ಪಂಪ್‌, ಕಿರು ನೀರು ಸರಬರಾಜು ಸೇರಿ ಒಟ್ಟು 300 ಕೊಳವೆಬಾವಿಗಳಿವೆ. ನಗರದ ವಿವಿಧ ವಾರ್ಡ್‌ ಗಳಲ್ಲಿ 9 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಹಲವೆಡೆ ಈಗಾಗಲೇ ಐದು ಟ್ಯಾಂಕರ್‌ಗಳ ಮೂಲಕ ಕೊಳವೆಬಾವಿ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಇನ್ನೂ ಐದು ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಜೈಭೀಮ ನಗರ, ಕಾಳಿದಾಸ ನಗರ, ಬೆಂಕಿ ನಗರ, ವಿಜಯ ನಗರ, ಕೆ.ಆರ್‌.ನಗರ, ಕೇಶವ ನಗರ, ಆಶ್ರಯ ಕಾಲೋನಿ, ಟಿಪ್ಪು ನಗರ, ಹರ್ಲಾಪುರ ಭಾಗದ ಕೆಲವು ಪ್ರದೇಶಗಳಲ್ಲಿ ಕೊಳವೆಬಾವಿ ನೀರಿನ ಲಭ್ಯತೆ ಇಲ್ಲದ್ದರಿಂದ ಈ ಭಾಗದಲ್ಲಿ ಟ್ಯಾಂಕರ್‌ ಮೂಲಕ ನೀರು ಹರಿಸಲು ನಗರಸಭೆ ಸಿದ್ಧತೆ ನಡೆಸಿದೆ.

ಕಾರಣವೇನು?: ಮಳೆಗಾಲದಲ್ಲೂ ನದಿ ಇಳಿಮುಖವಾಗಲು ಈ ಸಲ ಮಳೆ ಕೊರತೆಯಾಗಿರುವುದು ನೈಸರ್ಗಿಕ ಕಾರಣವಾಗಿದೆ. ತಾಲ್ಲೂಕಿನಲ್ಲಿ ವಾಡಿಕೆಯಂತೆ ಏಪ್ರಿಲ್, ಮೇ, ಜೂನ್‌ ತಿಂಗಳಲ್ಲಿ ಸರಾಸರಿ 187.6 ಮಿ.ಮೀ. ಮಳೆಯಾಗಬೇಕು. ಆದರೆ ಇದುವರೆಗೆ ಕೇವಲ 42.68 ಮಿ.ಮೀ. ಮಾತ್ರ ಮಳೆಯಾಗಿದೆ. ಇನ್ನು ನದಿ ದಡದ ರೈತರು ಪಂಪ್‌ಗ್ಳ ಮೂಲಕ ತಮ್ಮ ಜಮೀನುಗಳಿಗೆ ನೀರೆತ್ತಲಾರಂಭಿಸಿದ್ದಾರೆ. ಇದಲ್ಲದೆ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿ ವೃದ್ಧಿ, ನದಿ ನೀರು ಆಶ್ರಿತ ಕೈಗಾರಿಕೆಗಳ ಹೆಚ್ಚಳ ಸೇರಿದಂತೆ ಮುಂತಾದ ಕಾರಣಗಳಿಂದ ನದಿ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿದೆ.

ಡ್ಯಾಂ ನೀರು ಬಿಡಬೇಕು: ದಿನೇ-ದಿನೇ ಮುಂಗಾರು ವಿಳಂಬವಾಗುತ್ತಿದ್ದು, ಸದ್ಯಕ್ಕೆ ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಅದೃಷ್ಟವಶಾತ್‌ ಭದ್ರಾ ಜಲಾಶಯದಲ್ಲಿ ಇನ್ನೂ ನೀರಿದ್ದು, ಸಂಬಂಧಿಸಿದ ಅಧಿಕಾರಿಗಳು ಕೂಡಲೇ ನೀರು ಹರಿಸಲು ಮುಂದಾಗಬೇಕಿದೆ.

ಡ್ಯಾಂ ನೀರು ಬರುತ್ತಿದೆ
ಭದ್ರಾ ಜಲಾಶಯದಿಂದ ನೀರು ಬಿಡಲಾಗಿದ್ದು, ಬುಧವಾರ ಸಂಜೆಯೊಳಗೆ ನೀರು ಹರಿಹರ ತಲುಪಲಿದೆ. ಕಾಡಾ ಸಮಿತಿಯವರಿಗೆ ತಾವು ಸೇರಿದಂತೆ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಮಾಡಿಕೊಂಡ ಮನವಿ ಮೇರೆಗೆ ಭದ್ರಾ ಡ್ಯಾಂನಿಂದ ನದಿಗೆ ನೀರು ಹರಿಸಲಾಗುತ್ತಿದೆ. ಬುಧವಾರ ಸಂಜೆ ಅಥವಾ ರಾತ್ರಿಯಿಂದ ಎರಡೂ ಜಾಕ್‌ವೆಲ್ಗಳು ಕಾರ್ಯರಂಭ ಮಾಡಲಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದು.
• ಎಸ್‌.ರಾಮಪ್ಪ, ಶಾಸಕ

ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದರಿಂದ ನಗರಕ್ಕೆ ಮಂಗಳವಾರದಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಳಿಸಲಾಗಿದೆ. ಸದ್ಯಕ್ಕೆ ಕೊಳವೆಬಾವಿ ನೀರು ಹಾಗೂ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. •ಎಸ್‌.ಎಸ್‌.ಬಿರಾದರ್‌,
ಎಇಇ, ನಗರಸಭೆ, ಹರಿಹರ

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.