ಸಕಲೇಶಪುರ: 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
Team Udayavani, Sep 7, 2021, 9:00 AM IST
ಸಕಲೇಶಪುರ: ತಾಲೂಕಿನ ಕಸಬಾ ಹೋಬಳಿ ಹೆಗ್ಗದ್ದೆ ಸಮೀಪದ ಕಾಫಿ ತೋಟವೊಂದರಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ಸಗೀರ್ ಹಿಡಿದು ರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.
ತಾಲೂಕಿನ ಹೆಗ್ಗದ್ದೆ ಸಮೀಪದ ಕಾಫಿ ತೋಟವೊಂದರಲ್ಲಿ ಸುಮಾರು 15 ಅಡಿಗೂ ಹೆಚ್ಚು ಉದ್ದದ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡಿತ್ತು. ಈ ವಿಚಾರವನ್ನು ಅಲ್ಲಿದ್ದ ತೋಟದ ಕಾರ್ಮಿಕರು ಪಟ್ಟಣದ ಉರಗ ತಜ್ಞ ಸ್ನೇಕ್ ಸಗೀರ್ ರವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಗೀರ್ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:“ದಿ ಆಲ್ಕೆಮಿಸ್ಟ್’ನಿಂದ ಹೀರೋ ಆದ ರಿಕ್ಷಾ ಚಾಲಕ
5ಎಸ್.ಕೆ.ಪಿ.ಪಿ 5 ಸಕಲೇಶಪುರ ತಾಲೂಕಿನ ಹೆಗ್ಗದ್ದೆ ಗ್ರಾಮದಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವೊಂದನ್ನು ಉರಗ ತಜ್ಞ ಸ್ನೇಕ್ ಸಗೀರ್ ಹಿಡಿದು ರಕ್ಷಿಸಿದ್ದಾರೆ.