ಬಂತು ಮತ್ತೂಂದು ಗೊಮ್ಮಟಮೂರ್ತಿ!


Team Udayavani, Jan 15, 2018, 3:15 PM IST

has-2.jpg

ಹಾಸನ: ಶ್ರವಣಬೆಳಗೊಳದ ವಿಂಧ್ಯಗಿರಿಯಲ್ಲಿ ನೆಲಸಿರುವ 58.8 ಎತ್ತರದ ವಿಶ್ವ ವಿಖ್ಯಾತ ಶ್ರೀ ಬಾಹುಬಲಿಮೂರ್ತಿಗೆ ಫೆ.17ರಿಂದ ನಡೆಯುವ 82ನೇ ಮಹಾಮಸ್ತಕಾಭಿಷೇಕಕ್ಕೆ ಭರದ ಸಿದ್ಧತೆ ನಡೆಯತ್ತಿದೆ. ಈ ಸಂದರ್ಭದಲ್ಲಿಯೇ 12 ಅಡಿ ಬಾಹುಬಲಿಮೂರ್ತಿಯ ಪ್ರತಿಷ್ಠಾಪನೆಯ ಸಂಭ್ರಮವೂ ಶ್ರವಣಬೆಳಗೊಳದಲ್ಲಿ ಆರಂಭವಾಗಿದೆ. ಮಿನಿ ಬಾಹುಬಲಿಮೂರ್ತಿ ಈ ಬಾರಿಯ ಮಹಾಮಸ್ತಕಾಭಿಷೇಕದ ಪ್ರಮುಖ ಆಕರ್ಷಣೆ ಆಗಲಿದೆ.

ನಾಲ್ಕು ವರ್ಷಗಳಿಂದ ರಾಮನಗರ ಜಿಲ್ಲೆ ಬಿಡದಿ ಬಳಿ 12 ಅಡಿ ಬಾಹುಬಲಿಮೂರ್ತಿಯ ಕೆತ್ತನೆ ನಡೆಯುತ್ತಿತ್ತು. ಭಾನುವಾರ ಸಂಕ್ರಮಣದ ಶುಭ ಸಂಭ್ರಮದಲ್ಲಿ ಹೊಸ ಮೂರ್ತಿ ಶ್ರವಣಬೆಳಗೊಳದ ಪುರ ಪ್ರವೇಶ ಮಾಡಿದೆ. ಸಂಜೆ 7.30ರ ವೇಳೆಗೆ ಲಾರಿಯಲ್ಲಿ ಶ್ರವಣಬೆಳಗೊಳ ಪ್ರವೇಶ ಮಾಡಿದ ಗೊಮ್ಮಟನ ಹೊಸ ಮೂರ್ತಿಯನ್ನು ಶ್ರವಣಬೆಳಗೊಳದ ಜೈನ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಸ್ವಾಮೀಜಿ ಧಾರ್ಮಿಕ ವಿಧಿ ವಿಧಾನ ಅನುಸರಿಸಿ ಸ್ವಾಗತಿಸಿದರು.

ಏಕೆ ಮಿನಿ ಬಾಹುಬಲಿ ಮೂರ್ತಿ?: ಕ್ರಿ.ಶ. 980ರಲ್ಲಿ ಶ್ರವಣಬೆಳಗೊಳದ ವಿಂಧ್ಯಗಿರಿಯ ತುತ್ತ ತುದಿಯಲ್ಲಿ ನಿರ್ಮಾಣವಾದ 58.8 ಅಡಿ ಎತ್ತರದ ಏಕ ಶಿಲಾ ಶ್ರೀ ಗೊಮ್ಮಟಮೂರ್ತಿ ಭೂ ಮಟ್ಟದಿಂದ ಸುಮಾರು 438 ಅಡಿ ಎತ್ತರದಲ್ಲಿದೆ. ಅಷ್ಟು ಎತ್ತರದ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಹತ್ತಿಯೇ ಜಗದ್ವಿಖ್ಯಾತ ಶ್ರೀ ಗೊಮ್ಮಟೇಶ್ವರ ಮೂರ್ತಿಯ ದರ್ಶನ ಮಾಡಬೇಕು. ಆದರೆ ಅಷ್ಟು ಎತ್ತರದ ಬೆಟ್ಟ ಹತ್ತಲಾಗದ ವಯೋವೃದ್ಧರು, ರೋಗಿಗಳು ಬಾಹುಬಲಿಮೂರ್ತಿಯ ದರ್ಶನದಿಂದ ವಂಚಿತರಾಗಬಾರದೆಂದು 10.1 ಅಡಿ ಎತ್ತರದ (ಪೀಠ ಸೇರಿ 12 ಅಡಿ) ಗೊಮ್ಮಟ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವಿಂಧ್ಯಗಿರಿಯಲ್ಲಿ ನೆಲಸಿರುವ ಗೊಮ್ಮಟಮೂರ್ತಿ ದರ್ಶನ ಮಾಡಲು ಸಾಧ್ಯವಾಗದವರು ಮಿನಿ ಗೊಮ್ಮಟಮೂರ್ತಿ ದರ್ಶನ ಮಾಡಲಿ ಎಂಬುದು ಉದ್ದೇಶ. ಶ್ರವಣಬೆಳಗೊಳದ ವಿಂಧ್ಯಗಿರಿ ಪ್ರವೇಶದ್ವಾರದ ಸಮೀಪವೇ ಇರುವ ಜೈನ ಮಠದ ಆವರಣದಲ್ಲಿ ಹೊಸ ಗೊಮ್ಮಟಮೂರ್ತಿಯನ್ನು ಪ್ರತಿಷ್ಠಾಪಿಸಲು ಉದ್ದೇಶಿಸಲಾಗಿದೆ. ಮಹಾ ಮಸ್ತಕಾಭಿಷೇಕ ಆರಂಭ ಆಗುವುದರೊಳಗೆ ಶುಭ ಮುಹೂರ್ತದಲ್ಲಿ ಹೊಸ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ.

ಯಾರ ಕೊಡುಗೆ?: ಬೆಂಗಳೂರಿನ ವ್ಯಾಪಾರೋದ್ಯಮಿ ಮಹಾವೀರ ಪ್ರಸಾದ್‌ ಜೈನ್‌ ಹಾಗೂ ನವೀನ್‌ ಕುಮಾರ್‌ ಜೈನ್‌ ಸಹೋದರರು 12 ಅಡಿ ಗೊಮ್ಮಟಮೂರ್ತಿಯನ್ನು ಕೊಡುಗೆ ನೀಡಿದ್ದಾರೆ. ರಾಜಸ್ಥಾನದಿಂದ ತರಿಸಿದ ಶಿಲೆಯಲ್ಲಿ
ಬಿಡದಿ ಬಳಿ ಖ್ಯಾತ ಶಿಲ್ಪಿ ಅಶೋಕ್‌ ಗುಡಿಗಾರ್‌ ಸುಂದರ ಮೂರ್ತಿಯನ್ನು ರೂಪಿಸಿದ್ದಾರೆ. ಗುಡಿಗಾರ್‌ ಅವರೊಂದಿಗೆ ಗೌತಮ್‌ ಮತ್ತು ಕುಮಾರ್‌ ಸತತ 4 ವರ್ಷಗಳಿಂದ ನಿರ್ಮಿಸಿದ್ದಾರೆ.

ಹೊಸ ಗೊಮ್ಮಟಮೂರ್ತಿಯೊಂದಿಗೆ ಶ್ರವಣಬೆಳಗೊಳಕ್ಕೆ ಆಗಮಿಸಿದ ಶಿಲ್ಪಿಗಳನ್ನು ಶ್ರೀ ಚಾರುಕೀರ್ತಿ ಸ್ವಾಮೀಜಿ ಸನ್ಮಾನಿಸಿದರು. ಶ್ರವಣಬೆಳಗೊಳಕ್ಕೆ ಏನಾದರೂ ಕೊಡುಗೆ (ಹರಕೆ ರೂಪದಲ್ಲಿ) ನೀಡಬೇಕೆಂದು ಪ್ರಸಾದ್‌ ಜೈನ್‌ ಕುಟುಂಬದವರು ನಿಶ್ಚಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ 12 ಅಡಿ ಬಾಹುಬಲಿಮೂರ್ತಿಯನ್ನೇ ಕೊಡುಗೆ ನೀಡಲು ನಿರ್ಧರಿಸಿದೆವು ಎಂದು ಪ್ರಸಾದ್‌ ಜೈನ್‌ ಅವರ ಕುಟುಂಬದ ಪ್ರಸಾದ್‌ ಜೈನ್‌ ಶ್ರವಣಬೆಳಗೊಳದಲ್ಲಿ ಭಾನುವಾರ ಮಾಹಿತಿ ನೀಡಿದರು. 

ಅಂತೂ ಶ್ರವಣಬೆಳಗೊಳದಲ್ಲಿ ವಿಂಧ್ಯಗಿರಿಯಲ್ಲಿ ನೆಲೆನಿಂತಿರುವ 58.8 ಎತ್ತರದ ಏಕ ಶಿಲಾ ಗೊಮ್ಮಟಮೂರ್ತಿಯ ಜೊತೆಗೆ ಇನ್ನು ಮುಂದೆ 12 ಅಡಿ ಗೊಮ್ಮಟಮೂರ್ತಿಯೂ ಮತ್ತೂಂದು ಆಕರ್ಷಣೆಯಾಗಲಿದೆ. 

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.