ಋತು ಆಧಾರಿತ ಕೃಷಿಗೆ ಮೇಘದೂತ್‌ ತಂತ್ರಾಂಶ


Team Udayavani, Dec 12, 2022, 4:26 PM IST

ಋತು ಆಧಾರಿತ ಕೃಷಿಗೆ ಮೇಘದೂತ್‌ ತಂತ್ರಾಂಶ

ಚನ್ನರಾಯಪಟ್ಟಣ: ಸ್ಮಾರ್ಟ್‌ ಫೋನ್‌ ಇದ್ದರೆ ಸಾಕು. ವಾತಾವರಣ ಆಧಾರಿತ ಕೃಷಿ ಚಟುವಟಿಕೆ ಕೈಗೊಳ್ಳಲುಸ್ಥಳೀಯ ಭಾಷೆಯಲ್ಲಿ ಮಾಹಿತಿ ದೊರೆಯುವಂತೆಮಾಡಿದೆ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ.

ಕೇಂದ್ರ ಸರ್ಕಾರದ ಕೃಷಿ ಮತ್ತು ಭೂ ವಿಜ್ಞಾನಸಚಿವಾಲಯ ನೆರವಿನೊಂದಿಗೆ ಅಭಿವೃದ್ಧಿ ಪಡಿಸಿರುವಮೇಘದೂತ್‌ ತಂತ್ರಾಂಶ ಅನ್ನದಾತನಿಗೆಮಾರ್ಗದರ್ಶನ ನೀಡಲಿದೆ. ಯಾವ ಋತುವಿನಲ್ಲಿಎಂತಹ ಬೆಳೆಗೆ ಮೊರೆ ಹೋಗಬೇಕು. ಹವಾ ಮಾನಕ್ಕೆಅನುಗುಣವಾಗಿ ಬೆಳೆಗಳಿಗೆ ತಗಲಬಹುದಾದ ಕೀಟ, ರೋಗಬಾಧೆಗಳ ಬಗ್ಗೆಯೂ ಮಾಹಿತಿ ಕ್ಷಣಾರ್ಧದಲ್ಲಿಪ್ರಾಪ್ತ ವಾಗಲಿದ್ದು ಕೃಷಿಕರಿಗೆ ಸಾಕಷ್ಟು ಇದರಿಂದ ಪ್ರಯೋಜವಾಗಿದೆ.

ದಿಲ್ಲಿಯ ಐಐಟಿಎಂ, ಪುಣೆ ಮತ್ತು ಐಎಂಡಿ ಸಹಯೋಗದೊಂದಿಗೆ ಹೈದರಾಬಾದ್ನ ಇಂಟನ್ಯಾಶನಲ್‌ ಕಾಸ್ಟ್‌ ರಿಸರ್ಚ್‌ ಇನ್‌ ಸ್ಟಿಟ್ಯೂಟ್‌ ಫಾರ್‌ ಸೆಮಿ-ಆಂಡ್‌ ಟ್ರಾಪಿಕ್‌ (ಐಸಿಆರ್‌ಐಎಸ್‌ಎಟಿ)ನಲ್ಲಿ ಡಿಜಿಟಲ್‌ ಅಗ್ರಿಕರಲ್‌ ರಿಸರ್ಚ್‌ ಥೀಮ್‌ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಅಗತ್ಯಕ್ಕೆ ಅನುಗುಣವಾದಮಾಹಿತಿ ಪೂರೈಸುವ ಕೆಲಸವನ್ನು ಆ್ಯಪ್‌ನಲ್ಲಿ ಅಳವಡಿಸಿದ್ದು ಸಾಕಷ್ಟು ಉಪಯೋಗವಾಗುತ್ತಿದೆ.

ರೈತಸ್ನೇಹಿ ಆಗಬೇಕಿದೆ: ಮೇಘದೂತ್‌ ತಂತ್ರಾಂಶ ಆರಂಭಿಕ ದಿನಗಳಲ್ಲಿ ಕರ್ನಾಟಕದ 30 ಸೇರಿ ದೇಶದ 150 ಜಿಲ್ಲೆಯಲ್ಲಿ ಚಾಲನೆ ನೀಡಿತ್ತು. ಇದೀಗ 668 ಜಿಲ್ಲೆಗಳಿಗೆ ವಿಸ್ತರಣೆಯಾಗಿದೆ. ಹಾಸನ ಜಿಲ್ಲೆಯೂ ಇದರಲ್ಲಿ ಸೇರಿದೆ. ಹಾಸನ ಜಿಲ್ಲೆಯಲ್ಲಿ ಕೈಗಾರಿಕೆಗಿಂತ ಹೆಚ್ಚು ಕೃಷಿ ಮಾಡುವ ಪ್ರದೇಶವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಎರಡು ವರ್ಷದ ಹಿಂದೆ ಇದನ್ನು ಕೇಂದ್ರ ಸರ್ಕಾರ ಪರಿಚಯಿಸಿದ್ದು ಈಗಾಗಲೆ ಸಾಕಷ್ಟು ಮಂದಿ ಇದರ ಲಾಭ ಪಡೆಯುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಜಿಲ್ಲೆಗಳಿಗೆ ಈ ತಂತ್ರಾಂಶ ಲಭ್ಯತೆ ಜನಸ್ನೇಹಿಯಾಗಿ ದೊರಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ, ಜಿಲ್ಲೆಯಲ್ಲಿ ಪ್ರಚಾರದ ಕೊರತೆಯಿಂದ ಅಷ್ಟಾಗಿ ರೈತ ಸ್ನೇಹಿಯಾಗಿಲ್ಲ. ವಿದ್ಯಾವಂತ ಯುವಕರು ಮಾತ್ರ ಇದರ ಪ್ರಯೋಜವ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಈ ತಂತ್ರಾಂಶ ಮೇಲ್ವಿಚಾರನ್ನು ನೇಮಿಸಿದರೇ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಯಾವ ಭಾಷೆಯಲ್ಲಿದೆ: ಕನ್ನಡ, ತೆಲಗು, ಮರಾಠಿ, ತಮಿಳು, ಹಿಂದಿ, ಇಂಗ್ಲಿಷ್‌ ಸೇರಿ ಒಟ್ಟು ದೇಶದ 10 ಭಾಷೆಯಲ್ಲಿ ಜಿಲ್ಲೆವಾರು ರೈತರಿಗೆ ವಾರದಲ್ಲಿ ಎರಡು ಸಲ ವಾತಾವರಣ ಅಂಶಗಳಾದ ಉಷ್ಣಾಂಶ, ಆದ್ರìತೆ, ಮಳೆ, ಮೋಡ, ಗಾಳಿಯ ದಿಕ್ಕು ಮತ್ತು ವೇಗ ಮುಂದಿನ ಐದು ದಿನಗಳಲ್ಲಿ ಇರಬಹುದಾದ ವಾತಾವರಣದ ಬಗ್ಗೆ ಮಾಹಿತಿ ನೀಡುತ್ತಿದೆ.

ವಾರದಲ್ಲಿ 2 ದಿವಸ ಅಪ್‌ಡೇಟ್‌: ಬದಲಾದ ಹವಾಮಾನದಲ್ಲಿ ಕೃಷಿಯನ್ನು ಲಾಭದಾಯಕವಾಗಿಸಲು ಭಾರತೀಯ ಹವಾಮಾನ ಇಲಾಖೆ ಮುಖಾಂತರ ಸಂಯೋಜಿತ ಕೃಷಿ ಸಲಹೆಗಳನ್ನು ರೈತರಿಗೆ ನೀಡುವ ಮಹತ್ವಕಾಂಕ್ಷೆಯೊಂದಿಗೆ ಬೆರಳ ತುದಿಯಲ್ಲಿ ಮಾಹಿತಿಯ ಆಗರ ತಂದಿಡಲಾಗಿದೆ, ಪ್ರತಿ ಮಂಗಳವಾರ, ಶುಕ್ರವಾರದಂದು ಅಗೋ ಮೆಟ್‌ ಫೀಲ್ಡ್ ಯೂನಿಟ್‌ಗಳು (ಎಎಂಎಫ್ಯು) ನೀಡುವ ಜಿಲ್ಲೆ, ಬೆಳೆವಾರು ಸಲಹೆಯನ್ನು ನೀಡಲಾಗುತ್ತಿದೆ.

ಯಾರ ಹೆಗಲ ಮೇಲಿದೆ ಜವಾಬ್ದಾರಿ: ದೇಶದ ಆಯಾ ಜಿಲ್ಲೆಯ ಬೆಳೆ ಪದ್ಧತಿ ಮತ್ತು ಭಿನ್ನವಾಗಿದ್ದು, ಆ್ಯಪ್‌ ಮೂಲಕ ಕೇಂದ್ರೀಕೃತ ಮಾಹಿತಿ ರವಾನೆ ಮಾಡಲಾಗದು ಎಂಬ ಉದ್ದೇಶದಿಂದ ಮಾಹಿತಿ ಅಪ್‌ ಡೇಟ್‌ ಮಾಡುವ ಜವಾಬ್ದಾರಿಯನ್ನು ಆಯಾ ಕೃಷಿ ಮತ್ತು ತೋಟ ಗಾರಿಕ ವಿವಿಗಳಿಗೆ ವಹಿಸಲಾಗಿದ್ದು, ವಿವಿಯಲ್ಲಿಯ ಗ್ರಾಮೀಣ ಕೃಷಿ ಮೌಸಮ್‌ ಸೇವಾ ವಿಭಾಗದಲ್ಲಿ ನೋಡಲ್‌ ಅಧಿಕಾರಿ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ನೀಡಿದ್ದು ಅವರೇ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಜಿಲ್ಲೆ ಮಾಹಿತಿ ಎಲ್ಲಿಂದ ಹೋಗುತ್ತದೆ: ಶಿವಮೊಗ್ಗದ ನವುಲೆಯಲ್ಲಿರುವ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲೂ ಈ ವಿಭಾಗವಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು, ಉಡುಪಿ, ಹಾಸನ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಿಗೆ ಮಾಹಿತಿ ರವಾನಿಸಲಿದೆ.

ಆ್ಯಪ್‌ನಲ್ಲಿ ಏನಿದೆ?: ಎಲ್ಲಬೆಳೆಗಳ ಕುರಿತು ಮಾಹಿತಿ, ಸರ್ಕಾದ ಅಧಿಸೂಚನೆ, ಭೂತಕಾಲ ಮತ್ತುವರ್ತಮಾನದ ಹವಾಮಾನ, ಮುನ್ಸೂಚನೆ, ಶೀಘ್ರ ನೋಟ, ಉಷ್ಣಾಂಶ, ಆದ್ರìತೆ, ಮೋಡ, ಗಾಳಿಯ ದಿಕ್ಕು, ವೇಗ ಹಾಗೂ ಇತ್ಯಾದಿ ಮಾಹಿತಿ ಇದಲ್ಲಿ ಇರಲಿದೆ.

ಮೇಘದೂತ್‌ ತಂತ್ರಾಂಶ ಕೇವಲ ಕೃಷಿ ತೋಟಗಾರಿಕೆಗಷ್ಟೇಸೀಮಿತವಾಗದೆ ಜಾನುವಾರುಗಳಮಾಹಿತಿಯನ್ನು ಒಳಗೊಂಡಿದೆ, ಋತುವಿಗೆ ಅನುಗುಣವಾಗಿ ಜಾನುವಾರಕ್ಕೆಬರಬಹುದಾದ ಕಾಯಿಲೆ, ಕೊಡಿಸಬೇಕಾದ ಲಸಿಕೆ, ಔಷಧಗಳ ಬಗ್ಗೆ ಪೂರ್ಣ ಮಾಹಿತಿ ಸಿಗಲಿದೆ, ಆಯಾ ಪ್ರದೇಶಕ್ಕೆಅನುಗುಣವಾಗಿ ಜಾನುವಾರು, ಕೋಳಿ,ಕುರಿ ಸಾಕಣೆ, ಮೀನುಗಾರಿಕೆ, ರೇಷ್ಮೆ ಎಲ್ಲಾ ಬಗ್ಗೆ ಮಾಹಿತಿ ದೊರೆಯುತ್ತಿದೆ.ಜನಾರ್ದನ್‌, ಕೃಷಿ ಇಲಾಖೆಸಹಾಯಕ ನಿರ್ದೇಶಕ.

ಮೇಘದೂತ್‌ ಉತ್ತಮವಾಗ ಆ್ಯಪ್‌ಆಗಿದ್ದು ಇದನ್ನು ಬಳಕೆ ಮಾಡಿದರೆ ಕೃಷಿ ವಿದ್ಯಾಲಯಕ್ಕೆ ತೆರಳುವ ಅಗತ್ಯ ಇರುವುದಿಲ್ಲ. ಸಾಕಷ್ಟು ವೈಜ್ಞಾನಿಕವಾಗಿ ಬೆಳೆ ಮಾಡಲು ಅನುಕೂಲ ಆಗಲಿದೆ.ಬಸವ ಯುವ ರೈತ ದಿಡಗ.

ಶಾಮಸುಂದರ್‌ ಕೆ. ಅಣ್ಣೇನಹಳಿ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Mekedatu Dam ನಿರ್ಮಾಣಕ್ಕೆ ಕೇಂದ್ರMekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡಯುವೆ: ದೇವೇಗೌಡ

Mekedatu Dam ನಿರ್ಮಾಣಕ್ಕೆ ಕೇಂದ್ರದ ಅನುಮತಿ ಪಡೆಯುವೆ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

Lok Sabha Election-2024; ಬಿಜೆಪಿ ನಾಯಕರಿಂದ ಅಸಹಕಾರ: ದೇವೇಗೌಡ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.