ವಾಹನ ಸವಾರರಿಗೆ ಒಕ್ಕಣೆ ಕಿರಿಕಿರಿ
Team Udayavani, Jan 18, 2022, 1:26 PM IST
ಚನ್ನರಾಯಪಟ್ಟಣ: ಪ್ರಸಕ್ತ ವರ್ಷ ಭರ್ಜರಿ ಮಳೆಯಾಗಿದ್ದು, ತಾಲೂಕಿನಲ್ಲಿ ರಾಗಿ ಸೇರಿದಂತೆ ವಿವಿಧ ಬಗೆಯ ದವಸ ಧಾನ್ಯ ಸಕಾಲಕ್ಕೆ ರೈತರ ಕೈಸೇರಿದ್ದು ಕಟಾವು ಮಾಡುತ್ತಿರುವ ರೈತರ ಪೈಕಿ ಹಲವರು ರಸ್ತೆಯಲ್ಲಿ ಒಕ್ಕಣೆ ಆರಂಭಿಸಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ಕಿರಿಕಿರಿ ಉಂಟಾಗುತ್ತಿದೆ.
ಸುಗ್ಗಿ ಹಬ್ಬ ಮುಗಿದಿದ್ದು ತಾಲೂಕಿನಲ್ಲಿ ಭತ್ತ, ರಾಗಿ, ಹುರುಳಿ, ಜೋಳ, ಸೇರಿದಂತೆ ದವಸ ಧಾನ್ಯಗಳ ಒಕ್ಕಣೆ ಕೆಲಸ ಪ್ರಾರಂಭಿಸಿರುವ ರೈತರು ಒಕ್ಕಣೆಗೆ ಕಣಮಾಡಿಕೊಳ್ಳದೆ ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ತಮ್ಮ ಕೆಲಸ ಆರಂಭಿಸಿದ್ದಾರೆ. ಇದರಿಂದ ಹಲವು ತೊಂದರೆಗಳುಉಂಟಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಸೇರಿದಂತೆಕಾರುಗಳನ್ನು ರಸ್ತೆಯಲ್ಲಿ ಸರಾಗವಾಗಿ ಸಂಚಾರ ಮಾಡಲು ಚಾಲಕರು ಹರಸಾಹಸ ಪಡುವಂತಾಗಿದೆ.
ಪ್ರಮುಖ ರಸ್ತೆಗಳಾವು: ಪ್ರವಾಸಿ ಕೇಂದ್ರಗಳಿಗೆ ತೆರಳುವ ರಸ್ತೆಗಳಾದ ಶ್ರವಣಬೆಳಗೊಳದಿಂದ ಮೇಲುಕೋಟೆ ರಸ್ತೆ, ಶ್ರವಣಬೆಳಗೊಳದಿಂದ ಸಾಸಲು ಶ್ರೀಕ್ಷೇತ್ರಕ್ಕೆ ತೆರಳುವ ರಸ್ತೆ, ಬಾಗೂರು ಹೋಬಳಿ ಯಿಂದ ಶ್ರೀಕ್ಷೇತ್ರನಾಗರನವಿಲೆಗೆ ತೆರಳುವ ರಸ್ತೆ, ಶ್ರವಣಬೆಳಗೊಳ- ನಾಗಮಂಗಲ ರಸ್ತೆ, ಹಿರೀಸಾವೆ- ಕೆಆರ್ಪೇಟೆ ರಸ್ತೆ, ಹಾಸನ, ಅರಸೀಕೆರೆ, ಗಂಡಸಿ ಹಾಗೂ ಚನ್ನರಾಯಪಟ್ಟಣದಿಂದ ಶ್ರೀಕ್ಷೇತ್ರ ಕುಂದೂರು ಮಠಕ್ಕೆಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿ ಒಕ್ಕಣೆಗಾಗಿರೈತರು ಹುಲ್ಲು ಹಾಕಿರುತ್ತಾರೆ. ಹೀಗಾಗಿ ಈ ಗ್ರಾಮಗಳ ರಸ್ತೆಗಳು ಸಂಪೂರ್ಣ ಕಣವಾಗಿ ಮಾರ್ಪಟ್ಟಿವೆ.
ರಸ್ತೆ ತುಂಬೆಲ್ಲಾ ಹುಲ್ಲು ಒಕ್ಕಣೆ: ರಸ್ತೆ ಬದಿ ಹೊಲಗದ್ದೆ ಹೊಂದಿರುವ ರೈತರು ಬೆಳೆಗಳನ್ನು ಕಟಾವು ಮಾಡಿ ರಸ್ತೆ ಅಕ್ಕ-ಪಕ್ಕದಲ್ಲಿ ಮೆದೆ ಮಾಡಿದ್ದಾರೆ, ಇನ್ನು ಹಲವು ರಾಜ್ಯಹೆದ್ದಾರಿ ಸೇರಿದಂತೆ ಡಾಂಬರ್ ರಸ್ತೆಯಲ್ಲೆ ಬೆಳೆಗಳನ್ನು ರಾಶಿ ಮಾಡುತ್ತಾ ಒಕ್ಕಣೆಯ ಕಣ ಮಾಡಿಕೊಂಡಿದ್ದಾರೆ,ವಿವಿಧ ಬೆಳೆ ಇನ್ನಿತರ ಧಾನ್ಯಗಳ ಹುಲ್ಲುಗಳನ್ನು ಮಂಡಿ ಯುದ್ದಕ್ಕೆ ಹಾಕಿ ಸುಮಾರು 100 ಮೀ. ಉದ್ದ ರಸ್ತೆ ತುಂಬೆಲ್ಲಾ ಹಾಕು ವುದು ಸಾಮಾನ್ಯವಾಗುತ್ತಿದೆ, ಇದರಿಂದ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ದ್ವಿ ಚಕ್ರ ಸವಾ ರರು, ಕಾರು, ಜೀಪು, ಆಟೋ ಸೇರಿದಂತೆ ವಾಹನಗಳ ಸವಾರರು ಸಂಚರಿಸಲು ಹೈರಾಣಾಗಿದ್ದಾರೆ.
ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ: ರಸ್ತೆಯಲ್ಲಿ ಈ ರೀತಿ ರಾಶಿ ಮಾಡುವುದರಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತದೆ. ವಾಹನ ಸವಾರರು ಹಲವು ತೊಂದರೆ ಯನ್ನು ಎದುರಿಸುವುದಲ್ಲೆ ಅಪಾಯಕ್ಕೆ ತುತ್ತಾಗುತ್ತಿದ್ದಾರೆ.ರಸ್ತೆ ಮೇಲಿನ ಒಕ್ಕಣೆಯಿಂದಾಗಿ ಸವಾರರು ಹಳ್ಳಕೊಳ್ಳಗಳಗುಂಡಿ ಬಿದ್ದಿರುವ ರಸ್ತೆ ಬದಿಯನ್ನು ಆಶ್ರಯಿಸುವ ಸ್ಥಿತಿನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚಕ್ರಕ್ಕೆ ದವಸ ಧಾನ್ಯದಹುಲ್ಲು ಹಾಗೂ ಕಡ್ಡಿಗಳು ಸುತ್ತಿಕೊಂಡು ಬೆಂಕಿ ಉಂಟಾದರೆಮುಂದೇನು ಎಂಬ ಆತಂಕದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಕಿರಿ ಕಿರಿಯಲ್ಲಿ ಸಂಚಾರ: ರಸ್ತೆಗಳಲ್ಲಿ ಮಂಡಿಯುದ್ದ ಒಕ್ಕಣೆ ಮಾಡಲಾಗಿರುವ ಹುಲ್ಲಿನ ಮೇಲೆ ಲಘು ವಾಹನಗಳು ರಸ್ತೆಯ ಮೇಲೆ ನಿಧಾನವಾಗಿ ಭಯದ ಆತಂಕದಲ್ಲಿ ಚಲಿಸುವಂತ ಅನಿವಾರ್ಯತೆ ಎದುರಾಗಿದೆ. ಇನ್ನೊಂದೆಡೆ ಕಾರು, ಜೀಪು, ಆಟೋ ಇನ್ನಿತರ ವಾಹನ ಸಂಚರಿಸಲು ಚಾಲಕರು ಕಿರಿಕಿರಿ ಅನುಭವಿಸುತ್ತಿದ್ದು, ಆರ್ಟಿಒ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ರೈತರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಅನಾಹುತ ಸಂಭವಿಸುವ ಸಾಧ್ಯತೆ: ನುಣುಪಾದ ಹುಲ್ಲಿನ ಮೇಲೆ ವಾಹನ ಸಂಚಾರ ಮಾಡು ವೇಳೆತಕ್ಷಣ ಬ್ರೇಕ್ ಹಾಕಿದರೆ ವಾಹನ ಚಾಲಕನ ನಿಯಂತ್ರಣಕ್ಕೆ ದಿಗದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ, ಜತೆಗೆ ವಾಹನ ಚಕ್ರದ ತಳದಲ್ಲಿ ತಿರುಗುವಇನ್ನಿತರ ಯಂತ್ರಕ್ಕೆ ಹುಲ್ಲು ಸುತ್ತುಕೊಂಡಾಗ ಅದನ್ನುತೆಗೆಯದೆ ಹಾಗೆ ಮುಂದಕ್ಕೆ ಸಾಗಿದರೆ ಬೆಂಕಿಹತ್ತಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಚಾಲಕರು.
ಬಹುತೇಕ ಹಳ್ಳಿಗಳ ರೈತರಿಗೆ ಒಕ್ಕಣೆ ಮತ್ತು ರಾಶಿ ಮಾಡಲುಕಣಗಳ ಅಭಾವ ಇರುವುದರಿಂದಅನಿವಾರ್ಯವಾಗಿ ರಸ್ತೆಗಳೇಕಣವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕಣ ನಿರ್ಮಿಸಿ ಕೊಟ್ಟರೆ ರೈತರಿಗೆ ಅನುಕೂಲ ಆಗಲಿದೆ. –ಕುಳ್ಳೇಗೌಡ. ಡಿಂಕ ಗ್ರಾಮ ರೈತ
ರಸ್ತೆ ಮೇಲೆ ಕೆಲ ರೈತರು ಈ ರೀತಿ ಒಕ್ಕಣೆ ಮಾಡಿತ್ತಿರುವುದರಿಂದದ್ವಿಚಕ್ರ ಹಾಗೂ ಕಾರು ಚಾಲಕರು ಸುಗಮಸಂಚಾರ ದುಸ್ಥರವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆಮುಂದಾಗಬೇಕು. ಗ್ರಾಪಂ ಅಧಿಕಾರಿಗಳು ಪ್ರತಿ ಗ್ರಾಮಕ್ಕೆ ಎನ್ಆರ್ಇಜಿ ಮೂಲಕ ಕಣ ನಿರ್ಮಾಣಕ್ಕೆ ಮುಂದಾಗಬೇಕಿದೆ. –ಪುನೀತ್ಬಾಬು, ವಾಹನ ಸವಾರ ಚಿಕ್ಕಬಿಳತಿ ಗ್ರಾಮ
– ಶಾಮಸುಂದರ್ ಕೆ. ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?