ವೀರಗಲ್ಲು ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Oct 23, 2020, 5:15 PM IST
ಸಕಲೇಶಪುರ: ತಾಲೂಕಿನ ರಾಜೇಂದ್ರಪುರ ಹೊರವಲಯದ ಸರ್ಕಾರಿ ಜಮೀನಿನಲ್ಲಿದ್ದ ಚೋಳರ ಕಾಲದ್ದು ಎನ್ನಲಾದ ಶಾಸನವುಳ್ಳ ಹಾಗೂ ವೀರಗಲ್ಲುಗಳನ್ನು ಧ್ವಂಸಗೊಳಿಸಿದಕಿಡಿಗೇಡಿಗಳನ್ನು ಬಂಧಿಸಬೇಕು ಹಾಗೂ ಪುನರ್ ಪ್ರತಿಷ್ಠಾಪಿಸಬೇಕು ಎಂದು ಭಜರಂಗ ದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ತಾಲೂಕಿನ ಬಾಳ್ಳುಪೇಟೆ ವೃತ್ತದಲ್ಲಿ ಪ್ರತಿಭಟಿಸಿದರು.
ಸಕಲೇಶಪುರ, ಮೂಗಲಿ, ಜೆ.ಪಿ.ನಗರ ಹಾಗೂ ರಾಜೇಂದ್ರಪುರದಿಂದ ನಾಲ್ಕು ತಂಡಗಳಾಗಿ ಬಾಳ್ಳುಪೇಟೆ ಗ್ರಾಮಕ್ಕೆ ಬೈಕ್ರ್ಯಾಲಿ ನಡೆಸಿದ ಕಾರ್ಯಕರ್ತರು, ಗ್ರಾಮದ ಗುರಪ್ಪವೃತ್ತದಲ್ಲಿ ಭಾರತ ಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದರು. ನಂತರ ನಡೆದ ಬಹಿರಂಗ ಸಭೆಯಲ್ಲಿ ಭಜರಂಗದಳ ಗ್ರಾಮದಲ್ಲಿ ನೆಲೆಸಿರುವ ಇಬ್ಬರು ಅನ್ಯಕೋಮಿನವರು ರಾಜೇಂದ್ರ ಪುರ ಗ್ರಾಮದಲ್ಲಿನ ಸರ್ವೆ ನಂ.20ರಲ್ಲಿನ ಸರ್ಕಾರಿ ಜಮೀನು ಕಬಳಿಸಲು ಮುಂದಾಗಿದ್ದಾರೆಎಂದು ಆರೋಪಿಸಿದರು.
ಸರ್ವೆ ನಂ.20ರಲ್ಲಿನ ಜಮೀನಲ್ಲಿ 800 ವರ್ಷಗಳ ಪುರಾತನ ಬೀರಲಿಂಗೇಶ್ವರ ದೇವಸ್ಥಾನ ಇತ್ತು ಎಂದು ಹೇಳಿದ ರಘು, ಸದ್ಯ ಮಾಸ್ತಿ ಕಲ್ಲುಗಳನ್ನು ಜೆಸಿಬಿ ಯಂತ್ರದ ಮೂಲಕಧ್ವಂಸಗೊಳಿಸಿದ್ದು, ಉದ್ದೇಶ ಪೂರ್ವಕವಾಗಿ ಈ ಕೃತ್ಯ ನಡೆಸಲಾಗಿದೆ ಎಂದು ದೂರಿದರು.
ಗ್ರಾಮದ ಸರ್ವೆ.ನಂ.20ಲ್ಲಿ 198 ಎಕರೆ ಸರ್ಕಾರಿ ಜಮೀನಿದೆ. ಇದನ್ನು ಸಕ್ರಮಗೊಳಿಸುವಂತೆ ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಇಬ್ಬರು ಅನ್ಯ ಕೋಮಿನವರು 12 ಎಕರೆ ಕಬಳಿಸಲು ಮುಂದಾಗಿದ್ದಾರೆನ್ನಲಾಗಿದೆ. ಈ ಬಗ್ಗೆ ಗ್ರಾಮಸ್ಥರು ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗ್ರಾಮಸ್ಥ ಪ್ರಕಾಶ್ ಮಾತನಾಡಿದರು. ಧ್ವಂಸಗೊಳಿಸಿರುವ ವೀರಗಲ್ಲುಗಳನ್ನು ಪುನರ್ ಪ್ರತಿಷ್ಠಾಪಿಸಿ, ಕಬಳಿಕೆ ಮಾಡಿದ್ದಾರೆಎನ್ನಲಾದ ಜಮೀನು ಸರ್ಕಾರ ವಶಕ್ಕೆ ಪಡೆಯಬೇಕು ಎಂದು ಡಿವೈಎಸ್ಪಿ ಗೋಪಿ, ಬೆಳಗೋಡು ಹೋಬಳಿ ಸಹಾಯಕ ತಹಶೀಲ್ದಾರ್ ನಾಗರಾಜ್ಗೆ ಮನವಿ ನೀಡಲಾಯಿತು.
ಸಮಾಜ ಸೇವಕ ಬಾಳ್ಳುಗೋಪಾಲ್, ಬಜರಂಗದಳ ತಾಲೂಕು ಸಂಯೋಜಕ ಶ್ರೀಜಿತ್ಗೌಡ, ನಗರ ಘಟಕದ ಸಂಚಾಲಕ ಕಾರ್ತೀಕ್, ಬೆಳಗೋಡು ಹೋಬಳಿಯ ಸಂಚಾಲಕ ನಿಖೀಲ್, ವಿಶ್ವ ಹಿಂದೂ ಪರಿಷತ್ ತಾಲೂಕುಕಾರ್ಯದರ್ಶಿ ಮಂಜು, 12 ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.
ಬಿಗಿ ಪೊಲೀಸ್ ಬಂದೋಬಸ್ತ್ ; ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಬೃಹತ್ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.ಅಹಿತಕರ ಘಟನೆ ಸಂಭವಿಸದಂತೆ ಡಿವೈಎಸ್ಪಿ ಬಿ.ಆರ್. ಗೋಪಿ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಸಕಲೇಶಪುರ ವೃತ್ತ ನಿರೀಕ್ಷಕ ಗಿರೀಶ್, ಗ್ರಾಮಾಂತರ ಠಾಣೆ ಪಿಎಸ್ಐ ಚಂದ್ರಶೇಖರ್, ನಗರ ಠಾಣೆ ಪಿಎಸ್ಐ ಮಾಲಾ, ಯಸಳೂರು ಪಿಎಸ್ಐ ಸುರೇಶ್, ಆಲೂರು ಪಿಎಸ್ಐ ಮಂಜುನಾಥ್ ನಾಯಕ್, ಐವರು ಎಎಸ್ಐ,ಸಶಸ್ತ್ರ ಮೀಸಲು ಪಡೆಯ ಎರಡು ವಾಹನ ಹಾಗೂ 60 ಪೊಲೀಸರು ಬಂದೋಬಸ್ತ್ನಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan; ನೀರಿಗಾಗಿ ಪ್ರತಿಭಟನೆ ನಡೆಸಿದ ಜೆಡಿಎಸ್: ಎಚ್ಚರಿಕೆ
Lok Sabha Election: ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ: ಎಚ್ಡಿಕೆ
ಶಿರಾಡಿಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ… ಗ್ಯಾಸ್ ಸೋರಿಕೆ, ಅಗ್ನಿಶಾಮಕ ಸಿಬ್ಬಂದಿ ದೌಡು
Stamp paper: ರೈತರು, ಜನರಿಗೆ ಛಾಪಾಕಾಗದ ದರ ಏರಿಕೆ ಬರೆ
Hijab controversy: ಹಾಸನದ ಖಾಸಗಿ ಕಾಲೇಜಿನಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ
MUST WATCH
ಹೊಸ ಸೇರ್ಪಡೆ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…