ಆಲೂರಿನಲ್ಲಿ ಧರೆಗಳಿದ ಯಮರಾಯ; ಜಾಗೃತಿ
ಹೆಲ್ಮೆಟ್ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಯಮ ಪಾಶ ಹಾಕಿ ರಸ್ತೆ ನಿಯಮ ಪಾಲಿಸಲು ವೇಷಧಾರಿಯಿಂದ ಸಲಹೆ
Team Udayavani, Feb 14, 2021, 8:08 PM IST
ಆಲೂರು: ಎಲ್ಲರೂ ಎಂದಿನಂತೆ ತಮ್ಮ ಕೆಲಸದ ಅವಸರದಲ್ಲಿ ಇದ್ದರು. ಹೀಗೆ ಗಡಿಬಿಡಿಯಿಂದ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಪಟ್ಟಣದ ಪೊಲೀಸ್ ಠಾಣೆ, ಬಸ್ ನಿಲ್ದಾಣ ಎದುರು ಎಮ್ಮೆಯೊಂದಿಗೆ ನಿಂತಿದ್ದ ಯಮನ ವೇಷಧಾರಿಯನ್ನು ಕಂಡು ಅಚ್ಚರಿಗೊಂಡರು. ಯಮನೇ ಧರೆಗೆ ಇಳಿದುಬಂದಂತೆ ವೇಷ ಭೂಷಣದ ತೊಟ್ಟಿದ್ದ ವ್ಯಕ್ತಿಯನ್ನು ಕುತೂಹಲದಿಂದ ವೀಕ್ಷಿಸಿದರು.
ಹೌದು, ರಸ್ತೆ ಸುರಕ್ಷತಾ ಸಪ್ತಾಹದ ಅಂಗ ವಾಗಿ ಪಟ್ಟಣ ಠಾಣೆಯ ಪೊಲೀಸರು ಶನಿ ವಾರ ಹೆಲ್ಮೆಟ್ ಹಾಕದೇ ವಾಹನ ಚಲಾಯಿ ಸುವವರಿಗೆ ದಂಡ ಹಾಕುವುದನ್ನು ಬಿಟ್ಟು, ಯಮನ ವೇಷಧಾರಿ ಮೂಲಕ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಪಟ್ಟಣದ ಹೃದಯ ಭಾಗವಾದ ಪೊಲೀಸ್ ಠಾಣೆ, ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಯಮನ ವೇಷ ಹಾಕಿಸಿ ಬೈಕ್ ಚಾಲಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಹಾಸನದ ವಿದ್ಯುತ್ ಗುತ್ತಿಗೆದಾರ ಶಿವಣ್ಣ ಯಮಧರ್ಮರಾಯನ ವೇಷ ಧರಿಸಿದ್ದು, ವಿಶೇಷವಾಗಿ ಗಮನ ಸೆಳೆದರು. ಹೆಲ್ಮೆಟ್ ಹಾಕದೇ ಇರುವ ಸವಾರರ ಕುತ್ತಿಗೆಗೆ ಹಗ್ಗ ಹಾಕಿ “ಹೆಲ್ಮೇಟ್ ಧರಿಸುವೆಯೋ ಇಲ್ಲವೇ ನಾನು ನಿನ್ನನ್ನು ಯಮ ಲೋಕಕ್ಕೆ ಕರೆ ದೊಯ್ಯಲೇ’ ಎಂದು ಏರುಧ್ವನಿಯಲ್ಲಿ ಸಂಭಾ ಷಣೆ ಮೂಲಕ ಜಾಗೃತಿ ಮೂಡಿಸಿದರು. ಮಾತು ಕೇಳದವರಿಗೆ ವಾರ್ನಿಂಗ್ ಕೊಡು ತ್ತಿದ್ದರು. ಆಲೂರು ಪೊಲೀಸರಿಂದ ನಡೆದ ಈ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ವೆಂಕಟೇಶ್ ಮಾತನಾಡಿ, ವಾಹನ ಸವಾರರು ರಸ್ತೆ ನಿಯಮ ಕಡ್ಡಾಯವಾಗಿ ಪಾಲನೆ ಮಾಡ ಬೇಕು. ಹೆಲ್ಮೆಟ್ ಇಲ್ಲದೆಯೇ, ಹಲವು ಸಾವು- ನೋವು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಹಲವು ಅಪಘಾತ ಗಳು ನಡೆದಿವೆ. ಆದ್ದರಿಂದ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ನಿಯಮ ಪಾಲನೆ ಮಾಡದಿದ್ದರೆ ಹೆಚ್ಚು ದಂಡ ಭರಿಸಬೇಕೆಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ: ದಾಸಯ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪೂಜಾರಿ!
ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ!
5 ಕೋ. ರೂ.ಡೀಲ್ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್ ಕಲ್ಲಹಳ್ಳಿ ಪ್ರಶ್ನೆ
ಇಂದು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ
ಮಹಾನಗರ : ಮಿನಿ ವಿಧಾನಸೌಧದ ಮುಂದೆ ಟ್ರಾಫಿಕ್ ಜಾಮ್ ಕಿರಿಕಿರಿ
MUST WATCH
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಜೂನಿಯರ್ ಮೇಲೆ ರ್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು
ಹೊಸ ಸೇರ್ಪಡೆ
ಕ್ರಿಪ್ಟೋಕರೆನ್ಸಿಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರ ಮುಕ್ತವಾಗಿದೆ : ಅನುರಾಗ್ ಠಾಕೂರ್
ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಗಲಾಟೆ: ದಾಸಯ್ಯನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಪೂಜಾರಿ!
ಶಾಹೀದ್ ಅಫ್ರಿದಿ ಮಗಳ ಜೊತೆ ಪಾಕ್ ಬೌಲರ್ ಶಹೀನ್ ಅಫ್ರಿದಿ ವಿವಾಹ ನಿಶ್ಚಿತಾರ್ಥ
ಮತ ನೀಡದಿದ್ದರೆ ನೀರು, ವಿದ್ಯುತ್ ಏನೂ ಕೊಡಲ್ಲ.. ಮತದಾರರಿಗೆ ಸಚಿವರ ಬೆದರಿಕೆ
ತೆಕ್ಕಟ್ಟೆ ಮಹಾಲಿಂಗೇಶ್ವರ ದೇಗುಲದ ಒಳಗೆ ನೇಣು ಬಿಗಿದು ಯುವಕ ಆತ್ಮಹತ್ಯೆ!