ಮುಂಗಾರು ಹಂಗಾಮು ಬಿತ್ತನೆ ಬೀಜೋಪಚಾರ

ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಅಶೋಕ ಪಿ. ಅವರಿಂದ ರೈತರಿಗೆ ತರಬೇತಿ

Team Udayavani, May 27, 2022, 3:21 PM IST

19

ರಾಣಿಬೆನ್ನೂರ: ಹನುಮನವ¾ಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ತಾಲೂಕಿನ ರಾಹುತನಕಟ್ಟಿ ಗ್ರಾಮದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳ ಕುರಿತು ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ| ಅಶೋಕ ಪಿ. ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲಾದ್ಯಂತ ಬಿತ್ತನೆ ಬೀಜಗಳ ಖರೀದಿ ಹಾಗೂ ಬಿತ್ತನೆ ತುಂಬಾ ಬಿರುಸುನಿಂದ ನಡೆದಿದೆ ಎಂದರು.

ಪ್ರತಿ ವರ್ಷ ರೈತರು ಬಿತ್ತನೆ ಮಾಡಲು ಪ್ರಮಾಣೀಕರಿಸಿದ ಬೀಜಗಳನ್ನು ಖರೀದಿಸುವುದು ಸೂಕ್ತವಾದರೂ, ಇದರಿಂದ ರೈತರಿಗೆ ಖರ್ಚಿನ ಹೊರೆ ಹೆಚ್ಚಾಗುತ್ತದೆ. ಹಾಗಾಗಿ, ಒಮ್ಮೆ ಖರೀದಿಸಿದ ಸುಧಾರಿತ ತಳಿಗಳ (ಹೈಬ್ರಿಡ್‌ ತಳಿ ಹೊರತುಪಡಿಸಿ) ಪ್ರಮಾಣೀಕೃತ ಬೀಜಗಳನ್ನು ಸಾಮಾನ್ಯವಾಗಿ 2-3 ವರ್ಷ ಅದೇ ತಳಿಯ ಬೀಜಗಳನ್ನು ಬಿತ್ತನೆಗಾಗಿ ಬಳಸಬಹುದು. ದ್ವಿದಳ ಧಾನ್ಯ ಬೆಳೆಗಳಾದ ಶೇಂಗಾ, ಸೋಯಾ, ಅವರೆ, ಕಡಲೆ, ಹೆಸರು, ಅಲಸಂದೆ, ಅವರೆ ಮುಂತಾದ ಬೀಜಗಳಿಗೆ ಜೈವಿಕ ಗೊಬ್ಬರಗಳಾದ ರೈಜೋಬಿಯಂ, ರಂಜಕ ಕರಗುವಂತಹ ಗೊಬ್ಬರಗಳು ಹಾಗೂ ಏಕದಳ ಧಾನ್ಯಗಳ ಬೀಜಗಳಿಗೆ ಅಜೋಸ್ಪಿರಿಲಮ್‌ಗಳಿಂದ ಪ್ರತಿ ಎಕರೆಗೆ ಬೇಕಾಗುವ ಬೀಜಕ್ಕೆ 200 ಗ್ರಾಂ ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡಬೇಕೆಂದರು.

ಜೈವಿಕ ಅಣುಜೀವಿಗಳಿಂದ ಬೀಜೋಪಚಾರ ಮಾಡಬೇಕಾದರೆ ಮೊದಲು ಅಂಟು ದ್ರಾವಣ ತಯಾರಿಸಬೇಕು. ಅದಕ್ಕಾಗಿ 250 ಮಿ.ಲೀ. ನೀರಿನಲ್ಲಿ 25 ಗ್ರಾಂ ಬೆಲ್ಲ ಅಥವಾ ಸಕ್ಕರೆ ಕರಗಿಸಿ 15 ನಿಮಿಷ ಕಾಲ ಕುದಿಸಿ ಆರಿಸಿ ಅಗತ್ಯವಿದ್ದಷ್ಟು ಅಂಟು ದ್ರಾವಣವನ್ನು ಒಂದು ಸಣ್ಣ ಪಾತ್ರೆಯಲ್ಲಿ ತೆಗೆದುಕೊಂಡು ಎಕರೆಗೆ ಶಿಫಾರಸ್ಸು ಮಾಡುದ ಅಣುಜೀವಿ ಗೊಬ್ಬರವನ್ನು ಬೆರೆಸಿ ಚೆನ್ನಾಗಿ ಲೇಪನ ಮಾಡಿ, ಬಟ್ಟೆ ಅಥವಾ ಗೋಣಿ ಚೀಲದ ಮೆಲೆ ನೆರಳಲ್ಲಿ ಒಣಗಿಸಿ ಬೀಜ ಬಿತ್ತನೆಗೆ ಬಳಸಬೇಕೆಂದರು.

ಬೀಜಕ್ಕೆ ಶೀಲೀಂಧ್ರ ನಾಶಕಗಳ ಲೇಪನದ ನಂತರ ಈ ಅಣುಜೀವಿ ಗೊಬ್ಬರಗಳ ಲೇಪನ ಮಾಡಬೇಕು. ಬಿತ್ತನೆ ಬೀಜಕ್ಕೆ ಮೇಲೆ ತಿಳಿಸಿದಂತೆ ಅಗತ್ಯವಾದ ಬೀಜೋಪಚಾರ ಮಾಡಿದಾಗ ಮಾತ್ರ ಕಡಿಮೆ ಖರ್ಚಿನ ಹಾಗೂ ಹೆಚ್ಚು ಗುಣಮಟ್ಟದ ಫಸಲು ಪಡೆಯಲು ಸಾಧ್ಯ. ಅಲ್ಲದೇ, ಬೆಳೆಗೆ ಪೂರೈಸಿದ ಗೊಬ್ಬರ, ನೀರು, ಸಸ್ಯ ಸಂರಕ್ಷಣೆ ಹಾಗೂ ಕಾರ್ಮಿಕ ಶ್ರಮದ ಸದುಪಯೋಗವಾಗುವುದೆಂದು ತಿಳಿಸಿದರು.

ನಂತರ ಬಿತ್ತನೆ ಬೀಜಗಳಿಗೆ ವಿವಿಧ ಕೀಟ ನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಕಡಿಮೆ ಖರ್ಚಿನಲ್ಲಿ ಬೆಳೆಗೆ ಬರಬಹುದಾದ ಅನೇಕ ರೋಗ ಮತ್ತು ಕೀಟದ ಹಾವಳಿ ತಪ್ಪಿಸಬಹುದಾಗಿದೆ. ಸಾಮಾನ್ಯವಾಗಿ ಬೀಜಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕಾಗಿ ಸಸಿ ಮಡಿಯಲ್ಲಿ ಕಂಡು ಬರುವ ಕೊಳೆರೋಗ ನಿಯಂತ್ರಿಸಲು ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಥೈರಾಮ್‌ ಅಥವಾ ಕ್ಯಾಪಾrನ್‌ ಶಿಲೀಂಧ್ರ ನಾಶಕ ಪುಡಿ ಲೇಪನ ಮಾಡುವುದರಿಂದ ಟೊಮೆಟೋ, ಬದನೆ, ಮೆಣಸಿನಕಾಯಿ ಮುಂತಾದ ಬೆಳೆಗಳಲ್ಲಿ ಸಸಿ ಸಾಯುವ ರೋಗದಿಂದ ರಕ್ಷಿಸಬಹುದು.

ಶೇಂಗಾ, ಹತ್ತಿ, ಕಡಲೆ ಹಾಗೂ ತೊಗರಿ ಬೆಳೆಗಳಿಗೆ ಬರುವ ಬುಡಕೊಳೆ ರೋಗದ ನಿಯಂತ್ರಣಕ್ಕಾಗಿ ಪ್ರತಿ ಕಿ.ಗ್ರಾಂ ಬೀಜಕ್ಕೆ 4-6 ಗ್ರಾಂ ಟ್ರೆ„ಕೋಡರ್ಮಾ ಜೈವಿಕ ಅಣುಜೀವಿಯಿಂದ ಲೇಪನ ಮಾಡುವುದರಿಂದ ಬೆಳೆ ರಕ್ಷಿಸಬಹುದೆಂದು ತಿಳಿಸಿದರು.

ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್‌. ಮಾತನಾಡಿ, ಮಣ್ಣು ಪರೀಕ್ಷೆ ಆಧಾರಿತ ಮೇಲೆ ಬಿತ್ತುವ ಪೂರ್ವದಲ್ಲಿ ರಸಗೊಬ್ಬರಗಳ ಬಳಕೆ ಮಾಡಬೇಕು. ತದನಂತರ ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರಗಳನ್ನು ಸಿಂಪರಣೆ ಮೂಲಕ ಬೆಳೆಗಳಿಗೆ ಸಿಂಪರಣೆ ಮಾಡಿದಲ್ಲಿ ಪೋಷಕಾಂಶಗಳ ಕೊರತೆ ನಿಗಿಸಬಹುದು. ಬೇಸಿಗೆಯಲ್ಲಿ ಬೆಳೆದ ಹತ್ತಿ ಬೆಳೆಗೆ ಅಲ್ಲಲ್ಲಿ ಮೂಪು ಉದುರುವ ಲಕ್ಷಣಗಳು ಕಂಡು ಬರುತ್ತಿದ್ದು, ಪ್ರತಿ ಲೀಟರ್‌ಗೆ ನೀರಿಗೆ 10 ಗ್ರಾಂ ನೀರಿನಲ್ಲಿ ಕರಗುವ ಪೊಟ್ಯಾಷ್‌ ನೈಟ್ರೇಟ್‌ ಸಿಂಪಡಿಸಬೇಕೆಂದು ತಿಳಿಸಿದರು.

ಪಶು ವಿಜ್ಞಾನಿ ಡಾ| ಮಹೇಶ ಕಡಗಿ ಅವರು, ಕುರಿಗಳ ಆರೋಗ್ಯದ ಬಗ್ಗೆ ಲಸಿಕೆಗಳನ್ನು ನೀಡಲು ಸವಿಸ್ತಾರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರೈತರಾದ ದಿಳ್ಳೆಪ್ಪ ಬಣಕಾರ, ಹೊನ್ನಪ್ಪ ಗೌಡ್ರು, ಭೀರಪ್ಪ ಎರೇಕುಪ್ಪಿ, ಕರಿಯಪ್ಪ ಬೀರಾಳ, ನಿಂಗಪ್ಪ ಬಡಪ್ಪಳವರ ಇತರರಿದ್ದರು.

ಟಾಪ್ ನ್ಯೂಸ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ಹಾವೇರಿ: ಕಾಂಗ್ರೆಸ್‌ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ

ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.