ಆಚಾರ-ವಿಚಾರಗಳಿಂದ ಮನೆ-ಮನಸ್ಸು ಪವಿತ್ರ


Team Udayavani, Mar 18, 2020, 2:14 PM IST

hv-tdy-1

ಅಕ್ಕಿಆಲೂರು: ನಮ್ಮ ಮನೆ ಮನಸ್ಸುಗಳು ಪವಿತ್ರವಾಗುವಂತೆ ಆಚಾರ ವಿಚಾರಗಳು ರೂಢಿಗೊಳ್ಳುವ ಜ್ಞಾನ ದಾಸೋಹ ಈ ಶತಮಾನದ ಅಗತ್ಯವಾಗಿದ್ದು, ಚಿತ್ತವನ್ನು ತಿದ್ದಿಕೊಳ್ಳುವ ಕಾಲ ಇದಾಗಿದೆ ಎಂದು ಅಕ್ಕಿಆಲೂರು ಶ್ರೀ ಚನ್ನವೀರೇಶ್ವರ ವಿರಕ್ತಮಠದ ಪೀಠಾಧಿಪತಿ ಶಿವಬಸವ ಶ್ರೀಗಳು ಕರೆ ನೀಡಿದರು.

ಪಟ್ಟಣದ ಗುರುಪುತ್ರಪ್ಪ ಮುಚ್ಚಂಡಿ ಅವರ ನಿವಾಸದಲ್ಲಿ ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಮನೋ ವೈಕಲ್ಯಗಳನ್ನು ನಿವಾರಿಸಿಕೊಂಡು, ಶುಚಿ-ರುಚಿಯಾದ ಜೀವನ ಸಿದ್ಧಾಂತಗಳನ್ನು ಉಳ್ಳವರಾಗಬೇಕು. ಶುದ್ಧ ನೀರು, ಅನ್ನ, ಒಳ್ಳೆಯ ಮಾತುಗಳೇ ಈಗಿನ ನಿಜವಾದ ರತ್ನಗಳು. ಜ್ಞಾನಕ್ಕೆ ಬೆಲೆ ಕೊಡುವ ಮೂಲಕ ಅಜ್ಞಾವನ್ನು ನಿವಾರಿಸುವ ಸಂಕಲ್ಪ ನಮ್ಮೆಲ್ಲರದಾಗಲಿ. ಮನೆಯಲ್ಲಿ ಮಹಾಮನೆ ಕಾರ್ಯಕ್ರಮಗಳು ಊರ ತುಂಬೆಲ್ಲ ನಡೆದು ಸದಾಚಾರಕ್ಕೆ ಸಾಕ್ಷಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರೊ| ಮಾರುತಿ ಶಿಡ್ಲಾಪೂರ, ಕಾಯಕ ಧರ್ಮ ನಮ್ಮ ನಡುವಳಿಕೆಯನ್ನು ಅವರಿಸಬೇಕು. ಮೋಸ ಮಸಲತ್ತುಗಳ ವಂಚಕ ಜೀವನಕ್ಕೆ ತಿಲಾಂಜಲಿ ಹಾಡಬೇಕು. ಸ್ವಚ್ಛ ಶುದ್ಧ ಜೀವನ ಸಿದ್ಧಾಂತಗಳು ಎಲ್ಲ ರೀತಿಯ ಆರೋಗ್ಯ ಸೂತ್ರಗಳಾಗಿವೆ. ನಮ್ಮ ಆಹಾರ ಅಚಾರಗಳು ಪ್ರಸಾದಮಯವಾಗಬೇಕು. ಸ್ವರ್ಗ ನರಕದ ನಿಜಾರ್ಥ ಅರಿತರೆ ಬದುಕು ಬಂಗಾರವಾಗುತ್ತದೆ ಎಂದರು.

ಶರಣ ಚಿಂತನೆಯ ಉಪನ್ಯಾಸ ನೀಡಿದ ಶಿಕ್ಷಕ ಶ್ರೀಕಾಂತ ಹುಲ್ಮನಿ, ಜೀವನ ವಿಕಾಸದ ಶಿಕ್ಷಣ ಈಗ ಬೇಕಾಗಿದ್ದು, ಅದು ವಚನಗಳಲ್ಲಿ ಶಕ್ತಿಯುತವಾಗಿ ಅಭಿವ್ಯಕ್ತವಾಗಿದೆ. ನಾಳೆಯ ಬದುಕಿನ ಹಿತಕ್ಕೆ ಈಗಲೇ ಚಿಂತನೆ ಬೇಕಾಗಿದ್ದು, ಒಳಿತನ್ನು ಸ್ವಾಗತಿಸುವ, ಅಲ್ಲದ್ದನ್ನು ತಿರಸ್ಕರಿಸುವ ಸ್ವಚ್ಛ ಚಿಂತನೆಗಳು ರೂಢಿಗತವಾಗಬೇಕು ಎಂದರು.

ಶರಣ ಸಾಹಿತ್ಯ ಪರಿಷತ್‌ ತಾಲೂಕು ಘಟಕದ ಅಧ್ಯಕ್ಷ ಎಸ್‌.ಸಿ. ಕಲ್ಲನಗೌಡರ, ನಿಕಟಪೂರ್ವ ಅಧ್ಯಕ್ಷ ವಿ.ಪಿ.ಗುರಪ್ಪನವರ, ಕಾರ್ಯದರ್ಶಿ ಎಸ್‌.ವಿ.ಹೊಸಮನಿ, ನಿವೃತ್ತ ಶಿಕ್ಷಕ ಗುರುಪುತ್ರಪ್ಪ ಮುಚ್ಚಂಡಿ, ಮುಖ್ಯೋಪಾಧ್ಯಾಯ ವಸಂತ ಚಿಕ್ಕಣ್ಣನವರ, ಶಿವಬಸಯ್ಯ ಚಿಲ್ಲೂರಮಠ, ಸೂರ್ಯನಾರಾಯಣ, ನೇಮಣ್ಣ ಸವಣೂರ, ಬಸಣ್ಣ ಮೋಟಗಿ, ಜಿ.ಎಂ.ಪಾಟೀಲ, ಪಿ.ಎಂ. ಮಡಿವಾಳರ, ಕಿರಣ ನಾಯಕ, ಶೋಭಾ ಪಾಟೀಲ, ಗಿರಿಜಮ್ಮ ವಿರುಪಣ್ಣನವರ, ಕಾಂಚನಾ ಮೋಟಗಿ, ಸಾಧನಾ ಕುಂಬಾರ, ಸುಜಾತಾ ಕೊಲ್ಲಾವರ, ಪ್ರಿಯಾ ಬೂದಿಹಾಳ, ಗೌರಮ್ಮ ಬೆಲ್ಲದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಲ್ಪಾ ಮುಚ್ಚಂಡಿ ವಂದಿಸಿದರು.

ಟಾಪ್ ನ್ಯೂಸ್

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Haveri: ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಹರಿಪ್ರಸಾದ್ ಆಗ್ರಹ

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

Lok Sabha Elections ನಾಮಪತ್ರಕ್ಕೆ ಸೂಚಕರ ಸಹಿ ನಕಲಿ: ಅಭ್ಯರ್ಥಿ ವಿರುದ್ಧ ದೂರು

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

Ls polls: ರಾಜ್ಯದಲ್ಲಿ ನಾವು 18 -20 ಸೀಟ್‌ ಗೆಲ್ಲುತ್ತೇವೆ; ಸಚಿವ ಶಿವಾನಂದ ಪಾಟೀಲ ವಿಶ್ವಾಸ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.