ಶ್ರದ್ದೆಯಿಂದ ಮಾತ್ರ ಕಲೆ ಅನಾವರಣ
Team Udayavani, Jan 8, 2022, 8:24 PM IST
ಕಲಬುರಗಿ: ಚಿತ್ರಕಲೆ ಸುಲಭವಾಗಿ ಯಾರಿಗೂ ಒಗ್ಗುವಂತದ್ದಲ್ಲ. ಅತ್ಯಂತ ಸೂಕ್ಷ್ಮ, ಧ್ಯಾನ, ಶ್ರದ್ಧೆಯಿಂದ ಮಾತ್ರ ಕಲೆ ಅನಾವರಣ ಸಾಧ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಹೇಳಿದರು.
ನಗರದ ಮಾತೋಶ್ರೀ ನೀಲಗಂಗಮ್ಮ ಜಿ. ಅಂದಾನಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಸಮೂಹ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಕಲೆಯಲ್ಲೂ ಸ್ವದೇಶಿ ಕಲ್ಪನೆಯನ್ನು ನಾವು ಕಾಣಬಹುದು. ತನ್ನಲ್ಲಿರುವ ಕಲೆಯ ಜ್ಞಾನವನ್ನು ಕಲಾವಿದ ಹಂಚಿಕೊಳ್ಳಬೇಕು ಎಂದರು. ಸಂಗೀತ, ಕ್ರೀಡೆ, ಚಿತ್ರಕಲೆ ಅರ್ಥೈಸಿಕೊಳ್ಳುವುದು ಕಷ್ಟ. ಈ ಬಗ್ಗೆ ವಿಮರ್ಶೆ ಮಾಡುವವರು, ಮಾತನಾಡುವವರ ಅಗತ್ಯವಿದೆ. ಚಿತ್ರಕಲಾ ಕ್ಷೇತ್ರದಲ್ಲಿ ವಿಮರ್ಶಕರು ತಯಾರಾಗಬೇಕು. ಹೊಗಳಿಕೆ, ತೆಗಳಿಕೆ ಏನೇ ಇರಲಿ. ಕಲೆ ಬಗ್ಗೆ ಮಾತನಾಡುವವ ಅಗತ್ಯವಿದೆ. ವಿಮರ್ಶಕರಿಲ್ಲದೇ ನಮ್ಮ ಭಾಗದ ತತ್ವಪದಗಳು ಖ್ಯಾತಿಯಾಗಲಿಲ್ಲ.
ಪ್ರಸ್ತುತ ಕಲೆಯೂ ವಿಮರ್ಶಕರಿಲ್ಲದೆ ಬಡವಾಗಬಾರದು ಎಂದರು. ಖ್ಯಾತ ಕಲಾವಿದ ಡಾ| ವಿ.ಜಿ.ಅಂದಾನಿ ಮಾತನಾಡಿ, ಕಲೆಗಾರರು ನಿಜವಾದ ಚಿಂತಕರು. ಚಿತ್ರಕಲೆಯಲ್ಲಿ ವಿಚಾರವಂತಿಕೆ ಇದ್ದಾಗ ಮಾತ್ರ ಅದ್ಭುತ ಸೃಷ್ಟಿ ಸಾಧ್ಯ. ವಿಭಿನ್ನ ಕಾಲಘಟ್ಟದಲ್ಲಿ ಹಲವು ಶೈಲಿಗಳು ಹುಟ್ಟುತ್ತವೆ. ಯುವ ಕಲಾವಿದ ಪ್ರಯತ್ನ ಶ್ಲಾಘನೀಯ ಎಂದರು. ಕಲಾವಿದರು ಮತ್ತು ಪ್ರಮುಖರಾದ ವಿಜಯಕುಮಾರ, ಅರವಿಂದ ಕಾಂಬಳೆ, ಸಂಗಪ್ಪ ನಾಗೂರೆ, ನಿಂಗಣ್ಣಗೌಡ ಪಾಟೀಲ, ಸಂತೋಷ ಚಿಕ್ಕಣ್ಣ, ಕಾವೇರಿ ಪೂಜಾರ, ಗಂಗಮ್ಮ ವಾಲಿಕಾರ, ಪ್ರಶಾಂತ ಜಿ, ಅಮೀನ್ ರೆಡ್ಡಿ ರಾಯಚೂರು, ಜಲಜಾಕ್ಷಿ ಕುಲಕರ್ಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ