ರೈತರ ಧರಣಿಗೆ ಮಠಾಧಿಧೀಶರ ಬೆಂಬಲ
Team Udayavani, Dec 28, 2020, 4:06 PM IST
ಕಲಬುರಗಿ: ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದುಆಗ್ರಹಿಸಿ ಮತ್ತು ದಿಲ್ಲಿ ಚಲೋ ರೈತ ಹೋರಾಟ ಬೆಂಬಲಿಸಿ ನಗರದಲ್ಲಿ ನಡೆಯುತ್ತಿರುವರೈತರ ಹಕ್ಕೊತ್ತಾಯಗಳಿಗಾಗಿ ಧರಣಿಗೆ ವಿವಿಧ ಮಠಾಧಿಧೀಶರು ರವಿವಾರ ಬೆಂಬಲ ಸೂಚಿಸಿ, ಧರಣಿಯಲ್ಲಿ ಪಾಲ್ಗೊಂಡರು.
ಇಲ್ಲಿನ ಜಗತ್ ವೃತ್ತದಲ್ಲಿ ಕರ್ನಾಟಕಪ್ರಾಂತ ಕೃಷಿ ಕಾರ್ಮಿಕರು ಸಂಘಟನೆ, ಜನವಾದಿ ಮಹಿಳಾ ಸಂಘಟನೆಗಳನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದು,ರವಿವಾರ 14 ದಿನಗಳನ್ನು ಪೂರೈಸಿದೆ. ರೈತಪರವಾದ ಈ ಧರಣಿಯಲ್ಲಿ ಸುಲಫಲಮಠದ ಡಾ| ಸಾರಂಗಧರ ದೇಶಿಕೇಂದ್ರ ಮಹಾ ಸ್ವಾಮೀಜಿ, ಸೊನ್ನದ ಶಿವಾನಂದ ಮಹಾಸ್ವಾಮಿ, ಉಸ್ತರಗಿ ಕೋರಣೇಶ್ವರ ಮಹಾಸ್ವಾಮಿ, ಪ್ರಭುಶ್ರೀ ಅಮ್ಮನವರು,ಗುರುಮಠಕಲ್ ಖಾಸಾ ಮಠದ ಶ್ರೀಗಳುಭಾಗವಹಿಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಡಾ| ಸಾರಂಗಧರ ಮಹಾ ಸ್ವಾಮೀಜಿ ಮಾತನಾಡಿ, ಜಗತ್ತು ನಿಂತಿರುವುದು ನೇಗಿಲಮೇಲೆ. ರೈತರು ನಮ್ಮೆಲ್ಲರ ಹೊಟ್ಟೆಗೆ ಅನ್ನ ಕೊಟ್ಟವರು. ಅನ್ನ ಕೊಟ್ಟವರ ವಿರುದ್ಧ ಕಾನೂನು ತರುವುದು ತಪ್ಪು. ಪ್ರಧಾನಿ,ರಾಷ್ಟ್ರಪತಿಯೂ ಹೊಟ್ಟೆಗೆ ಉಣ್ಣುವುದು ರೈತರು ಬೆಳೆದ ಅನ್ನವನ್ನೇ. ಹೀಗಿದ್ದಾಗ ರೈತವಿರೋಧಿ ಕಾಯ್ದೆಗಳನ್ನು ತರುವುದೆಂದರೆ ಅದು ದೇಶದ ವಿರುದ್ಧವೇ ಆಗುವುದು. ಆದ್ದರಿಂದ ಸರ್ಕಾರ ರೈತರ ಮಾತು ಕೇಳಬೇಕು ಎಂದರು.
ಮಠಾಧಿಧೀಶರು ಈ ಹೊತ್ತಿನಲ್ಲಿ ರೈತರ ಜೊತೆಗೆ ನಿಲ್ಲಬೇಕಾದದ್ದು ಧರ್ಮ. ಶರಣ ಸಂಸ್ಕೃತಿ ಎಂದರೆ ಕಾಯಕ ಸಂಸ್ಕೃತಿ. ಅದುವೇ ಕೃಷಿ ಸಂಸ್ಕೃತಿ. ಈಗ ಕೃಷಿಸಂಸ್ಕೃತಿಯನ್ನೇ ನಾಶ ಮಾಡುವಂತಹ ಕಾನೂನು ಬರುವುದಾದರೆ ನಾವೆಲ್ಲರೂ ಅದನ್ನು ಧಿಕ್ಕರಿಸಬೇಕೆಂದು ಕೋರಣೇಶ್ವರ ಮಹಾಸ್ವಾಮೀಜಿ ಹೇಳಿದರು.
ಕೃಷಿಕರೊಂದಿಗೆ ನಿಲ್ಲುವುದು ಲಿಂಗಾಯತ ಮಠಗಳ ಪರಂಪರೆಯೂ ಆಗಿದೆ. ಕ್ರಿ.ಶ. 16ನೇ ಶತಮಾನದಲ್ಲಿ ಮೈಸೂರು ಸಂಸ್ಥಾನರೈತರ ಮೇಲೆ ತೆರಿಗೆ ಹೊರೆ ಹಾಕಿದ್ದನ್ನುಮೊದಲಿಗೆ ವಿರೋಧಿಸಿದವರು ಲಿಂಗಾಯತ ಸ್ವಾಮಿಗಳು. ಅಂದು ಅನೇಕ ಸ್ವಾಮಿಗಳ ಬಲಿದಾನವೂ ಆಯಿತು. ಹೀಗೆ ಜೀವದ ಹಂಗು ತೊರೆದು ರೈತರೊಂದಿಗೆ ನಿಂತಜೀವಪರ ನ್ಯಾಯದ ಪರಂಪರೆಯು ನಮ್ಮದಾಗಿದೆ. ಆದ್ದರಿಂದಲೇ ನಾವು ರೈತರ ಪರವಾಗಿ ಈ ಧರಣಿಗೆ ಬೆಂಬಲಿಸಿದ್ದೇವೆ ಎಂದರು.
ಧರಣಿಯಲ್ಲಿ ಮುಖಂಡರಾದ ಭೀಮ ಶೆಟ್ಟಿ ಯಂಪಳ್ಳಿ, ಶರಣಬಸವ ಮಮಶೆಟ್ಟಿ,ಕೆ.ನೀಲಾ, ಆರ್.ಕೆ. ಹುಡುಗಿ, ಅಲ್ತಾಫ್ಇನಾಮದಾರ, ಶ್ರೀಮಂತ ಬಿರಾದಾರ, ಜಾವೇದ್ ಹುಸೇನ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಸಿಯುಕೆನಲ್ಲಿ ಕೋಲಾರದ ವಿದ್ಯಾರ್ಥಿ ಆನಂದ ಅನುಮಾನಾಸ್ಪದ ಸಾವು
Kalaburagi; ಕಾನೂನು ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ
Kalaburagi: ಬಿಜೆಪಿ ಕಾರ್ಯಕರ್ತನ ಮೇಲೆ ಮರಣಾಂತಿಕ ಹಲ್ಲೆ
Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ
Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ