ತಿಂಗಳಿಗೆ ಲಕ್ಷ ಖರ್ಚು ಬರೆದರೂ ಬೆಳಕಿಲ್ಲ
ದೀಪ ನಿರ್ವಹಣೆ ಸ್ಥಗಿತ-ಕತ್ತಲಲ್ಲಿ ಬೀದಿಗಳು: ಗುತ್ತಿಗೆದಾರನ ನಿರ್ಲಕ್ಷéಕ್ಕೆ ಜನರ ಆಕ್ರೋಶ
Team Udayavani, Dec 28, 2020, 4:14 PM IST
ವಾಡಿ: ಪಟ್ಟಣದ ಪುರಸಭೆಯ ಕಾಂಗ್ರೆಸ್ ಆಡಳಿತ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳ ನಿರ್ವಹಣೆ ಕೈಬಿಟ್ಟಿದೆ. ಪರಿಣಾಮ ರಾತ್ರಿ ವೇಳೆ ನಗರದ ಬೀದಿಗಳಲ್ಲಿ ಕಗ್ಗತ್ತಲು ಆವರಿಸಿಕೊಳ್ಳುತ್ತಿದ್ದು, ಬಡಾವಣೆಗಳ ಜನರಿಗೆ ಬೆಳಕಿನ ಭಾಗ್ಯವೇ ಇಲ್ಲದಂತಾಗಿದೆ.
ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ನಗರದಲ್ಲಿ ಒಟ್ಟು 23 ವಾರ್ಡ್ ìಗಳಿವೆ. ಪುರಸಭೆ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕಸ ಸ್ವಚ್ಛತೆ, ಚರಂಡಿ-ಶೌಚಾಲಯಗಳ ಶುಚಿತ್ವ, ಬೀದಿ ದೀಪಗಳ ನಿರ್ವಹಣೆ,ನಿತ್ಯ ಕುಡಿಯುವ ನೀರು ಪೂರೈಕೆ ಪುರಸಭೆ ಆಡಳಿತ ನಿಭಾಯಿಸಬೇಕಾದ ಪ್ರಮುಖ ಕರ್ತವ್ಯಗಳು.
ಹಲವು ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟಿವೆ. ರಾತ್ರಿ ರಸ್ತೆಗಳಲ್ಲಿ ಸಂಚರಿಸಲುಪಾದಚಾರಿಗಳು ಭಯ ಪಡುತ್ತಿದ್ದಾರೆ. ವಾಹನಗಳ ಓಡಾಟ ಒಂದೆಡೆಯಾದರೆ, ನಾಯಿ, ಹಂದಿಗಳ ಕಿರಿಕಿರಿ ಇನ್ನೊಂದೆಡೆ. ಲಾರಿ, ಜೀಪು, ಬೈಕ್ಗಳನ್ನು ಬೀದಿಗಳಲ್ಲೇಪಾರ್ಕಿಂಗ್ ಮಾಡಲಾಗುತ್ತಿದೆ. ಹೀಗಾಗಿಜನಸಂಚಾರಕ್ಕೆ ತೊಂದರೆಯಾಗುತ್ತಿದೆ.ಕಲಬುರಗಿ ಮೂಲದ ಗುತ್ತಿಗೆದಾರನಿಗೆನೀಡಲಾದ ಬೀದಿ ದೀಪ ನಿರ್ವಹಣೆ ಅವಧಿಪೂರ್ಣಗೊಂಡಿದೆ. ಹೀಗಾಗಿ ಕಳೆದ ಒಂದುತಿಂಗಳಿಂದ ನಿರ್ವಹಣೆ ಸ್ಥಗಿತವಾಗಿದೆ. ಪುರಸಭೆ ಆಡಳಿತ ಒಂದು ವರ್ಷದ ಬೀದಿದೀಪ ನಿರ್ವಹಣೆ ವೆಚ್ಚ ಪಾವತಿಸಿಲ್ಲಎನ್ನುವ ಕಾರಣಕ್ಕೆ ಬೇಸರಗೊಂಡ ಗುತ್ತಿಗೆದಾರ ದೀಪಗಳ ರಿಪೇರಿಗೆ ಮುಂದಾಗುತ್ತಿಲ್ಲ ಎನ್ನುವ ಆರೋಪಕೇಳಿಬರುತ್ತಿದೆ. ಇನ್ನೊಂದೆಡೆ ದೀಪಗಳ ನಿರ್ವಹಣೆ ಹೆಸರಿನಲ್ಲಿ ಗುತ್ತಿಗೆದಾರ ಪುಕ್ಕಟೆ ಬಿಲ್ ಪಡೆಯುತ್ತಿದ್ದಾರೆ ಎನ್ನುವ ದೂರುಗಳು ಇವೆ.
ಬೀದಿ ದೀಪಗಳ ನಿರ್ವಹಣೆಗಾಗಿ ಪುರಸಭೆ ಪ್ರತಿ ತಿಂಗಳು ಒಂದು ಲಕ್ಷ ರೂ. ವರೆಗೂ ಖರ್ಚು ಮಾಡುತ್ತಿದೆ. ದೀಪಗಳ ನಿರ್ವಹಣೆ ಮಾಡದೇ ಕೊಟ್ಟಿ ಬಿಲ್ಲು ಬರೆಯಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪುರಸಭೆ ಆಡಳಿತ ಮತ್ತು ಗುತ್ತಿಗೆದಾರನ ಬೇಜವಾಬ್ದಾರಿಗೆ ನಗರ ರಾತ್ರಿ ವೇಳೆ ಕತ್ತಲಲ್ಲಿ ಮುಳುಗಿದೆ.
ಕಾಂಗ್ರೆಸ್ ಆಡಳಿತಕ್ಕೆ ಸ್ಥಳೀಯರಿಗೆ ಕುಡಿಯಲು ಶುದ್ಧ ನೀರು ಕೊಡಲಾಗುತ್ತಿಲ್ಲ.ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದ್ದರೂ ಸಮರ್ಪಕವಾಗಿ ಬೀದಿ ದೀಪಗಳ ನಿರ್ವಹಣೆ ಮಾಡಲಾಗದೆ ಇಡೀ ನಗರವನ್ನು ಕತ್ತಲಿಗೆ ನೂಕಿದ್ದಾರೆ. ಅಧಿಕಾರಿಗಳು, ಕಾಂಗ್ರೆಸ್ ಆಡಳಿತ ಸದಸ್ಯರು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಆಡಳಿತದಿಂದ ಜನತೆ ಬೇಸತ್ತಿದ್ದಾರೆ. -ಭೀಮಶಾ ಜಿರೊಳ್ಳಿ, ಪುರಸಭೆ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ
ಬೀದಿ ದೀಪಗಳ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರನ ಅವಧಿ ಪೂರ್ಣವಾಗಿದೆ. ಹೊಸಟೆಂಡರ್ ಕರೆಯಲಾಗಿದ್ದು, ಹತ್ತಾರು ದಿನಗಳಲ್ಲಿ ಮತ್ತೂಬ್ಬ ಗುತ್ತಿಗೆದಾರಕರ್ತವ್ಯಕ್ಕೆ ಹಾಜರಾಗುತ್ತಾರೆ. ಹೊಸ ಗುತ್ತಿಗೆದಾರ ಬರುವವರೆಗೂ ದೀಪಗಳ ನಿರ್ವಹಣೆ ಮಾಡುವಂತೆ ಹಳೆಯ ಗುತ್ತಿಗೆದಾರನಿಗೆ ಸೂಚಿಸಿದರೂ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಜನರಿಗೆ ತುಸು ತೊಂದರೆಯಾಗುತ್ತಿದೆ. -ವಿಠ್ಠಲ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ
-ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ
Kalaburagi; ಮತದಾನ ಮಾಡಿ ವಿಡಿಯೋ ವೈರಲ್ ಮಾಡಿದ ಚಿಂಚೋಳಿ ಮತದಾರ
Dr.Nagareddy Patil: ಮಾಜಿ ಶಾಸಕ ಡಾ.ನಾಗರೆಡ್ಡಿ ಪಾಟೀಲ್ ಇನ್ನಿಲ್ಲ
BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್ ಖರ್ಗೆ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್
MUST WATCH
ಹೊಸ ಸೇರ್ಪಡೆ
Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು
PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ
Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ
ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′
Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು