ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′
Team Udayavani, May 10, 2024, 9:57 AM IST
ಉಡುಪಿ: ಉಡುಪಿ ಎಂದಾಕ್ಷಣ ನೆನಪಿಗೆ ಬರುವುದು ಶುಚಿ-ರುಚಿಯಾದ ತಿಂಡಿ-ತಿನಿಸುಗಳು, ಬಗೆಬಗೆಯ ಖಾದ್ಯಗಳು ಹಾಗೂ ಊಟೋಪಚಾರ. ಉಡುಪಿಯ ಜನರು ಆಹಾರದ ರಸಿಕರು ಎಂಬ ಮಾತೂ ಇದೆ. ಈ ನೆಲೆಯಲ್ಲಿ ಅಡುಗೆಗೆ ವಿಶ್ವದಲ್ಲಿಯೇ ಹೆಸರು ಗಳಿಸಿದ ಉಡುಪಿಯಲ್ಲಿ ಇದೀಗ ಹೊಸತನದೊಂದಿಗೆ ತಾಜಾ ಮತ್ತು ಪರಿಶುದ್ಧತೆಯ ಸಾಂಪ್ರದಾಯಿಕ ಆಹಾರೋತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಉಡುಪಿ ಮೂಲದವರಿಂದ ಇತ್ತೀಚೆಗೆ ಕಿನ್ನಿಮೂಲ್ಕಿ ಮುಖ್ಯರಸ್ತೆಯ ಸಿಲ್ವರ್ ಬೆಲ್ ಕಟ್ಟಡದಲ್ಲಿ ನೂತನವಾಗಿ ಸ್ಥಾಪನೆಗೊಂಡ “ಲಾ ಸೇವ್ಯು ಬೇಕರಿ’ ಸಂಸ್ಥೆ ವತಿಯಿಂದ ಚಿಟಾ³ಡಿಯ ಬೀಡಿನಗುಡ್ಡೆ ಮೈದಾನದಲ್ಲಿ ಮೇ 24ರಿಂದ 26ರ ತನಕ “ಆಹಾರ ಮತ್ತು ವ್ಯಾಪಾರ ಮೇಳ-2024′ ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ವಿವಿಧ ಆಕರ್ಷಕ ಆಹಾರ ಮಳಿಗೆಗಳು, ಪೀಠೊಪಕರಣಗಳ ಎಕ್ಸ್ಪೋ, ಲೈವ್ ಸ್ಟೇಷನ್ಗಳು, ವಿದ್ಯಾರ್ಥಿಗಳ ವಿಭಾಗ, ಎಜುಕೇಟರ್ ಲಾಂಜ್, ಗೃಹೋಪಯೋಗಿ ವಸ್ತುಗಳ ವಿಭಾಗ, ಗೇಮ್ ಕಾರ್ನರ್, ಮಾಧ್ಯಮ ಮತ್ತು ಪತ್ರಿಕಾ ವಿಭಾಗ ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ.
ಎಐಸಿಟಿಇ ಮತ್ತು ಎನ್ಎಸ್ಡಿಸಿ ಸಂಸ್ಥೆಗಳ ಮಾನ್ಯತೆ ಪಡೆದ ಲಾ ಸೇವ್ಯು ಬೇಕರಿ ಮತ್ತು ಸಂಸ್ಥೆ ಕುರಿತು ಹೆಚ್ಚಿನ ಮಾಹಿತಿಗೆ ವೆಬ್ಸೈಟ್: http://www.lessaveurs.org ವೀಕ್ಷಿಸಲು ಸಂಸ್ಥೆಯ ಸಿಇಒ, ಚೆಫ್ ಮತ್ತು ಸಹಸಂಸ್ಥಾಪಕ ಶ್ರೀಹರ್ಷ ಜಿ.ಎಲ್. ಉಪಾಧ್ಯ ತಿಳಿಸಿದ್ದಾರೆ.
ಮಳಿಗೆ ತೆರೆಯಲು ಸಂಪರ್ಕಿಸಿ
ಉಡುಪಿಯ ವೈವಿಧ್ಯಮಯ ಆಹಾರೋತ್ಪನ್ನಗಳ ಪರಿಚಯದೊಂದಿಗೆ ಪ್ರದರ್ಶನ ಮತ್ತು ಮಾರಾಟಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾದ ಈ ಆಹಾರ ಮೇಳದಲ್ಲಿ ಭಾಗವಹಿಸಲಿಚ್ಛಿಸುವ ಆಹಾರೋತ್ಪನ್ನ ಸಂಸ್ಥೆ ಮತ್ತು ಮಳಿಗೆಗಳು ಮೇಳದಲ್ಲಿ ಮಳಿಗೆ ತೆರೆಯಲು ಮೊ.ಸಂ: 8431916746 ಯನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೇ ಆಗುಂಬೆ ಸುರಂಗ ಮಾರ್ಗದ ಡಿಪಿಆರ್?
4 ವರ್ಷ ಪೂರ್ಣಗೊಳ್ಳದೆ ಎಲ್ಕೆಜಿ ಪ್ರವೇಶವಿಲ್ಲ
ಅನಾಮಧೇಯ ಲಿಂಕ್ ಕ್ಲಿಕ್ಕಿಸಿ ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ
Doddangudde ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 21-24: ಪ್ರತಿಷ್ಠಾ ವರ್ಧಂತಿ ಮಹೋತ್ಸವ
MLC ಚುನಾವಣೆ ಬಿಜೆಪಿ, ಎನ್ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ: ಕೋಟ
MUST WATCH
ಹೊಸ ಸೇರ್ಪಡೆ
Star Air ;ತಿರುಪತಿಯಿಂದ ಬೆಳಗಾವಿಗೆ ವಿಮಾನ ರದ್ದು: ಪ್ರಯಾಣಿಕರ ಪರದಾಟ
Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ
Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ
List ಅಲ್ಲಿ ಹೆಸರಿಲ್ಲದೆ ಮಮತಾ ಬ್ಯಾನರ್ಜಿ ಸಹೋದರನಿಗೆ ಮತ ಹಾಕಲು ಸಾಧ್ಯವಾಗಲಿಲ್ಲ!
Hunsur ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಛಾವಣಿ; ಬ್ಯಾರನ್ಗೂ ಹಾನಿ