ದೀನ ದಲಿತರ ಸೇವೆಯಲ್ಲೇ ಜೀವನ ಸಾರ್ಥಕತೆ: ಹಿರೋಳಿ
Team Udayavani, Nov 11, 2018, 11:48 AM IST
ಕಲಬುರಗಿ: ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ದೀನ-ದಲಿತರಿಗೆ ಸಹಾಯ ಮಾಡಬೇಕು. ಅವರ ಸೇವೆಯಲ್ಲಿಯೇ ಬದುಕಿನ ಸಾರ್ಥಕತೆ ಇದೆ. ನಾವು ಅಳಿದರೂ ಉಳಿಯುವಂಥ ಸೇವೆ ನಮ್ಮಿಂದಾಗಬೇಕು ಎಂದು ತಹಶೀಲ್ದಾರ್ ಅಶೋಕ ಹಿರೋಳಿ ಮಾತನಾಡಿದರು.
ನಗರದ ಹೊರವಲಯದ ಸೈಯದ್ ಚಿಂಚೋಳಿ ಕ್ರಾಸ್ನಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮದ ನಿಸರ್ಗದ ಮಡಿಲಲ್ಲಿ ಇಲ್ಲಿನ ದೇವೀಂದ್ರಪ್ಪ ಜಿ.ಸಿ.ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ “ಆರದಿರಲಿ ಬೆಳಕು’ ಇದು ಭರವಸೆ ಬೆಳಕು… ಎನ್ನುವ ವಿಶೇಷ ಸಂದೇಶ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿ, ಬಾಲ್ಯದಲ್ಲಿ ನಾವು ನಮ್ಮ ತಂದೆ-ತಾಯಿಯಿಂದ ಪಡೆದ ಪ್ರೀತಿ, ವಾತ್ಸಲ್ಯ, ಸೇವೆಯನ್ನು ಅವರ ವೃದ್ಯಾಪ್ಯದಲ್ಲಿ ನೀಡಿ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಹಿರಿಯ ಸಾಹಿತಿ ಡಾ| ವಾಸುದೇವ ಸೇಡಂ, ಮಳಖೇಡದ ಅಲ್ಟ್ರಾಟೆಕ್ ಕಮ್ಮುನಿಟಿ ಫೌಂಡೇಷನ್ ಮುಖ್ಯಸ್ಥೆ ಚಂದಮ್ಮ ಅಂಬಲಗಿ, ಇಂಡಿಯನ್ ಬ್ಯಾಂಕಿನ ವ್ಯವಸ್ಥಾಪಕಿ ರಮಾ ಎಸ್.ಧರ್ಗಿ, ಸಹಕಾರಿ ಧುರೀಣ ಮಲ್ಲಿಕಾರ್ಜುನ ಖೇಮಜಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಸಂದೀಪ, ಸಮಾಜ ಚಿಂತಕಿ ರೀಟಾ ಜೇಮ್ಸ್ ಮಿನೇಂಜೇಸ್, ಸಾಹಿತ್ಯ ಪ್ರೇಮಿ ರವೀಂದ್ರಕುಮಾರ ಭಂಟನಳ್ಳಿ, ಚಿಂತಕ ಶಿವಕುಮಾರ ದೊಡ್ಮನಿ, ಕಾಂಗ್ರೇಸ್ ಯುವ ಮುಖಂಡ ಶಿವಾನಂದ ಹೊನಗುಂಟಿ, ಹಿರಿಯ ಸಾಹಿತಿ ಶಿವಕವಿ ಜೋಗೂರ, ಜಲಜಾಕ್ಷಿ ಕೋರೆ, ಪ್ರಮುಖರಾದ ಡಾ| ನಾಗರತ್ನಾ ಬಿ.ದೇಶಮಾನ್ಯೆ, ಡಾ| ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ, ಶಿವರಾಜ ಅಂಡಗಿ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ಸವಿತಾ ಪಾಟೀಲ, ಜಗದೀಶ ಮರಪಳ್ಳಿ, ನಾಗೇಂದ್ರಪ್ಪ ಮಾಡ್ಯಾಳೆ, ಪ್ರಭುಲಿಂಗ ಮೂಲಗೆ, ಸತೀಶ ಸಜ್ಜನ ಹಾಗರಗುಂಡಗಿ, ಎಸ್.ಬಿ.ಐ.ಬ್ಯಾಂಕಿನ ವ್ಯವಸ್ಥಾಪಕ ಅಶೋಕ ಕಾಳೆ, ವಿರಾಜಕುಮಾರ ವಿ.ಕಲ್ಯಾಣ ಹಾಗೂ ನೂರಾರು ಜನರು ಭಾಗವಹಿಸಿದ್ದರು.
ಖ್ಯಾತ ಸಂಗೀತ ಕಲಾವಿದರಾದ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಶ್ರೀಧರ ಹೊಸಮನಿ, ನಾಗಲಿಂಗಯ್ಯ ಸ್ಥಾವರಮಠ, ಕವಿರಾಜ ಪಾಟೀಲ ಭಂಟನಳ್ಳಿ ಅವರಿಂದ ಜಾನಪದ ಝೇಂಕಾರ ಮುದುಡಿದ ಮನಗಳಿಗೆ ಮುದ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು