ಪದ್ಮಶ್ರೀ ಗೌರವ ಬೇಡ ಎಂದ ಸಿದ್ದೇಶ್ವರ ಶ್ರೀಗಳು
Team Udayavani, Jan 27, 2018, 6:35 AM IST
ಕಲಬುರಗಿ: ಕೇಂದ್ರ ಸರ್ಕಾರ ಪ್ರಕಟಿಸಿದ “ಪದ್ಮಶ್ರೀ’ ಗೌರವವನ್ನು ಆಧ್ಯಾತ್ಮಿಕ ಗುರು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿರಸ್ಕರಿಸಿದ್ದಾರೆ. ” ಈ ಗೌರವ ಬೇಡ’ ಎಂದು ಪ್ರಧಾನಿ ಮೋದಿ ಅವರಿಗೆ ಶನಿವಾರ ಪತ್ರ ಬರೆಯುವುದಾಗಿ ಶ್ರೀಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
ಆಧ್ಯಾತ್ಮಿಕ ಪ್ರವಚನ ನೀಡಲು ನಗರದಲ್ಲಿ ತಂಗಿರುವ ಶ್ರೀಗಳು, ಸನ್ಯಾಸಿಯಾದ ತಮಗೆ ಪ್ರಶಸ್ತಿ-ಗೌರವ ಏಕೆ ಬೇಕು? ತಮಗೆ ಅದರ ಅವಶ್ಯಕತೆಯಿಲ್ಲ. ಯಾವತ್ತೂ ಪ್ರಶಸ್ತಿ-ಗೌರವ ಸ್ವೀಕರಿಸಿಲ್ಲ.
ಈ ಹಿಂದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ್ದ ಗೌರವ ಡಾಕ್ಟರೆಟ್ ಪದವಿಯನ್ನೂ ಸ್ವೀಕರಿಸಿರಲಿಲ್ಲ ಎಂದರು. ಕೇಂದ್ರ ಸರ್ಕಾರ ಪದ್ಮಶ್ರೀ ಗೌರವ ನೀಡಿದೆಯಾದರೂ ತಾವು ಅದನ್ನು ಅಪೇಕ್ಷಿಸಿಲ್ಲ. ಈ ವಿಷಯ ಕುರಿತು ಚರ್ಚೆ ಬೇಡ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ
ICSE: ರಾಜ್ಯದ ವಿದ್ಯಾರ್ಥಿಗಳಿಗೆ ಶೇ. 99 ಮೀರಿದ ಫಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ
Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ
ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ
Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ