ತನಾರತಿ ಉತ್ಸವ
Team Udayavani, Oct 1, 2018, 10:34 AM IST
ಸೇಡಂ: ಮನೆ, ರಸ್ತೆ, ಅಂಗಡಿ ಮುಂಗಟ್ಟುಗಳಲ್ಲಿ ಭವ್ಯ ರಂಗೋಲಿ. ಕುಂಭ-ಕಳಸ ಹೊತ್ತು ಹೆಜ್ಜೆ ಹಾಕಿದ ಹೆಂಗಳೆಯರು. ಎಲ್ಲೆಡೆಯೂ ಭಕ್ತಿಯ ಪರಾಕಾಷ್ಠೆ. ಇದು ರವಿವಾರ ಪಟ್ಟಣದಲ್ಲಿ ಕಂಡು ಬಂದ ದೃಶ್ಯ. ಇತಿಹಾಸದ ಸತ್ಪುರುಷ, ಜೀವಂತ ಸಮಾಧಿಸ್ಥ ಸಪ್ಪಣಾರ್ಯ ಶಿವಯೋಗಿಗಳ ಶತಮಾನೋತ್ಸವ ಸಂಭ್ರಮ ಹಿನ್ನೆಲೆಯಲ್ಲಿ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ನೇತೃತ್ವದಲ್ಲಿ ನಡೆದ ತನಾರತಿ ಉತ್ಸವ ಭವ್ಯತೆ ಮತ್ತು ದಿವ್ಯತೆಯ ಪ್ರಮುಖ ಆಕರ್ಷಣೆಯಾಗಿತ್ತು.
ಶ್ರೀ ವೀರಭದ್ರೇಶ್ವರ ದೇವಾಲಯದಿಂದ ತನಾರತಿ ಹೊತ್ತ ಸದಾಶಿವ ಸ್ವಾಮೀಜಿ ಜೊತೆ ಸಾವಿರಾರು ಭಕ್ತರು ಹೆಜ್ಜೆ ಹಾಕಿದರು. ಪೊಲೀಸ್ ಪಾಟೀಲಗಲ್ಲಿ, ಸಣ್ಣ ಅಗಸಿ, ತೆಗ್ಗಿನಗೇರಿ, ದೊಡ್ಡ ಅಗಸಿ, ಪುರಾನಾ ಬಜಾರ್, ಹಲಕರ್ಟಿಗಲ್ಲಿ ಒಳಗೊಂಡಂತೆ ಅನೇಕ ಬಡಾವಣೆಗಳಲ್ಲಿ ತನಾರತಿ ಉತ್ಸವ ಸಂಚರಿಸಿತು.
ಉತ್ಸವಕ್ಕೆ ಸ್ವಾಗತ ಕೋರಲೆಂದೇ ನೂರಾರು ಮನೆಗಳ ಎದುರು ರಂಗು ರಂಗಿನ ರಂಗೋಲಿ ಕಂಗೊಳಿಸುತ್ತಿದ್ದವು. ಪರಾರಿ, ಹಸಿರು ತೋರಣ ಗಮನಸೆಳೆಯುತ್ತಿದ್ದವು. ಎಲ್ಲೆಡೆಯೂ ಜಯಘೋಷಗಳು ಮೊಳಗಿದವು. ಕುಂಭ-ಕಳಸ ಹೊತ್ತು ನೂರಾರು ಮಹಿಳೆಯರು ಭಕ್ತಿಯ ಪರಾಕಾಷ್ಠೆ ಮೆರೆದರು. ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೇರಿದಂತೆ ಅನೇಕರು ತನಾರತಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ