5 ನೇ ತರಗತಿವರೆಗೆ ಶಾಲೆ ನಡೆಸಿದರೆ ಬೀಗ
Team Udayavani, Mar 15, 2021, 1:35 PM IST
ಕೋಲಾರ: ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ, 1ರಿಂದ 5ನೇ ತರಗತಿ ಶಾಲೆ ನಡೆಸಿದರೆಅಂತಹ ಶಾಲೆಗೆ ಬೀಗ ಜಡಿದು ಪ್ರಕರಣ ದಾಖಲಿಸುವುದಲ್ಲದೇ ಮಾನ್ಯತೆ ರದ್ದುಪಡಿಸಲು ಶಿಫಾರಸು ಮಾಡಿ ಎಂದು ಶಿಕ್ಷಣ ಸಂಯೋಜಕರಿಗೆ ಬಿಇಒ ಕೆ.ಎಸ್.ನಾಗರಾಜಗೌಡ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಣ ಸಂಯೋಜಕರ ಸಭೆ ನಡೆಸಿದ ಬಿಇಒ ಅವರು,ಮಾಲೂರಿಗೆ ಬಂದಿದ್ದ ಶಿಕ್ಷಣ ಸಚಿವರೂ ಈ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಲಾಖೆಯಆಯುಕ್ತರೂ ಸುತ್ತೋಲೆ ಕಳುಹಿಸಿದ್ದಾರೆ ಎಂದರು.
ಶಾಲೆಗಳಿಗೆ ಭೇಟಿ ನೀಡಿ: 1ರಿಂದ 5ನೇ ತರಗತಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲೆಗೆ ಕರೆಸಬೇಡಿಎಂದು ಸೂಚನೆ ನೀಡಿದ್ದರೂ ಕೆಲವು ಖಾಸಗಿ ಶಾಲೆಗಳು ಮಕ್ಕಳನ್ನು ಶಾಲೆಗೆ ಕರೆಸುತ್ತಿದ್ದಾರೆ ಎಂಬದೂರುಗಳ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಶಾಲೆಗಳಿಗೆ ಭೇಟಿ ನೀಡಿ ಕ್ರಮವಹಿಸಲು ಸಿಸಿಒಗಳಿಗೆಸೂಚನೆ ನೀಡಿದರು.
ಇಲಾಖೆಯ ಗಮನಕ್ಕೆ ತನ್ನಿ: ಮಕ್ಕಳ ಆರೋಗ್ಯ ರಕ್ಷಣೆ ಪೋಷಕರ ಜವಾಬ್ದಾರಿಯಾಗಿದೆ.ಪೋಷಕರು ತಮ್ಮ ಪೂರ್ವ ಪ್ರಾಥಮಿಕತರಗತಿಗಳಿಂದ 5ನೇ ತರಗತಿ ವರೆಗಿನ ಮಕ್ಕಳನ್ನುಶಾಲೆಗೆ ಕಳುಹಿಸಬಾರದು, ಶಾಲೆಯವರುಕಳುಹಿಸಲು ಸೂಚಿಸಿದರೆ ಕೂಡಲೇ ಇಲಾಖೆಯಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಓದುವ ಬೆಳಕು ಪ್ರಗತಿ ಪರಿಶೀಲಿಸಿ: ರಾಜ್ಯ ಸರ್ಕಾರದ ನಿರ್ದೇಶನದಂತೆ ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಪಂ ಗ್ರಂಥಾಲಯಗಳಲ್ಲಿಶಾಲಾ ಮಕ್ಕಳಿಗೆ ಸದಸ್ಯತ್ವ ನೀಡಲಾಗಿದೆ. ಇದರ ಪ್ರಗತಿಯನ್ನು ಪರಿಶೀಲಿಸಲು ಇಸಿಒಗಳಿಗೆ ಸೂಚಿಸಿದರು.
ಶಾಲೆಗಳ ಮೂಲ ಸೌಲಭ್ಯಗಳ ಅಭಿವೃದ್ಧಿಗೆಸಂಬಂಧಿಸಿದಂತೆ ಪಿಡಿಒಗಳನ್ನು ಸಂಪರ್ಕಿಸಿ, ಅಗತ್ಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದ ಅವರು, ಈ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಗಮನಹರಿಸಲು ಇಸಿಒಗಳಿಗೆ ಸಲಹೆ ನೀಡಿದರು.
ಹರಾಜು ಹಾಕಿ: ಶಾಲೆಗಳಲ್ಲಿನ ಹಳೆಯ ಸಾಮಗ್ರಿಗಳು, ಹಾಳಾದ ವಸ್ತುಗಳನ್ನುಸಂಗ್ರಹಿಸಬೇಡಿ, ಕೂಡಲೇ ಎಸ್ಡಿಎಂಸಿ ಅನುಮತಿ ಪಡೆದು ಹರಾಜು ಹಾಕಿ ವಿಲೇವಾರಿ ಮಾಡಿ ಎಂದುಮುಖ್ಯ ಶಿಕ್ಷಕರಿಗೆ ಸೂಚಿಸಿದ ಬಿಇಒ, ಈ ಸಂಬಂಧಈಗಾಗಲೇ ಇ-ವೇಸ್ಟ್ ಕುರಿತು ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಾಲೆಗಳ ಆವರಣವನ್ನು ಸುಂದರಗೊಳಿಸಿ ಗಿಡಮರ ಬೆಳೆಸಿ, ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಗೆಮುಖ್ಯಶಿಕ್ಷಕರೊಂದಿಗೆ ಎಲ್ಲಾ ಶಿಕ್ಷಕರು ಸಹಕಾರ ನೀಡಿಎಂದು ತಿಳಿಸಿದರು. ಸಭೆಯಲ್ಲಿ ಕಚೇರಿ ವ್ಯವಸ್ಥಾಪಕಮುನಿಸ್ವಾಮಿಗೌಡ,ಇಸಿಒಗಳಾದ ಮುನಿರತ್ನಯ್ಯಶೆಟ್ಟಿ,ರಾಘವೇಂದ್ರ, ಆರ್.ಶ್ರೀನಿವಾಸನ್, ಭೈರೆಡ್ಡಿ, ವೆಂಕಟಾಚಲಪತಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ