ನೆಲಕಚ್ಚಿದ ರಾಗಿ ಬೆಳೆ, ರೈತನಿಗೆ ಚಿಂತೆ
Team Udayavani, Nov 2, 2019, 2:22 PM IST
ಟೇಕಲ್: ಹೋಬಳಿಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಫಸಲಿಗೆ ಬಂದಿದ್ದ ರಾಗಿ ಬೆಳೆ ನೆಲೆ ಕಚ್ಚಿದ್ದು, ಕಾಳು ಮೊಳಕೆ ಹೊಡೆಯುತ್ತಿದೆ. ಇದರಿಂದ ರೈತರು ತೀವ್ರ ನಷ್ಟಕ್ಕೆ ಒಳಗಾಗುವಂತಾಗಿದೆ.
ಆರಿದ್ರಾ ಮಳೆಯಲ್ಲಿ ಬಿತ್ತನೆ ಮಾಡಿದ್ದ ರಾಗಿ ಬೆಳೆ ಸಾಮಾನ್ಯವಾಗಿ ದೀಪಾವಳಿ ಹಬ್ಬದ ನಂತರ ಕಟಾವಿಗೆ ಬರುತ್ತದೆ. ಆದರೆ, ಬಿತ್ತನೆ ಮಾಡಿದ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆ ನಿಗದಿತ ಸಮಯಕ್ಕೆ ಕೊಯ್ಲಿಗೆ ಬಂದಿಲ್ಲ. ಅಲ್ಲದೆ, ಮಳೆಯು ಎಡೆಬಿಡದೇ ಸುರಿಯುತ್ತಿರುವ ಕಾರಣ ತೆನೆ ಇನ್ನೂ ಹಸಿಯಾಗಿದೆ. ಕೆಲವು ಕಡೆ ತೆನೆ ಮಾಗಿದ್ದರೂ ಕೊಯ್ಲು ಮಾಡಲೂ ಮಳೆ ಅಡ್ಡಿಯಾಗಿದೆ. ಹಿಂದುಳಿದು ಬಿತ್ತಿನೆ ಮಾಡಿದ್ದ ರಾಗಿ ಬೆಳೆಯೂ ಈಗ ಒಂದೇ ಬಾರಿ ಕಟಾವಿಗೆ ಬರುತ್ತಿದೆ.
ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆಯೇನೋ ಹುಲುಸಾಗಿ ಬೆಳೆದಿದೆ. ಇಳುವರಿಯೂ ಚೆನ್ನಾಗಿದೆ. ಆದರೆ, ಮಳೆ ಹದ ಜಾಸ್ತಿಯಾದ ಕಾರಣ ಹುಲ್ಲು ಉದ್ದ ಬೆಳೆದಿದೆ. ತೆನೆಯ ಬಾರತಡೆಯದೇ ಬೆಳೆ ನೆಲಕ್ಕೆ ಬಾಗಿದ್ದು, ಕಾಳನ್ನು ಇಲಿಗಳು ತಿನ್ನಲಾರಂಭಿಸಿವೆ. ಕೆಲವು ಕಡೆ ಮೊಳಕೆಯೂ ಬಂದಿದೆ. ರೈತನಿಗೆ ಮಳೆ ಬಂದರೂ ಕಷ್ಟ ಮಳೆ ಬಾರದೇ ಇದ್ದರೂ ನಷ್ಟ ಎಂಬಂತಾಗಿದೆ. ಸತತ ಬರಗಾಲವಾಗಿದ್ದ ಕೋಲಾರ ಜಿಲ್ಲೆಯಲ್ಲಿ ಈ ಬಾರಿ ಹೆಚ್ಚು ಮಳೆ ಬಿದ್ದಿದೆ. ಇದರಿಂದ ಬೆಳೆಗೆ ಅನುಕೂಲವಾದ್ರೂ ಕೆರೆಗಳಿಗೆ ನೀರು ಬಂದಿಲ್ಲ. ರಾಗಿ ಬೆಳೆ 3 ರಿಂದ 4 ಅಡಿ ಬೆಳೆದಿದ್ದು, ಇನ್ನೇನು ಕಾಳು ಮನೆ ತುಂಬುತ್ತೆ ಎನ್ನುವಷ್ಟರಲ್ಲಿ ನೆಲಕ್ಕುರುಳಿದೆ. ಇದರಿಂದ ರೈತರಿಗೆ ಮತ್ತೆ ಸಂಕಷ್ಟ ಬಂದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ