ಸತ್ಯ, ಪ್ರಾಮಾಣಿಕ ಸೇವೆಗೆ ದುಷ್ಟಶಕ್ತಿಗಳು ಬಿಡುವುದಿಲ್ಲ: ದಯಾನಂದ್
ವಯಸ್ಸಾದ ನಂತರ ನಾವು ಏನನ್ನೂ ಸಾಧಿಸಲು ಸುಲಭವಾಗುವುದಿಲ್ಲ.
Team Udayavani, Apr 23, 2022, 6:05 PM IST
ಬಂಗಾರಪೇಟೆ: ಸಮಾಜದಲ್ಲಿ ಸತ್ಯವನ್ನು ಮಾತನಾಡಿದರೆ ಶತ್ರುಗಳು ತಾನಾಗೆಯೇ ಸೃಷ್ಟಿಯಾಗುತ್ತಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಸಮಾಜದ ದುಷ್ಟಶಕ್ತಿಗಳು ಬಿಡುತ್ತಿಲ್ಲ. ಸಮಾಜದ ನವನಿರ್ಮಾಣಕ್ಕೆ ಪ್ರಯತ್ನ ಮಾಡಿದರೆ ಶಿಕ್ಷೆಯೇ ಬೇರೆ ಆಗಿರುತ್ತದೆ ಎಂದು ತಹಶೀಲ್ದಾರ್ ಎಂ. ದಯಾನಂದ್ ಹೇಳಿದರು.
ತಾಲೂಕಿನ ಬಾವರಹಳ್ಳಿ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ 131ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ, ಸತ್ಯ ಕಹಿಯಾಗಿರುವುದರಿಂದ ಅದನ್ನು ಯಾರೂ ಇಷ್ಟಪಡುವುದಿಲ್ಲ. ಡಾ. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಕಹಿಯನ್ನೇ ಉಂಡು, ಅವಮಾನ ಸಹಿಸಿ, ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೇ ಶಾಂತಚಿತ್ತರಾಗಿ ಹಂತವಾಗಿ ಬೆಳೆ ದು, ಈ ದೇಶಕ್ಕೆ ಸಂವಿಧಾನ ಬರೆದು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ಜನಿಸದಿದ್ದರೆ, ಸಂವಿಧಾನ ಬರೆಯದಿದ್ದರೆ ಈ ದೇಶದಲ್ಲಿ ದಮನಿತರ ಸ್ಥಿತಿ ಹೇಗಿರುತ್ತಿತ್ತು ಎಂದು ಯೋಚಿಸಲು ಸಾಧ್ಯವಿಲ್ಲ. ರಾಜಕೀಯವು ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅವರ ಫಲವನ್ನು ಅನುಭಸುತ್ತಿರುವ ನಾವು, ಐಶಾರಾಮಿ ಜೀವನಕ್ಕೆ ಅಂಬೇಡ್ಕರ್ ಹೆಸರನ್ನು ಬಳಸಿಕೊಂಡು, ಅವರ ಆದರ್ಶಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು.
ವಕೀಲ ಎಚ್.ವಿ.ಸುಬ್ರಮಣಿ ಧರ್ಮದ ಬಗ್ಗೆ ಸುದೀರ್ಘ ವಿವರಣೆ ನೀಡಿ, ನಾವು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ ಇದ್ದಾಗ ಅದು ನಿಜವಾದ ಧರ್ಮವಾಗುತ್ತದೆ. ಧರ್ಮದ ವಿಚಾರವನ್ನು ಅವರವರ ಇಷ್ಟಕ್ಕೆ ಅನುಸಾರವಾಗಿ ಬಳಸಿಕೊಳ್ಳುತ್ತಿರುವುದರಿಂದ ಧರ್ಮದ ಅರ್ಥ ವೇ ಕಳೆದುಹೋಗುತ್ತಿದೆ ಎಂದು ಹೇಳಿದರು.
ಆದರ್ಶವಾಗಿಟ್ಟುಕೊಳ್ಳಿ: ವಯಸ್ಸಾದ ನಂತರ ನಾವು ಏನನ್ನೂ ಸಾಧಿಸಲು ಸುಲಭವಾಗುವುದಿಲ್ಲ. ಜೀವನದಲ್ಲಿ ಮುಂದೆ ಬಂದು ನಾಲ್ಕು ಮಂದಿಗೆ ಉಪಯೋಗವಾಗಬೇಕೆಂದರೆ ಸಣ್ಣ ವಯಸ್ಸಿನಲ್ಲೇ ಪ್ರಯತ್ನಪಟ್ಟು ಸಾಧಿಸಬೇಕು. ಇದಕ್ಕೆ ವಿಶ್ವ ಮನ್ನಣೆ ಗಳಿಸಿರುವ ಸರ್ವರ ಸಮಾನತೆಗಾಗಿ ತಮ್ಮ ಜೀವನ ವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.
ಗೌರವ ತಾನಾಗೇ ಬರುತ್ತೆ: ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಕೋಲಾರದ ವಕೀಲ ಕೆ.ವಿ.ಸುರೇಂದ್ರ ಕುಮಾರ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಪ್ರತಿಯೊಬ್ಬರು ತಂದೆ-ತಾಯಿ, ಗುರುಗಳನ್ನು ಗೌರವಿಸಿದರೆ ಗೌರವ ತಾನಾಗೇ ಬರುತ್ತದೆ ಎಂದು ವಿವರಿಸಿದರು.
ವೇದಿಕೆಯಲ್ಲಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜುಲು, ಮುಖಂಡ ದೇಶಿಹಳ್ಳಿ ವೆಂಕಟರಾಂ, ಹೊಸಕೋಟೆ ರಾಮ ದಾಸ್, ಮಾಲೂರಿನ ಪಿ.ಎಂ.ಕೃಷ್ಣಪ್ಪ ಮುಂತಾದವರು ಮಾತನಾಡಿದರು. ವಕೀಲರಾದ ಕೂತಾಂಡಹಳ್ಳಿ ರಮೇಶ್, ಪೋಕಸ್ ಸಂಸ್ಥೆಯ ಸಂಸ್ಥಾಪಕ ಹರೀಶ್, ನಿರ್ದೇಶಕರಾದ ಅತ್ತಿಗಿರಿ ನಾರಾಯಣಪ್ಪ, ಎಸ್.ಆರ್.ನಾರಾಯಣ, ಹಂಚಾಳ ಪಿ.ಕೃಷ್ಣಪ್ಪ, ರಂಗಪ್ಪ, ಚಂದ್ರಯ್ಯ, ಆರ್.ವಾಸನ್, ಕದಿರೇನಹಳ್ಳಿ ವೆಂಕಟೇಶಪ್ಪ, ಟ್ರಸ್ಟಿನ ಹಿರಿಯ ನಿರ್ದೇಶಕರಾದ ಡಾ.ಎಂ. ಗೋವಿಂದರಾಜು, ಟ್ರಸ್ಟಿನ ಅಧ್ಯಕ್ಷ ದೇವಕುಮಾರ್, ಜೆ.ಶ್ರೀನಿವಾಸ್, ಗಂಗಮ್ಮನ ಪಾಳ್ಯ ರವಿಬಾಬು, ಮಾಲೂರಿನ ತೋಟಪ್ಪ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ