ಲಾಕ್ಡೌನ್ ವೇಳೆ 11 ಸನ್ನದು ಅಮಾನತು
Team Udayavani, May 1, 2020, 7:09 PM IST
ಕೊಪ್ಪಳ: ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಾದಾದ ಬಳಿಕ ಜಿಲ್ಲಾಡಳಿತದ ಆದೇಶ ಉಲ್ಲಂಘನೆ ಮೀರಿ ಅಕ್ರಮ ಮದ್ಯ ಮಾರಾಟ ಮಾಡಿದ 11 ಮದ್ಯದ ಅಂಗಡಿಗಳ ಸನ್ನದುಗಳನ್ನ ರದ್ದುಪಡಿಸಿ ಡಿಸಿ ಸುನೀಲ್ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಈ ವರೆಗೂ 351 ಅಕ್ರಮ ಮದ್ಯ ಮಾರಾಟ ಮಾಡಿದ ಅಂಗಡಿಗಳ ಮೇಲೆಯೂ ದಾಳಿ ನಡೆದಿವೆ. ಇಷ್ಟಾದರೂ ರಾತ್ರೋ ರಾತ್ರಿ ಕಾಳ ಸಂತೆಯಲ್ಲಿ ಮದ್ಯ ಮಾರಾಟ ಮಾತ್ರ ಎಗ್ಗಿಲ್ಲದೆ ನಡೆದಿದೆ.
ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಲಾಕ್ಡೌನ್ ಜಾರಿ ಬಳಿಕ ಮದ್ಯವನ್ನು ಮಾರಾಟ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಇಷ್ಟಾದರೂ ಕೆಲವು ಮದ್ಯದ ಅಂಗಡಿಗಳಲ್ಲಿ ಸೀಲ್ ಆಗಿದ್ದರೂ ಅಕ್ರಮವಾಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ನಿಜಕ್ಕೂ ಇದು ವಿಪರ್ಯಾಸವೇ ಸರಿ. ಸೀಲ್ ಆಗಿರುವ ಅಂಗಡಿ ಬಾಗಿಲು ತೆರೆದು ಮದ್ಯ ಮಾರಾಟ ಮಾಡಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿವೆ. ಇದೆಲ್ಲವನ್ನು ಅರಿತು ಡಿಸಿ ಅವರು ಅಂತಹ ಅಂಗಡಿಗಳನ್ನು ಪಟ್ಟಿ ಮಾಡಿ ಅಕ್ರಮ ಮದ್ಯ ಮಾರಾಟದ ಕುರಿತು ಅಧಿಕೃತ ಮಾಹಿತಿ ಆಧಾರದ ಮೇಲೆಯೇ 9 ಸನ್ನದು ಪರವಾನಗಿಯನ್ನು ಮುಂದಿನ ಆದೇಶದವರೆಗೂ ಅಮಾನತ್ತಿನಲ್ಲಿಟ್ಟಿದ್ದಾರೆ.
351 ಅಂಗಡಿಗಳ ಮೇಲೆ ದಾಳಿ: ಇನ್ನೂ ಲಾಕ್ ಡೌನ್ ಜಾರಿಯಾದ ಬಳಿಕ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯಮಾರಾಟ ಮಾಡುವ ಅಂಗಡಿಗಳ ಮೇಲೂ ಪೊಲೀಸ್ ಹಾಗೂ ಅಬಕಾರಿ ಪಡೆ ದಾಳಿ ನಡೆಸಿವೆ. ಮಾ. 3ರಿಂದ ಏ. 29ರವರೆಗೂ ಜಿಲ್ಲೆಯಲ್ಲಿ 351 ಮದ್ಯದಂಗಡಿ ಮೇಲೆ ದಾಳಿ ನಡೆಸಿವೆ. ಒಟ್ಟು 48 ಮೊಕದ್ದಮೆಗಳು ದಾಖಲಾಗಿವೆ. 6,741 ಲೀಟರ್ ಮದ್ಯ, ಬಿಯರ್-5415 ಲೀಟರ್, ಕಳ್ಳಭಟ್ಟಿ-93 ಲೀಟರ್, ಬೆಲ್ಲದಕೊಳೆ 900 ಲೀಟರ್ ಸೇರಿದಂತೆ 24 ದ್ವಿಚಕ್ರ ವಾಹನ ಜಪ್ತಿ ಹಾಗೂ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ