ದುರುಗಮ್ಮನಹಳ್ಳ ಸ್ವಚ್ಛತಾ ಅಭಿಯಾನಕ್ಕೆ ಕೈ ಜೋಡಿಸಿದ ಎಸಿ ಗೀತಾ
Team Udayavani, May 11, 2019, 1:35 PM IST
ಗಂಗಾವತಿ: ಸ್ವಚ್ಛತಾ ಕಾರ್ಯವನ್ನು ಸಹಾಯಕ ಆಯುಕ್ತೆ ಸಿ.ಡಿ.ಗೀತಾ ಪರಿಶೀಲಿಸಿದರು.
ಗಂಗಾವತಿ: ನಗರದ ಮಧ್ಯ ಭಾಗದಲ್ಲಿರುವ ದುರುಗಮ್ಮನಹಳ್ಳ ಸ್ವಚ್ಛತಾ ಕಾರ್ಯಕ್ಕೆ ಸಹಾಯಕ ಆಯುಕ್ತೆ ಸಿ.ಡಿ. ಗೀತಾ ಅವರು ಕೈಜೋಡಿಸಿದ್ದು, ಹಳ್ಳದ ಸೌಂದರ್ಯ ಹೆಚ್ಚಳಕ್ಕೆ ಸಹಕಾರ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಹೇಮಗುಡ್ಡ ಮುಕ್ಕುಂಪಿ ಬೆಣಕಲ್ ಭಾಗದಲ್ಲಿರುವ ಕೆರೆಗಳು ಭರ್ತಿಯಾದ ಸಂದರ್ಭದಲ್ಲಿ ದುರುಗಮ್ಮನಹಳ್ಳಕ್ಕೆ ನೀರು ಬರುತ್ತಿತ್ತು. ಇದರಿಂದ ನಗರದ ಅಂತರ್ಜಲ ವೃದ್ಧಿ ಹಾಗೂ ಜನರ ಬಳಕೆಗೆ ಕಳೆದ 20 ವರ್ಷಗಳ ವರೆಗೆ ದುರುಗಮ್ಮನಹಳ್ಳ ನೆರವಾಗಿತ್ತು. ನಗರದ ಅವೈಜ್ಞಾನಿಕ ಬೆಳವಣಿಗೆ ಮತ್ತು ಡ್ರೈನೇಜ್ ನಿರ್ವಹಣೆ ಇಲ್ಲದೇ ಇರುವುದಿಂದ ದುರುಗಮ್ಮನಹಳ್ಳಕ್ಕೆ ಚರಂಡಿ ನೀರು ಹರಿಬಿಟ್ಟಿದ್ದು ಮತ್ತು ಮಳೆ ಕೊರತೆ ಕಾರಣ ಹಳ್ಳದಲ್ಲಿ ನೀರು ಹರಿದೇ ಇರುವುದರಿಂದ ಇಡೀ ವಾತಾವರಣ ಹದಗೆಟ್ಟಿದೆ. ಕಳೆದ 20 ವರ್ಷಗಳಿಂದ ದುರುಗಮ್ಮನಹಳ್ಳ ಬೇಡವಾದ ವಸ್ತುಗಳನ್ನು ಸುರಿಯುವ ಸ್ಥಳವಾಯಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಗರಸಭೆ ಪ್ರತಿ ದಿನ ಉತ್ಪನ್ನವಾಗುವ ಘನತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳನ್ನು ಹಳ್ಳಕ್ಕೆ ಹಾಕುವ ಮೂಲಕ ನಗರದಲ್ಲಿ ಅನೈರ್ಮಲ್ಯಕ್ಕೆ ಕಾರಣವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಎಡದಂಡೆ ಕಾಲುವೆಯಲ್ಲಿ ನೀರು ಹರಿಯದ ಕಾರಣ ಹಳ್ಳ ಇನ್ನಷ್ಟು ಹಾಳಾಗಿದೆ. ನಗರದ ಮಧ್ಯದಲ್ಲಿರುವ ಹಳ್ಳ ಅನೈರ್ಮಲ್ಯದಿಂದ ಕೂಡಿದ್ದರೆ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮವಾಗುವ ಸಂದರ್ಭವನ್ನರಿತ ಸಮಾನ ಮನಸ್ಕರು ನಮ್ಮ ಹಳ್ಳ ನಮ್ಮ ಊರು ಸಂಘಟನೆಯಡಿ ಕಳೆದ 15 ದಿನಗಳಿಂದ ಹಳ್ಳದಲ್ಲಿರುವ ಪ್ಲಾಸ್ಟಿಕ್ ಸಂಗ್ರಹ ಮಾಡಿದ್ದಾರೆ. ಹಳ್ಳದಲ್ಲಿ ಹರಡಿದ್ದ ಗಲೀಜು ನೀರನ್ನು ಒಂದೇ ಕಡೆ ಹರಿಯುವಂತೆ ಮಾಡಿದ್ದಾರೆ. ಇದರಿಂದ ಇಡೀ ಹಳ್ಳ ಒಣಗಿ ಅನಗತ್ಯ ವಸ್ತುಗಳನ್ನು ತೆಗೆದುಹಾಕಲು ನೆರವಾಗಿದೆ. ಹಳ್ಳ ಸಂಪೂರ್ಣ ಒಣಗಿದ ನಂತರ ಜೆಸಿಬಿ ಮೂಲಕ ಹೂಳು ತೆಗೆದು ಎರಡು ಬದಿಯಲ್ಲಿ ವೈಜ್ಞಾನಿಕವಾಗಿ ಗೋಡೆ ನಿರ್ಮಿಸುವ ಯೋಚನೆ ಇದೆ.
ಅಮೃತ್ ಸಿಟಿ ಕಾಮಗಾರಿ: ನಗರಕ್ಕೆ ಮಂಜೂರಾಗಿರುವ ಕೇಂದ್ರ ಸರಕಾರದ ಅಮೃತ್ ಸಿಟಿ ಯೋಜನೆಯಡಿ ದುರುಗಮ್ಮನಹಳ್ಳ ಸ್ವಚ್ಛತೆ ಹಾಗೂ ಎರಡು ಕಡೆ ತಡೆ ಗೋಡೆ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ಅವೈಜ್ಞಾನಿಕವಾಗಿದೆ. ಹಳ್ಳದ ನೀರು ಸರಾಗವಾಗಿ ಹರಿದು ಹೋಗಲು ಮತ್ತು ಚರಂಡಿ ನೀರು ಸೇರದಂತೆ ತಡೆಯಲು ಗೋಡೆ ನಿರ್ಮಿಸುವಂತೆ ದುರುಗಮ್ಮನಹಳ್ಳ ಸ್ವಚ್ಛತಾ ಅಭಿಯಾನದ ಕಾರ್ಯಕರ್ತರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸ್ಥಳಕ್ಕೆ ಭೇಟಿ ನೀಡಿ ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಲು ನೀಲನಕ್ಷೆ ಪುನರ್ ರಚನೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಮನುಷ್ಯನ ಜೀವನಕ್ಕೆ ಜಲ ಅತ್ಯಂತ ಮಹತ್ವವಾಗಿದೆ. ನದಿ, ಹಳ್ಳಗಳ ಸ್ವಚ್ಛತೆ ಹಾಗೂ ಸಂರಕ್ಷಣೆ ಎಲ್ಲರ ಹೊಣೆ. ಗಂಗಾವತಿ ಮದ್ಯದಲ್ಲಿ ಹರಿಯುವ ದುರುಗಮ್ಮನಹಳ್ಳ ನಗರದ ಜನರ ಜತೆ ಅವಿನಾಭಾವ ಸಂಬಂಧ ಹೊಂದಿದೆ. ಚರಂಡಿ ನೀರು ಹರಿಸುವ ಮೂಲಕ ಇಡೀ ಹಳ್ಳ ಮಲಿನ ಮಾಡಲಾಗಿದೆ. ಹಳ್ಳದ ಸ್ವಚ್ಛತೆ ಕಾರ್ಯಕ್ಕೆ ಜನರು ಕೈಜೋಡಿಸಿದ್ದು, ಸಂತೋಷದ ಸಂಗತಿ. ನಗರಸಭೆ ಸಂಪೂರ್ಣ ಸಹಕಾರ ನೀಡಲಿದ್ದು, ತಾವು ಸಹ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕೈ ಜೋಡಿಸುತ್ತೇನೆ-ಸಿ.ಡಿ. ಗೀತಾ, ಸಹಾಯಕ ಆಯುಕ್ತೆ
•ಕೆ.ನಿಂಗಜ್ಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ