ಬಿಸಿಲ ನಾಡಲ್ಲಿ ಮಲೆನಾಡಿನ ಬೆಳೆಗಳು

ದೇವೇಂದ್ರಪ್ಪ ಬಳೂಟಗಿ ಹೊಸ ಪ್ರಯೋಗ ; ದಾಳಿಂಬೆ ಬೆಳೆದು ಕೈ ಸುಟ್ಟುಕೊಂಡಿದ್ದ ಪ್ರಗತಿಪರ ಕೃಷಿಕ

Team Udayavani, Oct 7, 2022, 4:11 PM IST

24

ಕುಷ್ಟಗಿ: ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರು, ಬಿಸಿಲ ನಾಡು ಕುಷ್ಟಗಿ ಈ ಭಾಗಕ್ಕೆ ಮಲೆನಾಡಿನ ಪ್ರಮುಖ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಲು ಮುಂದಾಗಿದ್ದಾರೆ.

ಈ ಭಾಗ ಮೊದಲೇ ಬಿಸಿಲು ಹೆಚ್ಚು ಮಳೆ ಕಡಿಮೆ ಹೀಗಾಗಿ ಈ ಪ್ರದೇಶಕ್ಕೆ ಒಗ್ಗುವ ಬೆಳೆಗಳನ್ನು ಬೆಳೆಯುವುದು ಈ ಭಾಗದಲ್ಲಿ ಕಾಣಬಹುದು. ಮಲೆನಾಡಿನಲ್ಲಿ ಅಧಿಕ ಮಳೆ, ಕಾಡು ಹೆಚ್ಚು ಹೀಗಾಗಿ ಕಾಫಿ, ಏಲಕ್ಕಿ, ಲವಂಗ, ಅಡಿಕೆ, ಮೆಣಸು ಇತ್ಯಾದಿ ಬೆಳೆಗಳು ಸಹಜವಾಗಿ ಬೆಳೆಯುತ್ತಿವೆ. ಮಲೆನಾಡಿನ ಸೀಮಿತ ಬೆಳೆಗಳನ್ನು ಈ ಪ್ರದೇಶದಲ್ಲಿ ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ವಜ್ರಬಂಡಿ ಕ್ರಾಸ್‌ನಲ್ಲಿರುವ ನಿಡಶೇಸಿ ಕೆರೆಯ ಹತ್ತಿರ ಬ್ಯಾಲಿಹಾಳ ಸೀಮಾದಲ್ಲಿ ದಾಳಿಂಬೆಗಾಗಿ 1985ರಲ್ಲಿ 30 ಎಕರೆ ಜಮೀನು ಖರೀ ದಿಸಿದ್ದರು. ಅಂತರ್ಜಲ ಆಧಾರಿತವಾಗಿ 2007ರವರೆಗೆ ಅಂತಾರಾಷ್ಟ್ರೀಯ ರಫ್ತು ಗುಣಮಟ್ಟದ ದಾಳಿಂಬೆಯಲ್ಲಿ ಉತ್ತಮ ಆದಾಯವಾಗಿತ್ತು.

ಆದರೆ 2009ರಲ್ಲಿ ವಿಪರೀತ ಅತಿವೃಷ್ಟಿ, ದುಂಡಾಣು ಅಂಗಮಾರಿ ರೋಗದ ವ್ಯಾಪಕ ಹಾವಳಿ ಹಿನ್ನೆಲೆಯಲ್ಲಿ ದಾಳಿಂಬೆ ಸಂಪೂರ್ಣ ನಷ್ಟವಾಯಿತು. ದಾಳಿಂಬೆ ಎಂದರೆ ಓಸಿ (ಮಟ್ಕಾ) ಕಂಪನಿಯಂತೆ ಎಂಬಂತಾಗಿತ್ತು. ನಂತರ ಸಮಗ್ರ ಕೃಷಿಯತ್ತ ಗಮನ ಕೇಂದ್ರೀಕರಿಸಿದ್ದರಿಂದ ಕಳೆದ 12 ವರ್ಷಗಳಲ್ಲಿ ಈ ಪ್ರದೇಶದ ಸಸ್ಯ ವೈವಿದ್ಯತೆಯಿಂದ ತೋಟದ ಚಿತ್ರಣ ಬದಲಾಗಿದೆ.

ಈಗಾಗಲೇ 8 ಸಾವಿರ ಶ್ರೀಗಂಧ, 6 ಸಾವಿರ ರಕ್ತ ಚಂದನ, 600 ಮಾವು, 500 ಚಿಕ್ಕು, 3 ಸಾವಿರ ತೇಗ, ನೇರಳೆ ಇತ್ಯಾ ದಿ ಬೆಳೆದು ಈ ಪ್ರದೇಶವನ್ನು ಅರಣ್ಯವಾಗಿ ಪರಿವರ್ತಿಸಿದ್ದಾರೆ. ಇದರಲ್ಲಿಯೇ ಮಲೆನಾಡಿನ ಪ್ರಮುಖ ಬೆಳೆಗಳಾದ ಕಾಫಿ, ಏಲಕ್ಕಿ, ಲವಂಗ ಅಡಿಕೆ, ಮೆಣಸು, ಬಟರ್‌ ಫ್ರೂಟ್‌ (ಬೆಣ್ಣೆ ಹಣ್ಣು) ಪ್ರಾಯೋಗಿಕವಾಗಿ ಬೆಳೆಸಿದ್ದಾರೆ.

ಈ ಪ್ರದೇಶದಲ್ಲಿ ಎಲೆಬಳ್ಳಿ ಚನ್ನಾಗಿ ಬೆಳೆಯುತ್ತದೆ, ಮೆಣಸು ಯಾಕೆ ಬೆಳೆಯುವುದಿಲ್ಲ ಎಂದು 4 ಎಕೆರೆಯಲ್ಲಿ ಪ್ರತಿ ತೇಗದ ಗಿಡಕ್ಕೆ ಮೆಣಸು ಬಳ್ಳಿ ಹಬ್ಬಿಸಲಾಗಿದೆ. ಈ ಎಲ್ಲ ಬೆಳೆಗಳನ್ನು ಸಾವಯವ ಆಧಾರಿತವಾಗಿ ಶೂನ್ಯ ನಿರ್ವಹಣೆಯಲ್ಲಿ ಬೆಳೆಯಲಾಗಿದೆ.

ಈ ಬೆಳೆ ಅಲ್ಲದೇ ನುಗ್ಗೆ, ನೋನಿ, ಕರಿಬೇವು, ನೆಲ್ಲಿ, ಎಲೆಬಳ್ಳಿ, ರೇಷ್ಮೇ ಅಲ್ಲದೇ ಕೆಲವು ಔಷಧೀಯ ಬೆಳೆ ಬೆಳೆಯಲಾಗಿದೆ. ಈ ಬೆಳೆಗಳು ಆದಾಯ ತರುವ ಬೆಳೆಗಳಾಗಿದ್ದು, ಮಾಸಿಕವಾಗಿ ಎನಿಲ್ಲವೆಂದರೂ ಎಕರೆಗೆ 1 ಲಕ್ಷ ರೂ. ಆದಾಯ ನಿರೀಕ್ಷಿಸಬಹುದಾಗಿದೆ. ತೇಗ, ಶ್ರೀಗಂಧ, ರಕ್ತ ಚಂದನ ದೀರ್ಘಾವಧಿ ಬೆಳೆಗಳ ನಿಶ್ಚಿತ ಠೇವಣಿ ಇದ್ದಂತೆ. ಆಯಾ ಋತುವಿನಲ್ಲಿ ಉಳಿದ ಬೆಳೆಗಳಿಂದ ಆದಾಯ ನಿರೀಕ್ಷಿಸಬಹುದಾಗಿದ್ದು, ಕೃಷಿಯಿಂದ ವಿಮುಖರಾಗುವ ಈ ಸಂದರ್ಭದಲ್ಲಿ ಸಾವಯವ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಒಬ್ಬ ವ್ಯಕ್ತಿಯಿಂದ ನಿರ್ವಹಣೆ ಸಾಧ್ಯ ಎನ್ನುತ್ತಾರೆ ದೇವೇಂದ್ರಪ್ಪ ಬಳೂಟಗಿ.

ಕುಷ್ಟಗಿಯ ದೇವೇಂದ್ರಪ್ಪ ಬಳೂಟಗಿ ಅವರ ತೋಟಕ್ಕೆ ಹೋಗಿದ್ದೆ. ಅವರ ತೋಟದ ಮಣ್ಣಿನಲ್ಲಿ ಯಾವ ಬೀಜ ಹಾಕಿದರೂ ಬೆಳೆಯುತ್ತದೆ. ಅಷ್ಟೊಂದು ಫಲವತ್ತತೆಯಿಂದ ಕೂಡಿದೆ. ಸಾವಯವ ಕೃಷಿ ಆಧಾರಿತ ಸಮಗ್ರ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚಲಿದ್ದು, ಭೂಮಿ ಶ್ರೀಮಂತವಾಗಲಿದೆ. –ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಶ್ರೀಕ್ಷೇತ್ರ ಸಿದ್ದಗಿರಿ ಮಹಾಸಂಸ್ಥಾನ ಕನ್ಹೇರಿ ಕೊಲ್ಲಾಪುರ

-ಮಂಜುನಾಥ ಮಹಾಲಿಂಗಪುರ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.