ಮಳೆ ನೀರು ಇಂಗಿಸಲು ಚೆಕ್ಡ್ಯಾಂ ಅಗತ್ಯ
Team Udayavani, May 10, 2020, 3:50 PM IST
ಕುಕನೂರು: ಮಳೆ ನೀರು ಇಂಗಿಸುವಲ್ಲಿ ಸಹಕಾರಿಯಾಗುವ ಚೆಕ್ಡ್ಯಾಂಗಳು ರೈತರಿಗೆ ಪರೋಕ್ಷವಾಗಿ ಸಹಕಾರಿಯಾಗಿವೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.ತಾಲೂಕಿನ ಕುಕನೂರು ಹೋಬಳಿಯ ಬಳಗೇರ, ಬೂದಗುಂಪಾ ಹಾಗೂ ಚಿಕ್ಕಬಿಡನಾಳ ಗ್ರಾಮಗಳ ಹಳ್ಳಗಳಿಗೆ ತಲಾ 2 ಕೋಟಿ ವೆಚ್ಚದ ಚೆಕ್ಡ್ಯಾಂ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಚೆಕ್ಡ್ಯಾಂ ನಿರ್ಮಾಣ ಮಾಡುತ್ತಿರುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ಕುಕನೂರು, ಯಲಬುರ್ಗಾ ತಾಲೂಕುಗಳು ಒಣ ಬೇಸಾಯ ಭೂಮಿಯಾಗಿದ್ದು, ಮಳೆಗಾಲ ಇರುವುದರಿಂದ ಮುಂದಿನ ದಿನಮಾನಗಳಲ್ಲಿ ಚೆಕ್ಡ್ಯಾಂಗಳಿಂದ ಉಪಯೋಗವಾಗುವುದಕ್ಕಾಗಿ ಈ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಕೃಷ್ಣಾ ಬಿ ಸ್ಕೀಂ ಯೋಜನೆಗೆ 1726 ಕೊಟಿ ರೂ. ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲಾಗಿದೆ. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಕೆರೆಗಳಿಗೆ ನೀರು ಬಿಡುವ ಕಾರ್ಯ ಮಾಡಲಾಗುವುದು ಎಂದರು.
ಸಂದರ್ಭದಲ್ಲಿ ತಾಪಂ ಅಧ್ಯಕ್ಷೇ ಲಕ್ಷ್ಮೀ ದ್ಯಾಮಣ್ಣ ಗೌಡ್ರು, ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ರಾಮಣ್ಣ ಹೊಸಮನಿ, ಪಪಂ ಸದಸ್ಯ ಶಂಭು ಜೋಳದ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ನಾಗಲಾಪುರಮಠ, ರತನ್ ದೇಸಾಯಿ, ಕೊಟ್ರಪ್ಪ ಮುತ್ತಾಳ ಹಾಗೂ ಪಿಎಸ್ಐ ಎನ್. ವೆಂಕಟೇಶ ಹಾಗೂ ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ