ಜುಮಲಾಪೂರ ಸುತ್ತಮುತ್ತ ಭಾರಿ ಮಳೆ
•ಮಂದಹಾಸ ತಂದ ವರುಣ•ತುಂಬಿ ಹರಿದ ಹಳ್ಳ-ಕೊಳ್ಳ•ಹಳ್ಳದಲ್ಲಿ ಕೊಚ್ಚಿ ಹೋಗಿ ಹಸು ಸಾವು
Team Udayavani, Jun 24, 2019, 10:27 AM IST
ದೋಟಿಹಾಳ: ಜುಮಲಾಪುರ ಗ್ರಾಮ ರವಿವಾರ ಸುರಿದ ಮಳೆಯಿಂದಾಗಿ ಜಲಾವೃತಗೊಂಡಿದೆ.
ದೋಟಿಹಾಳ: ಜುಮಲಾಪೂರ ಗ್ರಾಮದ ಸುತ್ತಮುತ್ತ ರವಿವಾರ ಮಳೆ ಉತ್ತಮವಾಗಿದ್ದು, ರೈತರ ಸಂತಸವನ್ನು ಇಮ್ಮಡಿಗೊಳಿಸಿದೆ. ಬೀತನೆ ಮಾಡಿದ ರೈತರು ಈ ಮಳೆ ಸುರಿದ ಕಾರಣ ಹರ್ಷಗೊಂಡಿದ್ದಾರೆ. ಮಳೆಯಿಂದ ಗ್ರಾಮದ ಪಕ್ಕದಲ್ಲಿರುವ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.
ಮಳೆಯಿಂದ ಕೆಲವು ಕಡೆಗಳಲ್ಲಿ ಆರ್ಭಟಿಸಿದ್ದು, ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಜುಮಲಾಪೂರ ಗ್ರಾಮದ ಅಂಬಣ್ಣ ದಂಡಿನ ಎನ್ನುವವರ ಆಕಳು ಹಳ್ಳದಲ್ಲಿ ಕೊಚ್ಚಿಕೊಂಡು ಹೊಗಿ ಮೃತಪಟ್ಟಿದೆ. ಆಕಳನ್ನು ರಕ್ಷಿಸಲು ಗ್ರಾಮದ ಯುವಕರ ಪ್ರಯತ್ನ ಪಟ್ಟರೂ ಪ್ರಯೋಜನವಾಗಲಿಲ್ಲ.
ಜುಮಲಾಪೂರ ಗ್ರಾಮದ ಸುತ್ತ ಹಳ್ಳ ಇದೆ. ಗ್ರಾಮದಲ್ಲಿ ಹಳ್ಳಗಳಿಗೆ ಸೂಕ್ತ ಮೇಲ್ಸೆತುವೆ ಹಾಗೂ ಸಾರ್ವಜನಿಕರು ಸುಗಮ ಸಂಚಾರಕ್ಕೆ ರಸ್ತೆಗಳಿಲ್ಲ. ಹೀಗಾಗಿ ಇಲ್ಲಿಯ ಜನರು ಮಳೆಯ ಆರ್ಭಟದಿಂದ ಕೆಲವು ಗಂಟೆಗಳ ಕಾಲ ಜಲ ದಿಗ್ಬಂಧನ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಮೇಲ್ಸೆತುವೆ ಹಾಗೂ ಉತ್ತಮ ರಸ್ತೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಹಲವು ಭಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲಿಸಿದ್ದು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದಾಗ ಗ್ರಾಮಕ್ಕೆ ಆಗಮಿಸುವ ಮಹಿಳೆಯರು ಮತ್ತು ವೃದ್ಧರ ಪಾಡು ಹೇಳತೀರದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್